ಗ್ಯಾಸ್ಟ್ರಿಕ್ ಸಮಸ್ಯೆ ವಿಪರೀತ ಕಾಡುತ್ತಿದ್ದರೆ ಅದಕ್ಕೆ ಮಾಡಿ ಆಯುರ್ವೇದ ಪದ್ಧತಿ ಹೌದು ಆಯುರ್ವೇದದಲ್ಲಿ ತಿಳಿಸಲಾಗಿದೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಸರಳ ಮನೆ ಮತ್ತು ಈ ವಿಧಾನವನ್ನು ಅಂದಿನ ಕಾಲದಲ್ಲಿ ಅಜೀರ್ಣವಾದಾಗ ಪಾಲಿಸುತ್ತಿದ್ದರು.ಈಗ ಬೇಡದಿರುವ ಮಾತ್ರೆಗಳನ್ನು ಟಾನಿಕ್ ಗಳನ್ನು ಇನ್ಯಾವುದೋ ಜ್ಯೂಸ್ ಗಳನ್ನು ಸೇವಿಸುತ್ತಾ ಅಜೀರ್ಣತೆಯಿಂದ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ಮುಂದಾಗುತ್ತಾರೆ ಜನರು ಆದರೆ ಈ ದಿನದ ಲೇಖನದಲ್ಲಿ ನಾವು ತಿಳಿಸಲಿರುವ ಈ ಮನೆಮದ್ದನ್ನು ಮನೆಯಲ್ಲಿಯೇ ಕೂಡಲೇ ಮಾಡಿ ಕುಡಿಯಬಹುದು ಹಾಗೂ ನಿಮಗೆ ಆ ಕ್ಷಣಕ್ಕೆ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಯಿಂದ ಶಮನ ದೊರೆಯುತ್ತದೆ.
ಹಾಗಾದರೆ ಬನ್ನಿ ಮನೆಮದ್ದು ಕುರಿತು ತಿಳಿಯೋಣ ನಿಮಗೂ ಕೂಡ ಗ್ಯಾಸ್ಟ್ರಿಕ್ ಸಮಸ್ಯೆ ಆಗಾಗ ಕಾಡುತ್ತದೆ ಅಂದರೆ ಅದಕ್ಕೆ ಮಾತ್ರೆ ತೆಗೆದುಕೊಳ್ಳುವ ರೂಢಿ ಮಾಡಿಕೊಳ್ಳಬೇಡಿ ಅದರ ಬದಲಾಗಿ ಮಾಡಿ ಇಂತಹ ಮನೆಮದ್ದು, ಪಡೆದುಕೊಳ್ಳಿ ತಕ್ಷಣವೇ ಉಪಶಮನ.
ಹೌದು ಸಾಮಾನ್ಯವಾಗಿ ಆಹಾರದಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳ ಉದಾಹರಣೆಗೆ ಅಜ್ವಾನ ಸೋಂಕು ಅಥವಾ ಜೀರಿಗೆ ಇವುಗಳು ಜೀರ್ಣಶಕ್ತಿಯನ್ನು ವೃದ್ಧಿ ಮಾಡುತ್ತದೆ ಆದರೆ ಕೆಲವರು ಇಂತಹ ಕೆಲವೊಂದು ಆಹಾರ ಪದಾರ್ಥ ವನ್ನು ಹೆಚ್ಚಾಗಿ ಅಡುಗೆಯಲ್ಲಿ ಬಳಸುವುದಿಲ್ಲ. ಆದರೆ ಈ ಕೆಲವೊಂದು ಪದಾರ್ಥಗಳು ಆಹಾರದಲ್ಲಿದ್ದರೆ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ ಜೊತೆಗೆ ಆಹಾರ ಬೇಗ ಜೀರ್ಣವಾಗುತ್ತದೆ.
ಊಟದ ಬಳಿಕ ಸೋಂಪನ್ನೂ ತಿನ್ನುವುದರಿಂದ ಕೂಡ ಜೀರ್ಣಶಕ್ತಿ ಬೇಗ ಆಗುತ್ತದೆ ಮತ್ತು ಯಾವುದೇ ಕಾರಣಕ್ಕೂ ಅಜೀರ್ಣದಂತಹ ಸಮಸ್ಯೆ ಬರುವುದಿಲ್ಲ.ಮತ್ತೊಂದು ಉತ್ತಮ ಪರಿಹಾರವೇನೆಂದರೆ ವಿಪರೀತ ಹೊಟ್ಟೆ ಉಬ್ಬರಿಸಿದಂತಾಗುತ್ತದೆ ಜೀರ್ಣ ಆಗಿಲ್ಲ ತಿಂದ ಆಹಾರ ಜೀರ್ಣವಾಗುವುದಿಲ್ಲ ಹೊಟ್ಟೆ ಹಸಿವಾಗುತ್ತದೆ, ಆದರೆ ತಕ್ಷಣವೇ ಈ ಪರಿಹಾರ ಮಾಡಿಕೊಳ್ಳಿ. ಬೆಚ್ಚಗಿನ ನೀರಿಗೆ ಸ್ವಲ್ಪ ಇಂಗನ್ನು ಮಿಶ್ರ ಮಾಡಿ ಕುಡಿದರೆ ತಕ್ಷಣವೇ ತೇಗು ಬರುತ್ತದೆ ಮತ್ತು ಹಸಿವಾಗುತ್ತದೆ ಹಾಗೂ ಗ್ಯಾಸ್ ಸಮಸ್ಯೆ ಇದ್ದರೆ ಅದು ಕೂಡ ಪರಿಹಾರವಾಗಿ ಹೊಟ್ಟೆ ಉಬ್ಬರ ನಿವಾರಣೆಯಾಗುತ್ತದೆ.
ಈಗ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗೆ ಮನೆಯಲ್ಲಿಯೇ ಮಾಡಬಹುದಾದ ಆ ಪ್ರಭಾವಶಾಲಿಯಾದ ಮನೆಮದ್ದು ಯಾವುದು ಅಂತ ತಿಳಿಯೋಣ ಬನ್ನಿ ಅದಕ್ಕಾಗಿ ಬೇಕಾಗಿರುವುದು ಜೀರಿಗೆ ನಿಂಬೆ ರಸ ನೀರು ಮತ್ತು ಜೇನುತುಪ್ಪ.ಮೊದಲಿಗೆ ನೀರನ್ನ ಕುದಿಸಿಕೊಳ್ಳಬೇಕು ನೀರು ಕುದಿಯುವಾಗ ಅದಕ್ಕೆ ಜೀರಿಗೆಯನ್ನು ಸ್ವಲ್ಪವೇ ಸ್ವಲ್ಪ ಪುಡಿ ಮಾಡಿ ಆ ನೀರಿಗೆ ಹಾಕಿ ನೀರನ್ನು ಕುದಿಸಿ ಕೊಳ್ಳಬೇಕು ನೀರಿನ ಬಣ್ಣ ಬದಲಾದ ಮೇಲೆ ಕುದಿಯುತ್ತಿರುವ ನೀರು ಆಫ್ ಮಾಡಿ ಬಳಿಕ ಆ ನೀರನ್ನು ಹಾಗೆಯೇ ಕುಡಿಯಬೇಕು, ಕಡಿಯುವ ಮುನ್ನ ಅರ್ಧ ಚಮಚದಷ್ಟು ನಿಂಬೆರಸ ಮತ್ತು ಕಾಲು ಚಮಚದಷ್ಟು ಜೇನುತುಪ್ಪವನ್ನು ಅರ್ಧಲೋಟ ನೀರಿಗೆ ಮಿಶ್ರಣ ಮಾಡಿ, ಅದನ್ನು ಅಂದರೆ ಆ ನೀರು ಸ್ವಲ್ಪ ಬಿಸಿ ಇರುವಾಗಲೇ ಕುಡಿದುಬಿಡಿ.
ಈ ರೀತಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾದಾಗ ಅಥವಾ ಅಜೀರ್ಣ ತೇಗು ಬರುತ್ತಿದ್ದ ಹುಳಿ ತೇಗು ಬರುತ್ತದೆ ಎದೆ ಉರಿ ಹೊಟ್ಟೆ ಉರಿಯುತ್ತಿದೆ ಕಿಬ್ಬೊಟ್ಟೆ ನೋವು ಅನ್ನುವ ಸಮಸ್ಯೆಗಳು ಕಾಡಿದಾಗ ಈ ಸರಳ ಉಪಾಯ ಮಾಡಿ ಮತ್ತು ಇಂತಹ ತೊಂದರೆ ಎಲ್ಲಾ ಬಹಳ ಬೇಗ ಪರಿಹಾರವಾಗುತ್ತದೆ
ಈ ಸರಳ ವಿಧಾನ ಪಾಲಿಸಿ ಹೊಟ್ಟೆ ಉಬ್ಬರದಂತಹ ಸಮಸ್ಯೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಿ ಜೊತೆಗೆ ಈ ಮನೆ ಮದ್ದು ಪಾಲಿಸುವುದರಿಂದ ಜೀರ್ಣಶಕ್ತಿ ಕೂಡ ವೃದ್ಧಿಸುತ್ತದೆ ಕರುಳು ಸಂಬಂಧಿ ತೊಂದರೆಗಳು ಕೂಡ ಪರಿಹಾರವಾಗುತ್ತೆ ಹೊಟ್ಟೆ ಸಹ ಕ್ಲೀನ್ ಆಗುತ್ತೆ.
Hanumantu ಅಚ್ಚರಿಯ ಟ್ವಿಸ್ಟ್ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
This website uses cookies.