WhatsApp Logo

ನಿಮ್ಮ ಜೀವನದಲ್ಲಿ ಎದುರಾಗುವ ಯಾವುದೇ ರೀತಿಯ ದೋಷಗಳು ಇದ್ದಲ್ಲಿ ಸಹ ಗೋಮತಿ ಚಕ್ರದ ಸಹಾಯದಿಂದ ಹೀಗೆ ಮಾಡಿ ಸಾಕು…. ನಿಮ್ಮ ಜೀವನದಲ್ಲಿ ಎಲ್ಲ ದೋಷಗಳು ದೂರ ಆಗುತ್ತವೆ… ಹಾಗೆ ಯಾವುದೇ ದೋಷ ನಿಮಗೆ ಅಂಟಿಕೊಳ್ಳದೆ ಇರೋ ಹಾಗೆ ಆ ತಾಯಿ ಲಕ್ಷ್ಮಿ ನೋಡಿಕೊಳ್ಳುತ್ತಾಳೆ …

By Sanjay Kumar

Updated on:

ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಇದೆಯಾ? ಹೌದು ನಿಮ್ಮ ಮನೆಯಲ್ಲಿ ಆರ್ಥಿಕ ಸಂಕಷ್ಟಗಳು ಇದ್ದರೆ ಅದಕ್ಕೆ ಪರಿಹಾರವಾಗಿ ನೀವು ಗೋಮತಿ ಚಕ್ರ ದ ಈ ಪರಿಹಾರವನ್ನು ಪಾಲಿಸಿ ಈ ಪರಿಹಾರವನ್ನು ಮಾಡುವುದು ಹೇಗೆ ಅಂತ ನಾವು ತಿಳಿಸಿಕೊಡುತ್ತೇವೆ ಇದನ್ನು ನಾವು ಹೇಳಿದ ರೀತಿಯಲ್ಲಿಯೇ ಮಾಡಿ ಖಂಡಿತಾ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಹೌದು ಗೋಮತಿ ಚಕ್ರ ದ ಉಪಯೋಗದ ಬಗ್ಗೆ ನೀವು ತಿಳಿದಾಗ ಖಂಡಿತ ಇದರ ಪ್ರಯೋಜನವನ್ನು ನೀವು ಪಡೆದುಕೊಳ್ಳುತ್ತೀರಾ. ಹಾಗಾದರೆ ಬನ್ನಿ ನಿಮ್ಮ ಈ ಪರಿಹಾರವನ್ನು ಹೇಗೆ ಮಾಡಬೇಕು ಯಾವ ದಿನದಂದು ಮಾಡಬೇಕು ಜೊತೆಗೆ ಗೋಮತಿ ಚಕ್ರ ದಿಂದ ಇನ್ನೂ ಏನೆಲ್ಲ ಪ್ರಯೋಜನಗಳು ಇದೆ ಅನ್ನೋದನ್ನ ತಿಳಿಯೋಣ ಇಂದಿನ ಲೇಖನದಲ್ಲಿ.

ಹೌದು ಸಾಮಾನ್ಯವಾಗಿ ಯಾರ ಜಾತಕದಲ್ಲಿ ಗ್ರಹ ದೋಷ ಇರುತ್ತದೆ ಅಥವಾ ಲಕ್ಷ್ಮಿ ದೇವಿಯ ಕೃಪೆ ಇರುವುದಿಲ್ಲ ಅಂಥವರ ಮನೆಯಲ್ಲಿ ಆರ್ಥಿಕ ಸಂಕಷ್ಟಗಳು ಆರ್ಥಿಕ ಬಿಕ್ಕಟ್ಟುಗಳು ಇರುವುದು ಸಹಜ. ಈ ಆರ್ಥಿಕ ಸಂಕಷ್ಟಗಳು ಉಂಟಾದಾಗ ಅದಕ್ಕೆ ಬೇಕಾದ ಪರಿಹಾರವನ್ನ ನೀವು ಮಾಡಬೇಕಿರುತ್ತದೆ ಅದಕ್ಕಾಗಿ ನೀವು ಏನು ಮಾಡಬೇಕು ಅಂದರೆ ಲಕ್ಷ್ಮೀದೇವಿಯ ಅನುಗ್ರಹವನ್ನು ಮೊದಲು ಪಡೆಯಬೇಕು ಹೌದು ಲಕ್ಷ್ಮೀ ದೇವಿಯ ಅನುಗ್ರಹ ಪಡೆಯಲು ನಾವು ಈಗಾಗಲೇ ಸಾಕಷ್ಟು ಪರಿಹಾರಗಳನ್ನು ತಿಳಿಸಿಕೊಟ್ಟಿದ್ದೇವೆ. ಲಕ್ಷ್ಮಿ ದೇವಿಗೆ ಪ್ರಿಯವಾದ ವಸ್ತುಗಳನ್ನು ಆಕೆಗೆ ನೀಡಿದಾಗ ಆಕೆ ಸಂತುಷ್ಟಗೊಂಡು ನಿಮಗೆ ಬೇಕಾದ ವರವನ್ನು ನೀಡುತ್ತಾಳೆ ನಿಮ್ಮ ಮನೆಯಲ್ಲಿಯೇ ಆಕೆ ವಾಸವಿರುತ್ತಾಳೆ ಹಾಗಾಗಿ ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಕೃಪಾಕಟಾಕ್ಷಕ್ಕಾಗಿ ಈ ಪರಿಹಾರವನ್ನು ಪಾಲಿಸಿ ಲಕ್ಷ್ಮೀ ದೇವಿಗೆ ಪ್ರಿಯವಾದ ವಸ್ತುಗಳಲ್ಲಿ ಗೋಮತಿ ಚಕ್ರ ಕೂಡ ಒಂದು.

ಈ ಗೋಮತಿ ಚಕ್ರ ಶ್ರೀಕೃಷ್ಣನ ಕೈನಲ್ಲಿರುವ ಸುದರ್ಶನ ಚಕ್ರಕ್ಕೆ ಸಮಾನವಾದುದು ಇದನ್ನು ಕೆಲವರು ಅಂತ ಕೂಡ ಕರೆಯುತ್ತಾರೆ ಬಹಳ ಶಕ್ತಿಶಾಲಿಯಾದ ಈ ಚಕ್ರವು ನೋಡುವುದಕ್ಕೆ ಸಣ್ಣ ಆಕಾರದಲ್ಲಿ ಇರುತ್ತದೆ. ಈಗ ಪರಿಹಾರದ ಕುರಿತು ತಿಳಿದುಕೊಳ್ಳೋಣ ಸ್ನೇಹಿತರೆ, ಹೌದು ಪ್ರಿಯಾ ಸ್ನೇಹಿತರೆ ಮನೆಯಲ್ಲಿ ಯಾಕೆ ಪ್ರತಿದಿನ ಪೂಜೆ ಮಾಡುತ್ತೇವೆ ಅಂದರೆ ದೇವರ ಕೃಪೆ ನಮ್ಮ ಮೇಲೆ ಸದಾ ಇರಲಿ ಅಂತ ಮತ್ತು ಮನೆಯಲ್ಲಿ ಇರುವ ಸಮಸ್ಯೆಗಳು ಪರಿಹಾರವಾಗಲಿ ಎಂಬ ಕಾರಣಕ್ಕಾಗಿ. ಹಾಗಾದರೆ ಮನೆಯಲ್ಲಿ ದೇವರ ಕೃಪೆ ಸದಾ ನೆಲೆಸಿರಲು ಈ ಪರಿಹಾರವನ್ನು ನೀವು ಮಾಡಿಕೊಳ್ಳಿ.

ಶುಕ್ರವಾರದ ದಿನದಂದು ಮಹಾದೇವಿ ಲಕ್ಷ್ಮೀದೇವಿಯ ವಾರವಾಗಿರುತ್ತದೆ ಈ ದಿನದಂದು ಈ ಪರಿಹಾರಕ್ಕಾಗಿ ಬೇಕಿರುವ ಹಳದಿ ಬಣ್ಣದ ಕವಡೆಯನ್ನು ತಗೆದುಕೊಂಡು ಬನ್ನಿ ಬಳಿಕ 11 ಗೋಮತಿ ಚಕ್ರವನ್ನು ತೆಗೆದುಕೊಂಡು ಬನ್ನಿ. ಬಳಿಕ ಈ ಎರಡೂ ವಸ್ತುಗಳನ್ನ ಕೆಂಪು ವಸ್ತ್ರದಲ್ಲಿ ಇರಿಸಬೇಕು, ಈ ಕೆಂಪು ವಸ್ತ್ರದಲ್ಲಿ ಏರಿಸಿದ ವಸ್ತುಗಳನ್ನ ದೇವಿಯ ಮುಂದೆ ಇರಿಸಿ ಪೂಜೆ ಮಾಡಬೇಕು ಹೇಗೆ ಅಂದರೆ ಆಕೆಗೆ ಪ್ರಿಯವಾದ ವಸ್ತುಗಳನ್ನು ಸಮರ್ಪಿಸುವ ಮೂಲಕ ತುಪ್ಪದ ದೀಪವನ್ನು ಹಚ್ಚಿ ತಾಯಿಯ ಮುಂದೆ ಆರಾಧನೆ ಮಾಡಬೇಕು ಬಳಿಕ ಆ ದಿನವೆಲ್ಲ ಆ ಕೆಂಪು ವಸ್ತ್ರದ ಗಂಟನ್ನು ದೇವರ ಮುಂದೆ ಇರಿಸಿ ಬಳಿಕ ಮಾರನೇ ದಿನ ಅಂದರೆ ಶನಿವಾರ ದ ದಿನದಂದು ಮತ್ತು ಲಕ್ಷ್ಮೀದೇವಿಯ ಆರಾಧನೆ ಮಾಡುವ ಮೂಲಕ ನೀವು ಹಣ ಇಟ್ಟ ಸ್ಥಳದಲ್ಲಿ ಈ ಕೆಂಪು ವರ್ಷದಲ್ಲಿ ಕಟ್ಟಿಟ್ಟಿರುವ ಗೋಮತಿ ಚಕ್ರ ದ ಗಂಟನ್ನು ಇಡಿ.

ಈ ರೀತಿ ಮಾಡುವುದರಿಂದ ಖಂಡಿತಾ ನಿಮ್ಮ ಆರ್ಥಿಕ ಬಿಕ್ಕಟ್ಟುಗಳು ದೂರವಾಗುತ್ತೆ ಹಾಗೆ ಈ ಗೋಮತಿ ಚಕ್ರ ದಿಂದ ಮಕ್ಕಳಿಗೆ ಆಗಿರುವ ಕಣ್ಣ ದೃಷ್ಟಿಯನ್ನೂ ಕೂಡ ತೆಗೆದುಹಾಕಬಹುದು ಭಾನುವಾರ ಅಥವಾ ಗುರುವಾರದ ದಿನದಂದು ಹನ್ನೊಂದು ಗೋಮತಿ ಚಕ್ರ ರಿಂದ ಮಕ್ಕಳಿಗೆ ದೃಷ್ಟಿ ತೆಗೆಯಬೇಕು ಬಳಿಕ 3 ದಾರಿ ಕೂಡುವ ಕಡೆ ಆ ಗೋಮತಿ ಚಕ್ರವನ್ನು ಎಸೆದು ಬರಬೇಕು ಮತ್ತೆ ಅದನ್ನು ತಿರುಗಿ ನೋಡಬಾರದು ಏರಿಕೆ ಮಾಡುವುದರಿಂದ ಕೂಡ ಮಕ್ಕಳಿಗೆ ತಗುಲಿರುವ ಕೆಟ್ಟದೃಷ್ಟಿ ಯಾತ್ರೆ ಕಣ್ಣು ದೃಷ್ಟಿಯಾಗಲೀ ಪರಿಹಾರ ಆಗುತ್ತದೆ. ಲಕ್ಷ್ಮಿ ದೇವಿಗೆ ಪ್ರಿಯವಾದ ಈ ಗೋಮತಿ ಚಕ್ರವನ್ನು ಸಮುದ್ರದಲ್ಲಿಯೇ ಸಿಗುವ ಕಾರಣ ಲಕ್ಷ್ಮೀ ದೇವಿಯ ತವರು ಅಂತ ಕರೆಯುತ್ತಾರೆ ಈ ಸಮುದ್ರವನ್ನು ಆದ್ದರಿಂದ ಅದರಲ್ಲಿ ಜನಿಸಿರುವ ಗೋಮತಿ ಚಕ್ರವು ಕೂಡ ಲಕ್ಷ್ಮೀದೇವಿಗೆ ಪ್ರಿಯವಾದದ್ದು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment