ಹೆಸರೇ ಹೇಳುವಂತೆ ಇದರ ಪ್ರಯೋಜನ ಮಾಡುವುದರಿಂದ ಬಲ ಹೆಚ್ಚುತ್ತದೆ ಹೌದು ರಾಮಾಯಣದಿಂದ ಮಹಾಭಾರತದ ವರೆಗೂ ಉಲ್ಲೇಖ ಗೊಂಡಿರುವಂತಹ ಈ ಸಸ್ಯದ ಪ್ರಯೋಜನಗಳ ಬಗ್ಗೆ ಕುರಿತು ಕೇಳಿದಾಗ ನೀವು ಖಂಡಿತ ಅಚ್ಚರಿ ಪಡ್ತೀರಿ ಹಾಗೂ ಇದರ ಪ್ರಯೋಜನವನ್ನು ಪಡೆದು ಕೊಳ್ಳಲು ಮುಂದಾಗುತ್ತೀರಾ ಹಾಗಾದರೆ ಬನ್ನಿ ಈ ಸಸ್ಯದ ಪ್ರಯೋಜನಗಳ ಕುರಿತು ತಿಳಿಯೋಣ ಇಂದಿನ ಲೇಖನದಲ್ಲಿ.
ಹೌದು ಪ್ರಕೃತಿಯಲ್ಲಿರುವ ಪ್ರತಿಯೊಂದು ಗಿಡ ಮರ ಬಳ್ಳಿಗಳು ಅದರದೇ ಆದ ವಿಶೇಷತೆಯಿದೆ ಹಾಗೂ ಆ ವಿಶೇಷತೆ ನಮ್ಮ ಆರೋಗ್ಯ ವೃದ್ಧಿಗೆ ಸಹಕಾರಿ ಅದೇ ರೀತಿ ಈ ಅತಿಬಲದ ಗಿಡದ ವಿಶೇಷತೆ ಕೂಡ.ಹೌದು ಅತಿಬಲದ ವಿಶೇಷತೆ ಕುರಿತು ಹೇಳುವುದಾದರೆ ಇದು ದೇಹಕ್ಕೆ ಬಲ ಕೊಡುತ್ತೆ ಹಾಗೂ ಜೀವನದಲ್ಲಿ ಯಾವುದೇ ಕಾರಣಕ್ಕೂ ಈ ಸ್ಟ್ರೋಕ್ ಅಂತ ಏನು ಹೇಳ್ತಾರೆ ಹೌದು ಲಕ್ವ ಹೊಡೆಯುವುದು ಪೈಲ್ಸ್ ಸಮಸ್ಯೆ ನರಗಳ ದೌರ್ಬಲ್ಯತೆ ಇಂತಹ ಇಲ್ಲ ದೊಡ್ಡ ದೊಡ್ಡ ಸಮಸ್ಯೆಗಳು ಬಾರದಿರುವ ಹಾಗೆ ನಮ್ಮ ಶರೀರವನ್ನು ಕಾಳಜಿ ಮಾಡುತ್ತಾರೆ ಇದೊಂದು ಅತಿಬಲದ ಗಿಡ.
ಈ ಗಿಡದ ಬೇರು ಎಲೆ ಹೂವ ಎಲ್ಲವೂ ಕೂಡ ವಿಶೇಷ ಕಾರಣ ಆದ್ದರಿಂದ ಅತಿಬಲದ ವಿಶೇಷತೆ ಅಪಾರವಾದುದು ಜೊತೆಗೆ ಇದರ ಔಷಧೀಯ ಗುಣ ಏನೆಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆ ಅಂದರೆ ನಿಮಗೇನಾದರೂ ಹಲ್ಲು ನೋವು ಸಮಸ್ಯೆ ಕಾಡುತ್ತಾ ಇದ್ದರೆ ಆಗ ನೀವು ಈ ಅತಿಬಲದ ಎಳೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಇದರ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದು ಸ್ವಲ್ಪ ತಣ್ಣಗಾದ ಮೇಲೆ ಬಾಯಿಗೆ ಹಾಕಿ ಮುಕ್ಕಳಿಸುತ್ತಾ ಬಂದರೆ.
ಹಲ್ಲು ನೋವು ಸಮಸ್ಯೆ ಬಹಳ ಬೇಗ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ಈ ಗಿಡದ ಬೇರಿನಿಂದ ತೆಗೆದ ಎಣ್ಣೆ ಬಹಳ ಪ್ರಯೋಜನಕಾರಿ ನೋವು ಇರುವ ಭಾಗಕ್ಕೆ ಇದರ ಎಣ್ಣೆಯನ್ನು ಹಚ್ಚುತ್ತಾ ಬಂದರೆ ನೋವು ಬೇಗ ನಿವಾರಣೆಯಾಗುತ್ತೆ ಹಾಗದರೆ ಈ ಗಿಡದ ಚಕ್ಕೆಯಿಂದ ಎಣ್ಣೆಯನ್ನು ಹೇಗೆ ತಯಾರಿಸಿಕೊಳ್ಳುವುದು ಎಂಬುದನ್ನು ನೀವು ಕೂಡ ತಿಳಿಬೇಕ ಏನಿದೆ ನೋಡಿ ಕುರಿತು ಸಂಪೂರ್ಣ ಮಾಹಿತಿ.
ಮೊದಲಿಗೆ ಎಳ್ಳೆಣ್ಣೆಯನ್ನು ತೆಗೆದುಕೊಳ್ಳಬೇಕು ಬಳಿಕ ಆ ಎಣ್ಣೆ ಸ್ವಲ್ಪ ಬಿಸಿಯಾದ ಮೇಲೆ ಅದಕ್ಕೆ ಚಿಕ್ಕದಾಗಿ ಕತ್ತರಿಸಿಕೊಂಡ ಅತಿಬಲ ಗಿಡದ ಚಕ್ಕೆಯನ್ನು ಎಣ್ಣೆಗೆ ಹಾಕಿ ಬಿಸಿ ಮಾಡಬೇಕು ಇದರ ಜೊತೆಗೆ ಅರ್ಧ ಚಮಚದಷ್ಟು ಮೆಣಸನ್ನು ಈ ಎಣ್ಣೆಯೊಂದಿಗೆ ಹಾಕಿ, ಎಳ್ಳೆಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು.ಯಾಕೆ ಅಂದರೆ ಈ ರೀತಿ ಮಾಡುವುದರಿಂದ ಚೆಕ್ಕೆಯಲ್ಲಿ ಇರುವ ಗುಣ ಮತ್ತು ಮೆಣಸಿನಲ್ಲಿ ಇರುವ ಗುಣ ಎಣ್ಣೆಗೆ ಹಿಡಿದುಕೊಂಡು ಅದು ನೋವನ್ನ ಇರುವ ಶಕ್ತಿಯನ್ನು ಪಡೆದುಕೊಳ್ಳುತ್ತದೆ.
ಇದೀಗ ಅದನ್ನು ಹಾಗೆ ಸ್ವಲ್ಪ ತಣಿಯಲು ಬಿಟ್ಟು ಬಳಿಕ ಈ ಎಣ್ಣೆಯನ್ನು ಪಾತ್ರೆಯೊಂದಕ್ಕೆ ಶೋಧಿಸಿಕೊಂಡು ಅದನ್ನು ಪ್ರತಿದಿನ ನೋವು ಇರುವ ಭಾಗಕ್ಕೆ ಹಚ್ಚಿ ಮಸಾಜ್ ಮಾಡಿ ಬಳಿಕ ಬಿಸಿ ನೀರಿನಿಂದ ಶಾಖ ಕೊಡಿ.ಈ ರೀತಿ ಮಾಡುತ್ತಾ ಬಂದರೆ ನೋವುಗಳು ನಿವಾರಣೆಯಾಗುತ್ತದೆ ಹಾಗೂ ಹಲವರಿಗೆ ಈ ಮೀನು ಕಂಡದ ಭಾಗದಲ್ಲಿ ಹೆಚ್ಚು ನೋವು ಇರುತ್ತದೆ ಅಂತಹ ಬಾಧೆಯಿಂದ ಪರಿಹಾರ ಪಡೆದುಕೊಳ್ಳಲು ಈ ಮೇಲೆ ತಿಳಿಸಿದ ಈ ಉತ್ತಮ ಮನೆ ಮದ್ದು ಪಾಲಿಸಿ.
ಹೀಗೆ ಅತಿಬಲದ ಪ್ರಯೋಜನ ಅಪಾರವಾದುದು ಹಾಗೆ ಇದರ ಎಲೆ ಗಳಿಂದ ಕಷಾಯ ಮಾಡಿ ಕುಡಿಯುವುದರಿಂದ ದೇಹವು ಬಲಗೊಳ್ಳುತ್ತದೆ ಅದೇ ರೀತಿ ದುರ್ಯೋಧನನ ಬಲವೃದ್ಧಿಗೆ ಆತನ ತಾಯಿ ಕೂಡ ಇದೇ ರೀತಿಯ ಪರಿಹಾರವನ್ನು ಪಾಲಿಸುತ್ತಿದ್ದರಂತೆ.
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
This website uses cookies.