ಮೇಘನಾ ರಾಜ್ ಸುಪುತ್ರ ರಾಯನ್ ಸರ್ಜಾ ನೋಡಿದ ತಕ್ಷಣ ಅಶ್ವಿನಿ ಪುನೀತ್ ರಾಜ್ ಕುಮಾರ್ ಹೇಳಿದ್ದೇನು ನೋಡಿ

ಹೌದು ಅಪ್ಪು ಅವರನ್ನ ಕಳೆದುಕೊಂಡು ಈಗಾಗಲೇ 7 ತಿಂಗಳುಗಳು ಕಳೆಯುತ್ತಾ ಬಂದಿದೆ, ಆದರೆ ಯಾರಲ್ಲಿಯೂ ಕೂಡ ಅಪ್ಪು ಅವರ ನೆನಪುಗಳು ಮಾಸಿಲ್ಲ. ದೊಡ್ಮನೆಯಲ್ಲಿ ಎನ್ನುವ ಸೂತಕದ ವಾತಾವರಣವು ಎಂದಿಗೂ ಮಾಸೋದಿಲ್ಲ ಅನಿಸುತ್ತೆ. ಯಾಕೆಂದರೆ ಕರುನಾಡ ರಾಜಕುಮಾರನ ಇಲ್ಲದಿರುವಾಗ ದೊಡ್ಮನೆಯಲ್ಲಿ ಆ ನೋವನ್ನು ಹೇಗೆ ಮರೆಯಲು ಸಾಧ್ಯ ಇದೆಲ್ಲದರ ನಡುವೆ ಕೇವಲ ದೊಡ್ಡವರಿಗೆ ಮಾತ್ರವಲ್ಲ ಎಷ್ಟೋ ಅಭಿಮಾನಿಗಳ ಮನೆಯಲ್ಲಿ ಇನ್ನೂ ಕೂಡ ಅಪ್ಪು ಇಲ್ಲ ಅನ್ನುವ ನೋವು ಹಾಗೇ ಇದೆ.

ಹೌದು ಸ್ನೇಹಿತರೆ ಅಪ್ಪು ಅದೆಂತಹ ವ್ಯಕ್ತಿಯಾಗಿದ್ದರು ಚಿಕ್ಕ ಮಕ್ಕಳ ಮನಸ್ಸನ್ನು ಗೆಲ್ಲುವ ಮುಗ್ಧತೆ ಅವರಲ್ಲಿತ್ತು. ಅಂತಹ ಮುಗ್ಧ ಜೀವವನ್ನು ನಾವೆಲ್ಲರೂ ಕಳೆದುಕೊಂಡಿದ್ದರು ಆದರೆ ಅವರ ನೆನಪುಗಳು ಮಾತ್ರ ನಮ್ಮ ಮನದಲ್ಲಿರುತ್ತದೆ ನಮ್ಮ ಸಮಾಜದಲ್ಲಿ ಸದಾ ಅಪ್ಪು ಅವರು ಮಾಡಿದ ಒಳ್ಳೆಯ ಕೆಲಸದಿಂದ ಅವರು ಜೀವಂತವಾಗಿರುತ್ತಾರೆ. ಕರುನಾಡ ರಾಜಕುಮಾರನಿಲ್ಲದ ಈ ವೇಳೆ ಕರುನಾಡಲ್ಲಿ ಏನೇ ಕಾರ್ಯಕ್ರಮಗಳು ನಡೆದರೂ ಅಪ್ಪುವ ಅನ್ನೋ ನೆನಪಿಸಿಕೊಳ್ಳದೇ ಯಾವ ಕಾರ್ಯಕ್ರಮಗಳು ಜರುಗುವ ದಿನ ಜಾತ್ರಾ ಮಹೋತ್ಸವದಲ್ಲಿ ಕೂಡ ಅಪ್ಪು ಅವರ ಫ್ಲೆಕ್ಸ್ ಮತ್ತು ಫೋಟೊ ಕಾಣಬಹುದು ಹಾಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಪ್ಪು ಅವರ ನೆನಪಿನಲ್ಲಿ ನೆನಪಿಗಾಗಿ ಅವರ ಹೆಸರಲ್ಲಿ ಟ್ರೋಫಿಯನ್ನು ನೀಡುವ ಮೂಲಕ ಡ್ಯಾನ್ಸಿಂಗ್ ಚಾಂಪಿಯನ್ ಎಂಬ ರಿಯಾಲಿಟಿ ಶೋ ಅನ್ನು ಪ್ರಾರಂಭಿಸಿ, ಹಾಗೆ ವಿಜೇತರಿಗೆ ಅಪ್ಪು ಅವರ ಡಾನ್ಸಿಂಗ್ ಪ್ರತಿಮೆಯನ್ನು ಕೂಡ ನೀಡಿ ಗೌರವಿಸಲಾಗಿತ್ತು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮವು ಅದ್ಭುತವಾಗಿ ಮೂಡಿ ಬಂದು ಜನರ ಮೆಚ್ಚುಗೆಯನ್ನು ಕೂಡ ಪಡೆದುಕೊಂಡಿತು ಮತ್ತು ಟಾಪ್ ಮೋಸ್ಟ್ ರಿಯಾಲಿಟಿ ಶೋಗಳಲ್ಲಿ ಸ್ಥಾನ ಪಡೆದುಕೊಂಡಿತ್ತು ಕೂಡ. ಕಳೆದ ಭಾನುವಾರ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಫೈನಾನ್ಸ್ ಜರುಗಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಧ್ರುವ ಸರ್ಜಾ ಮತ್ತು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಬಂದಿದ್ದು ಇದೇ ಮೊದಲ ವೇಳೆ ಪುನೀತ್ ರಾಜ್ ಕುಮಾರ್ ಅವರು ಇಲ್ಲವಾದ ಮೇಲೆ ಅಶ್ವಿನಿ ಅವರು ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಿರುವುದು.

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಡ್ಯಾನ್ಸಿಂಗ್ ಚಾಂಪಿಯನ್ ಗೆ ಮುಖ್ಯ ಅತಿಥಿಗಳಾಗಿ ಬಂದಿದ್ದು, ಬಂದ ಕೂಡಲೇ ವೇದಿಕೆಯ ಮೇಲೆ ನಿಂತು ಡ್ಯಾನ್ಸಿಂಗ್ ಚಾಂಪಿಯನ್ ಸ್ಪರ್ಧಿಗಳಿಗೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ ಹಾಗೂ ಇದೆ ಶೋನ ವಿಶೇಷ ಅತಿಥಿಯಾಗಿದ್ದ ಮೇಘನರಾಜ್ ಸರ್ಜಾ ಅವರಿಗೂ ಕೂಡ ಶುಭಾಶಯ ತಿಳಿಸುವ ಮೂಲಕ ವಿಶೇಷ ಸಂಧರ್ಭದಂದು ಮೇಘನಾ ರಾಜ್ ಅವರು ತಮ್ಮ ಮಗ ರಾಯನ್ ಅನ್ನು ಕೂಡ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದರು. ಇದೇ ವೇಳೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ರಾಯನ್ ಅನ್ನು ಕೂಡ ಮಾತನಾಡಿಸಿ ಮುದ್ದಾಡಿ ಮೇಘನ ರಾಜ್ ಅವರಿಗೆ ರಾಯನ್ ಕುರಿತು ಈ ರೀತಿ ಹೇಳಿದ್ದಾರೆ.

ರಾಯನ್ ಥೇಟ್ ಅಪ್ಪನ ಹಾಗೆ ಇದ್ದಾನೆ ಚಿರು ಹಾವಭಾವವೇ ಮಗುವಿಗೂ ಕೂಡ ಇದೆ ಎಂದು ಹೇಳುವ ಮೂಲಕ ಮೇಘನ ರಾಜ್ ಅವರಿಗೆ ಸದ್ಯ ನಮ್ಮ ಜೊತೆ ಚಿರು ಮತ್ತು ಅಪ್ಪು ಇಲ್ಲಾ. ಆದರೆ ಅವರು ನೆನಪುಗಳ ಜೊತೆಗೆ ನಮ್ಮ ಜೊತೆ ಸದಾ ಇರುತ್ತಾರೆ ಎಂದು ಮೇಘನಾ ರಾಜ್ ಅವರಿಗೆ ಅಶ್ವಿನಿ ಅವರು ಹೇಳಿದ್ದಾರೆ, ಅಶ್ವಿನಿ ಅವರ ಮಾತು ಕೇಳಿ ಮೇಘನ ರಾಜ್ ಅವರು ಕೂಡ ಭಾವುಕರಾಗಿದ್ದಾರೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

5 days ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

5 days ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

5 days ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

5 days ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

6 days ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

6 days ago

This website uses cookies.