WhatsApp Logo

ಜನಪ್ರಿಯ ನಟಿ ಬಿಗ್ ಬಾಸ್ ಗೆ ವೈಲ್ಡ್ ಕಾಲ್ಡ್ ಎಂಟ್ರಿ ಹಾಗಾದ್ರೆ ಆ ನಟಿ ಯಾರು ತಿಳ್ಕೊಬೇಕಾ …!!!!

By Sanjay Kumar

Updated on:

ಸದ್ಯಕ್ಕೆ ಮನರಂಜನೆ ನೀಡುತ್ತಿರುವಂತಹ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ ಎಂಟಕ್ಕೆ ಕಾಲಿಟ್ಟಿದೆ ಸೀಸನ್ ಎಳರ ವರೆಗೂ ನೋಡಿಕೊಂಡು ಬಂದಿರುವ ಹಾಗೆ ಬಿಗ್ ಬಾಸ್ ನಲ್ಲಿ ಮಧ್ಯದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹಲವು ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಈ ಸೀಸನ್ ಎಂಟರಲ್ಲಿಯೂ ಕೂಡ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕೆಲವರು ಬಿಗ್ ಬಾಸ್ ಮನೆಯೊಳಗೆ ಹೋಗಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತ ಇವೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ವಿಚಾರಗಳು ಹರಿದಾಡುತ್ತಾ ಇದ್ದು, ಬಿಗ್ ಬಾಸ್ ರಿಯಾಲಿಟಿ ಶೋ ಶುರುವಾಗಿ ಈಗಾಗಲೇ ನಾಲ್ಕು ವಾರಗಳು ಕಳೆದಿವೆ. ಹಾಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಒಬ್ಬರು ರಿಯಾಲಿಟಿ ಶೋಗೆ ಎಂಟ್ರಿ ಅನ್ನೂ ಕೂಡ ಕೊಟ್ಟಿದ್ದಾರೆ.

ಇನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಯ ಒಳಗೆ ಏನೋ ಕೆಲ ಸ್ಪರ್ಧಿಗಳು ಹೋಗಬಹುದು ಎಂದು ಮಾತನಾಡಿಕೊಳ್ಳುತ್ತಾ ಇರುವ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇವೆ ಅಂತ ಸ್ಪರ್ಧೆಗಳಲ್ಲಿ ಅನೇಕ ಸೀಸನ್ ನಿಂದಲೂ ಕೂಡ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ತೆರಳಲಿದ್ದಾರೆ ಎಂದು ವೈರಲ್ ಆಗುತ್ತಾ ಇದ್ದಂತಹ ಕಾವ್ಯಾ ಗೌಡ ರವರು ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎಂಬ ವಿಚಾರ ಸದ್ಯಕ್ಕೆ ವೈರಲ್ ಆಗಿದೆ ಅಷ್ಟೇ ಅಲ್ಲ ಕಾರ್ಯಕ್ರಮವೊಂದರಲ್ಲಿ ಈ ವರುಷ ತಾನು ಮದುವೆಯಾಗಲಿದ್ದೇನೆ ಎಂಬ ವಿಚಾರವನ್ನು ಹಂಚಿಕೊಂಡು ಒಂದಿಷ್ಟು ಸೆನ್ಸೇಷನ್ ಬಿಲ್ಡ್ ಮಾಡಿದ ಕಾವ್ಯ ಗೌಡ ಅವರು ಈ ಸೀಸನ್ ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹೋಗ ಬಹುದೆ ಎಂಬ ವಿಚಾರವು ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇದೆ.

ಇನ್ನು ಮತ್ತೊಬ್ಬ ಕಿರುತೆರೆಯ ಅಭಿನೇತ್ರಿ ಅವರೇ ಕಲರ್ಸ್ ಕನ್ನಡದ ಧಾರಾವಾಹಿಯಲ್ಲಿ ಮೂಡಿಬರುತ್ತ ಇರುವಂತಹ ಕನ್ನಡತಿ ಧಾರಾವಾಹಿಯಲ್ಲಿ ಅಮ್ಮಮ್ಮ ಪಾತ್ರವನ್ನು ನಿರ್ವಹಿಸುತ್ತಾ ಇರುವಂತಹ ಚಿತ್ಕಲಾ ಅವರು ಕೂಡ ಬಿಗ್ ಬಾಸ್ ರಿಯಾಲಿಟಿ ಶೋ ಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹೋಗ ಬಹುದು, ಇದಕ್ಕಾಗಿಯೇ ಧಾರಾವಾಹಿಯಲ್ಲಿ ಟ್ವಿಸ್ಟ್ ಕೊಟ್ಟಿದ್ದಾರೆ ಎಂಬ ಮಾತುಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ ಕೂಡ.

ಇನ್ನೂ ಇವರಿಬ್ಬರೂ ಸಹ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬುದನ್ನು ಬಿಗ್ ಬಾಸ್ ಅಭಿಮಾನಿಗಳು ಕಾದು ನೋಡ ಬೇಕಾಗಿದೆ ಏನೋ ಕಾವ್ಯಾ ಗೌಡ ರವರು ಹಾಗೂ ಚಿತ್ಕಲಾ ಅವರು ಸಾಕಷ್ಟು ಕನ್ನಡ ಧಾರಾವಾಹಿಗಳಲ್ಲಿ ಅಭಿನಯವನ್ನೂ ಮಾಡಿದ್ದಾರೆ ಹಾಗೂ ಜನರಿಗೆ ಒಳ್ಳೆಯ ಮನರಂಜನೆಯನ್ನು ನೀಡಿದ್ದಾರೆ. ಸದ್ಯಕ್ಕೆ ವೈರಲ್ ಆಗಿರುವ ಹಾಗೆ ಬಿಗ್ ಬಾಸ್ ಮನೆಗೆ ಮತ್ತೊಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಕೊಡುತ್ತಾರಾ ಎಂಬುದನ್ನು ನಾವೆಲ್ಲರೂ ಕಾದು ನೋಡಬೇಕಾಗಿದೆ. ನೀವು ಸಹ ಬಿಗ್ ಬಾಸ್ ಅಭಿಮಾನಿಗಳ ಬಿಗ್ ಬಾಸ್ ವೀಕ್ಷಣೆ ಮಾಡುತ್ತಾ ಇದ್ದರೆ ತಪ್ಪದೇ ಕಾಮೆಂಟ್ ಮಾಡಿ ಶುಭ ದಿನ ಧನ್ಯವಾದಗಳು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment