ನಿಮಗೇನಾದರೂ ವಿಪರೀತವಾಗಿ ಮಲಬದ್ಧತೆ ಸಮಸ್ಯೆ ಕಾಡುತ್ತಿದೆ ಮತ್ತು ವಾಶ್ ರೂಮ್ ನಲ್ಲೇ ಹೆಚ್ಚು ಸಮಯ ಬೆಳಿಗ್ಗೆ ನಿತ್ಯ ಕರ್ಮಗಳನ್ನ ಮುಗಿಸುವುದಕ್ಕೆ ಆಗುತ್ತೆ ಅನ್ನೋದಾದರೆ ಇದೊಂದು ಪರಿಹಾರ ಪಾಲಿಸಿ ನೋಡಿ ಮತ್ತು ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಈ ಪದಾರ್ಥಗಳ ಈ ರೀತಿ ಬಳಕೆ ಮಾಡುತ್ತಾ ಬನ್ನಿ ಖಂಡಿತವಾಗಿಯೂ ಈ ದೊಡ್ಡ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು ಹೆಚ್ಚು ಖರ್ಚಿಲ್ಲದೆ ಮತ್ತು ಆರೋಗ್ಯವನ್ನು ವೃದ್ಧಿಸಿಕೊಳ್ಳುವ ಮೂಲಕ.
ಹೌದು ಹಲವರಿಗೆ ಈ ಮಲಬದ್ಧತೆ ಸಮಸ್ಯೆ ಕಾಡುತ್ತಾ ಇರುತ್ತದೆ ಮಕ್ಕಳು ಅನ್ನದೆ ಹಿರಿಯರು ಎನ್ನದೆ ಎಲ್ಲರಿಗೂ ಕಾಡುವ ಮಲಬದ್ಧತೆ ಸಮಸ್ಯೆ ಸಾಮಾನ್ಯವಾಗಿ ಆಹಾರದ ಬದಲಾವಣೆಯ ಕಾರಣದಿಂದ ಉಂಟಾಗುತ್ತದೆ ಈ ಸಮಸ್ಯೆ ಪರಿಹಾರಕ್ಕಾಗಿ ಹಲವರು ಪರಿಹಾರ ಮಾಡಿಕೊಂಡರೆ ಇನ್ನೂ ಹಲವರು ಅದನ್ನು ನಿರ್ಲಕ್ಷ್ಯ ಮಾಡ್ತಾರೆ ಆದರೆ ಪ್ರತೀ ದಿನ ನಿತ್ಯ ಕರ್ಮಗಳನ್ನು ಮುಗಿಸದೆ ಹೋದಾಗ ಅದು ದೇಹದ ಮೇಲೆ ಒತ್ತಡ ಉಂಟಾಗಿ ದಿನಪೂರ್ತಿ ಹಾಳು ಅಂತಾನೇ ಅರ್ಥ.
ಕೆಲವರನ್ನು ನೀವು ಗಮನಿಸಿರಬಹುದು ಪ್ರತಿದಿನ ಬೆಳಿಗ್ಗೆ ನಿತ್ಯಕರ್ಮಗಳನ್ನು ಮುಗಿಸದೆ ಹೋದಾಗ ಆ ದಿನ ಪೂರ್ತಿ ಅವರಿಗೆ ಯಾವ ಕೆಲಸ ಮಾಡಲು ಕೂಡ ಆಸಕ್ತಿಯೇ ಇರುವುದಿಲ್ಲ.ಹಾಗಾಗಿ ಈ ಮಲಬದ್ಧತೆ ಸಮಸ್ಯೆ ಎಂಬುದು ನಿಮ್ಮನ್ನು ಕಾಡುತ್ತಿದ್ದಲ್ಲಿ ಈ ಪದಾರ್ಥಗಳನ್ನು ಈ ವಿಧಾನದಲ್ಲಿ ಬಳಕೆ ಮಾಡುತ್ತಾ ಬಂದದ್ದೇ ಆದಲ್ಲಿ ಖಂಡಿತವಾಗಿಯೂ ನಿಮ್ಮ ಸಮಸ್ಯೆಗಳಿಗೆ ನೀವು ಬಹಳ ಬೇಗ ಪರಿಹಾರ ಕಂಡುಕೊಳ್ಳಬಹುದು.
ನಿತ್ಯ ಕರ್ಮಗಳನ್ನ ಪ್ರತಿದಿನ ಮುಗಿಸದೆ ಹೋದಾಗ ಅದುವೇ ಮಲಬದ್ಧತೆ ಹಾಗೆ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುತ್ತಾ ಬಂದರೆ ಏನಾಗಬಹುದು ಅನ್ನುವ ಊಹೆ ನಿಮಗಿದೆಯಾ?ಮುಖ್ಯವಾಗಿ ನಿಮ್ಮ ಮೆದುಳಿನ ಮೇಲೆ ಇದು ಪ್ರಭಾವ ಬೀರಿ ಹಾಗೂ ನಮ್ಮ ಜೀರ್ಣಕ್ರಿಯೆ ಸಂಪೂರ್ಣವಾಗಿ ಬದಲು ಮಾಡಿ ಮುಂದಿನ ದಿನಗಳಲ್ಲಿ ಬಹಳಷ್ಟು ಅನಾರೋಗ್ಯ ಸಮಸ್ಯೆಗಳನ್ನು ತರುವ ಸಾಧ್ಯತೆಯಿದೆ ಮಲಬದ್ಧತೆಯನ್ನು ನಿರ್ಲಕ್ಷ್ಯ ಮಾಡಿದಾಗ.
ಅದರೆ ಮಲಬದ್ಧತೆ ಎಂಬುದು ದೊಡ್ಡ ಸಮಸ್ಯೆಯೇನೂ ಅಲ್ಲ ಆದರೆ ಅದನ್ನು ನಿರ್ಲಕ್ಷ್ಯ ಮಾಡಿದಾಗ ಮಾತ್ರ ಬಹಳಷ್ಟು ತೊಂದರೆಗಳನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗಿರುತ್ತದೆ.ಅಂದಿನ ಕಾಲದಲ್ಲಿ ಉಷಾ ಪಾನ ಎಂಬ ಪದ್ದತಿಯನ್ನ ಬೆಳಿಗ್ಗೆ ಎದ್ದಕೂಡಲೇ ಪಾಲಿಸುತ್ತಿದ್ದರೂ ಹಿರಿಯರು ಯಾಕೆ ಅಂದರೆ ಈ ಉಷಾ ಪಾದಯಾತ್ರೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ಹೆಚ್ಚು ನೀರು ಕುಡಿಯುವುದು ಕನಿಷ್ಠ ಪಕ್ಷ 250 ಮಿಲಿ ಲೀಟರ್ ನೀರು ಕುಡಿಯುವುದರಿಂದ ಹೊಟ್ಟೆಯನ್ನು ಸ್ವಚ್ಛ ಮಾಡುತ್ತ ಮತ್ತು ಕರುಳನ್ನೂ ಸ್ವಚ್ಛ ಮಾಡುತ್ತದೆ ಎಂಬ ಕಾರಣಕ್ಕಾಗಿ.
ಹಾಗಾಗಿ ಎಂಬುದು ಬೆಳಿಗ್ಗೆ ಎದ್ದ ಕೂಡಲೇ ಮಾಡಬೇಕಾದ ಆಹಾರ ಪದ್ದತಿಯ ಮೊದಲ ಕ್ರಮ ಆಗಿರುತ್ತದೆ ಬೆಳೆಗೆ ನಿತ್ಯಕರ್ಮಗಳು ಸರಿಯಾಗಿ ಮುಗಿಸಿದರೆ ಸರಿಯಾದ ಸಮಯಕ್ಕೆ ಹಸಿವಾಗುವುದು ಹಾಗು ನಾವು ತಿಂದ ಬೇಕಾದಷ್ಟು ಆಹಾರವನ್ನು ತಿಂದು ನಮ್ಮ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.
ಈ ಮಲಬದ್ಧತೆ ನಿವಾರಣೆಗೆ ನಿಮ್ಮ ಮನೆಯಲ್ಲಿರುವ ಸೋಂಪಿನ ಕಾಳು ಓಮಿನಕಾಳು ಮತ್ತು ಜೀರಿಗೆ ಪರಿಹಾರ ನೀಡುತ್ತದೆ, ಹೇಗೆಂದರೆ ಸಮಪ್ರಮಾಣದಲ್ಲಿ ಈ ಪದಾರ್ಥಗಳನ್ನು ತೆಗೆದುಕೊಂಡು ಹುರಿದು ಪುಡಿಮಾಡಿಟ್ಟುಕೊಳ್ಳಿ. ಪ್ರತಿದಿನ ಬೆಳಿಗ್ಗೆ ಈ ಪುಡಿಯನ್ನು ಖಾಲಿ ಹೊಟ್ಟೆಗೆ ಸೇವಿಸಿ 250ಮಿಲಿ ಲೀಟರ್ ನೀರನ್ನು ಕುಡಿಯಿರಿ ಇದರಿಂದ ಮಲಬದ್ಧತೆ ಎಂಬುದು ನಿವಾರಣೆಯಾಗುತ್ತೆ.ಅಷ್ಟೇ ಅಲ್ಲ ಜೀರ್ಣಕ್ರಿಯೆ ಉತ್ತಮವಾಗಿ ನಡೆದು ಕರುಳಿನ ಸ್ವಚ್ಚತೆ ಕೂಡ ಇದರಿಂದ ಸಾಧ್ಯ! ಹಾಗಾಗಿ ಈ ಸರಳ ಪರಿಹಾರ ಪಾಲಿಸಿ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ಪಡೆದುಕೊಳ್ಳಿ ಧನ್ಯವಾದ.
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
This website uses cookies.