ಸಣ್ಣಗಾಗಲು ಬಯಸುವವರು ಈ ಒಂದು ಉತ್ತಮವಾದ ಡಯಟ್ ಪ್ಲಾನ್ ಅನ್ನು ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಿ ಸುಲಭವಾಗಿ ಈ ಒಂದು ಡಯೆಟ್ ಅನ್ನು ನೀವು ಮಾಡಬಹುದು, ಇದನ್ನು ಡಯೆಟ್ ಅಂತ ಏನೂ ಹೇಳುವುದಿಲ್ಲ, ನಮ್ಮ ಆಹಾರ ಪದ್ಧತಿ ಅಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಿಕೊಳ್ಳುವುದರಿಂದ ಸುಲಭವಾಗಿ ತೆಳ್ಳಗಾಗಬಹುದು .
ಮತ್ತು ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೆ ಇರುವ ದೇಹದ ತೂಕವನ್ನು ಕೂಡ ಸಮತೋಲನದಲ್ಲಿ ಕಾಪಾಡಿಕೊಂಡು ಹೋಗಬಹುದು. ಹಾಗಾದರೆ ನಾವು ಪಾಲಿಸಬೇಕಿರುವ ಕೆಲವೊಂದು ಆಹಾರ ಪದ್ಧತಿಯೂ ಯಾವುದು ಹಾಗೆ ಯಾವ ಸಮಯದಲ್ಲಿ ಎಷ್ಟು ಆಹಾರವನ್ನು ಸೇವಿಸಬೇಕು, ಅನ್ನೋದನ್ನ ತಿಳಿಯೋಣ ಈ ಮಾಹಿತಿಯಲ್ಲಿ.
ಯಾರೇ ಆಗಲಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬೇಕು ಅಂದರೆ ಪ್ರತಿದಿನ ಬೆಳಗ್ಗೆ ಉಷಾ ಪಾನದ ಪದ್ಧತಿಯನ್ನು ಪಾಲಿಸಬೇಕಾಗುತ್ತದೆ ಹೌದು ಬೆಳಿಗ್ಗೆ ಎದ್ದ ಕೂಡಲೇ ತಾಯಿಯನ್ನು ಸ್ವಚ್ಛ ಮಾಡದೆ ಬಿಸಿ ನೀರು ಅಥವಾ ತಣ್ಣೀರನ್ನೆ ಹೊಟ್ಟೆ ತುಂಬಾ ಸೇವಿಸಬೇಕು ಇದರಿಂದ ಬೆಳಕಿನ ಕಾರ್ಯಗಳು ಸುಗಮವಾಗಿ ಸಾಗುತ್ತದೆ ಮತ್ತು ಅಜೀರ್ಣತೆ ಕಾಡುವುದಿಲ್ಲ.
ನಂತರ ಬೆಳಗ್ಗೆ ಎದ್ದ ಬಳಿಕ ಒಂದಿಷ್ಟು ಎಕ್ಸಸೈಜ್ ಮಾಡುವುದು ಆರೋಗ್ಯಕ್ಕೆ ಉತ್ತಮ ಈ ಎಕ್ಸಸೈಸ್ ಮಾಡಿದ ಒಂದು ಗಂಟೆ ಒಳಗೆ ಬೆಳಗಿನ ಉಪಾಹಾರವನ್ನು ಸೇವಿಸಬೇಕು ಮತ್ತು ಈ ಬೆಳಗಿನ ಉಪಾಹಾರವನ್ನು ಹೇಗೆ ಸೇವಿಸಬೇಕು ಅಂದರೆ ಇದನ್ನು ಮೂರು ಭಾಗಗಳಾಗಿ ವಿಂಗಡಿಸಿಕೊಳ್ಳಬೇಕು, ಬೆಳಿಗ್ಗೆ ಉಪಾಹಾರ ಮಾಡಿದ ನಂತರ ಎರಡು ಗಂಟೆಗಳು ಬಿಟ್ಟು ಮತ್ತೊಮ್ಮೆ ಏನನ್ನಾದರೂ ಹೊಟ್ಟೆಗೆ ಸೇವಿಸಬೇಕು ಮತ್ತೆ ಎರಡು ಗಂಟೆಗಳ ನಂತರ ಹೊಟ್ಟೆಗೆ ಏನನ್ನಾದರೂ ಸೇವಿಸಬೇಕು ಈ ರೀತಿಯ ಆಹಾರ ಕ್ರಮವು ತೂಕವನ್ನು ಸಮತೋಲನದಲ್ಲಿ ಇರಿಸುತ್ತದೆ.
ಇನ್ನು ಮಧ್ಯಾಹ್ನದ ಸಮಯದಲ್ಲಿ ನಾವು ಅನ್ನವನ್ನು ಊಟ ಮಾಡುವ ಅಭ್ಯಾಸವನ್ನು ಹೊಂದಿರುತ್ತೇವೆ ಮಧ್ಯಾಹ್ನದ ಸಮಯದಲ್ಲಿ ಅನ್ನವನ್ನು ಊಟ ಮಾಡುವುದು ಉತ್ತಮ ಹಾಗೆ ಮಧ್ಯಾಹ್ನದ ಉಪಾಹಾರವನ್ನು ತೆಗೆದುಕೊಳ್ಳುವ ಸೂಕ್ತ ಸಮಯ ಒಂದು ಗಂಟೆ ಎರಡು ಗಂಟೆ ಆಗಿರುತ್ತದೆ ಈ ಸಮಯದಲ್ಲಿಯೇ ನಾವು ಮಧ್ಯಾಹ್ನದ ಉಪಹಾರವನ್ನು ಸೇವಿಸಬೇಕು ಮತ್ತೊಮ್ಮೆ ಮೂರು ಗಂಟೆಯಲ್ಲಿ ನಾವು ನೀರು ಮಜ್ಜಿಗೆಯನ್ನು ಕುಡಿಯಬೇಕು ಹಾಗೇ ಸಂಜೆ ಐದು ಗಂಟೆ ಅಥವಾ ಆರು ಗಂಟೆಗೆ ಯಾವುದೇ ಆದರೂ ಒಣ ಹಣ್ಣುಗಳನ್ನು ಸೇವಿಸಬೇಕು.
ರಾತ್ರಿ ಉಪಹಾರವನ್ನು ಏಳರಿಂದ ಎಂಟು ಗಂಟೆಗಳ ಒಳಗೆ ಸೇವಿಸಬೇಕು ಮತ್ತು ಮಲಗುವ ಅರ್ಧ ಗಂಟೆಯ ಮುನ್ನ ಒಂದು ಲೋಟ ನೀರನ್ನು ಕುಡಿದು ಮಲಗಬೇಕು. ರಾತ್ರಿ ಉಪಹಾರದಲ್ಲಿ ಹೆಚ್ಚಾಗಿ ನಾರಿನಾಂಶ ಇರುವಂತಹ ಆಹಾರವನ್ನು ತಿನ್ನುವುದು ಉತ್ತಮವಾಗಿರುತ್ತದೆ ಮತ್ತು ನಾವು ಡಯೆಟ್ ಮಾಡುತ್ತಾ ಇದ್ದೇವೆ ಅಂದರೆ ಹೆಚ್ಚು ಹಣ್ಣುಗಳನ್ನು ತರಕಾರಿಗಳನ್ನು ಸೇವಿಸಬೇಕು ಮತ್ತು ಯಾವ ತರಕಾರಿಗಳನ್ನು ಹಸಿಯಾಗಿ ಸೇವಿಸಬಹುದು ಅಂತಹ ತರಕಾರಿಗಳನ್ನು ಸೇವಿಸಿ.
ತೀರದಲ್ಲಿ ಕನಿಷ್ಠ ಪಕ್ಷ ಮೂರು ಲೀಟರ್ ನೀರನ್ನಾದರೂ ಕುಡಿಯಲೇಬೇಕು ಇದು ನಮ್ಮ ತೂಕವನ್ನು ಇಳಿಸಲು ಸಹಕಾರಿಯಾಗಿರುತ್ತದೆ, ರಾತ್ರಿ ಊಟವಾದ ಬಳಿಕ ವಾಕ್ ಮಾಡುವುದು ಉತ್ತಮ ಮತ್ತು ಮಧ್ಯಾಹ್ನ ಮತ್ತು ರಾತ್ರಿ ಉಪಹಾರದಲ್ಲಿ ಕ್ಯಾರೆಟ್ ಮತ್ತು ಸೌತೆಕಾಯಿಯನ್ನು ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಒಳ್ಳೆಯ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು.
ದಿನದ ಸಮಯದಲ್ಲಿ ಆಗಾಗ ಸೌತೆಕಾಯಿಯನ್ನು ಸೇವಿಸುವುದು ಒಳ್ಳೆಯ ಅಭ್ಯಾಸವಾಗಿರುತ್ತದೆ ಈ ಸೌತೆಕಾಯಿಯಲ್ಲಿ ಬೇಡದೆ ಇರುವ ಕೊಬ್ಬನ್ನು ಕರಗಿಸುವ ಶಕ್ತಿ ಇದೆ, ಆದ ಕಾರಣ ಈ ಸೌತೆಕಾಯಿಯನ್ನು ದಿನದಲ್ಲಿ ಕನಿಷ್ಠ ಪಕ್ಷ ಒಂದು ಸೌತೆಕಾಯಿಯನ್ನು ತಿನ್ನುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು.
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.