ಮನೆಯ ಮುಂದೆ ಇರುವ ತುಳಸಿ ಕಟ್ಟೆಯ ಎದುರುಗಡೆ ಈ ಒಂದು ಸಣ್ಣ ಕೆಲಸವನ್ನ ಮಾಡಿ ಸಾಕು … ನೀವು ಬೇಡ ಬೇಡ ಅಂದ್ರು ಸಿರಿ ಸಂಪತ್ತು ನಿಮ್ಮನ್ನ ಹುಡುಕಿಕೊಂಡು ಬರುತ್ತೆ… ಅಷ್ಟಕ್ಕೂ ಏನು ಮಾಡಬೇಕು ಗೊತ್ತ …

543

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಶುಕ್ರವಾರದ ದಿನದಂದು ಯಾವ ಕೆಲಸ ಮಾಡೋದ್ರಿಂದ ಲಕ್ಷ್ಮೀದೇವಿಯ ಅನುಗ್ರಹವನ್ನು ನಾವು ಪಡೆಯಬಹುದು ಎಂಬುದನ್ನು ತಿಳಿಸಿಕೊಡುತ್ತದೆ ಬನ್ನಿ ತಿಳಿಯೋಣ ತಾಯಿಯ ಕೃಪೆ ಪಡೆಯಲು ನೀವು ಶುಕ್ರವಾರದ ದಿನದಂದು ಮಾಡಬೇಕಿರುವುದೇನು ಮತ್ತು ಲಕ್ಷ್ಮೀದೇವಿ ಅನುಗ್ರಹವನ್ನು ಪಡೆಯಲು ದೇವರ ಮನೆ ಮತ್ತು ತುಳಸೀ ದೇವಿಯ ಮುಂದೆ ಯಾವ ರಂಗೋಲಿಯನ್ನು ಹಾಕಬೇಕು ಹಾಗೆ ಈ ಶುಕ್ರವಾರದ ದಿನದಂದು ನಿಮ್ಮ ದಿನಚರಿ ಹೇಗಿರಬೇಕು ತಾಯಿಯ ಅನುಗ್ರಹ ಪಡೆಯಲು ಎಂಬುದನ್ನು ತಿಳಿಯೋಣ. ಹೌದು ನಾವು ಬಹಳಷ್ಟು ಶಾಸ್ತ್ರ ಸಂಪ್ರದಾಯ ಪದ್ಧತಿಗಳನ್ನು ಅಳವಡಿಸಿಕೊಂಡು ರೂಢಿಸಿಕೊಂಡು ಬಂದಿದ್ದರು ಹಾಗೆ ಹಿರಿಯರ ನೋಡಿದಾಗ ನಮಗೆ ಅದರ ಬಗ್ಗೆ ಅದರ ಕುರಿತು ವಿಚಾರಗಳು ಕೂಡ ತಿಳಿಯುತ್ತದೆ.

ಹೌದು ಶುಕ್ರವಾರ ದಿನ ಬಹಳ ವಿಶೇಷವಾದ ದಿನವಾಗಿರುತ್ತದೆ ಶುಕ್ರನ ಅಧಿಪತ್ಯ ವಾಗಿರುವ ಈ ಶುಕ್ರ ವಾರ ಈ ದಿನದಂದು ಅಮ್ಮನವರ ಆರಾಧನೆ ಮಾಡುವುದರಿಂದ ಬಹಳ ವಿಶೇಷವಾದ ಫಲವನ್ನು ನಾವು ಪಡೆಯಬಹುದು. ಹಿಂದೂ ಸಂಪ್ರದಾಯದಲ್ಲಿ ಕೆಲವೊಂದು ವಾರಕ್ಕೆ ಕೆಲವೊಂದು ದೇವರ ಆರಾಧನೆ ಮಾಡುವುದು ವಿಶೇಷವಾಗಿದೆ ಹಾಗೆ ಆ ದಿನದ ಗ್ರಹದ ಆಧಿಪತ್ಯದ ಮೇಲೆ ನಾವು ದೇವರ ಆರಾಧನೆ ಮಾಡುವುದರಿಂದ ನಮ್ಮ ಇಷ್ಟಾರ್ಥಗಳನ್ನು ನಾವು ನೆರವೇರಿಸಿಕೊಳ್ಳಬಹುದು ಅದರಲ್ಲಿ ನಾವು ಗುರುವಾರದ ದಿನದಂದು ಗುರುರಾಯರ ಹಾಗೂ ದತ್ತಾತ್ರೇಯರ ಆಶೀರ್ವಾದವನ್ನು ಪಡೆದುಕೊಂಡರೆ, ವಿದ್ಯಾಭ್ಯಾಸದಲ್ಲಿ ಉತ್ತಮ ರಾಗಿ ಬೆಳೆಯಬಹುದು ಹಾಗೆ ವಿದ್ಯೆಯಲ್ಲಿ ಯಾರಿಗೆ ಹಲವು ಅಡೆತಡೆಗಳು ಉಂಟಾಗುತ್ತಲೇ ಇರುತ್ತದೆ ಈ ಗುರುವಾರದ ದಿನದಂದು ದತ್ತಾತ್ರೇಯರ ಅರಾಧನೆಯನ್ನು ಮಾಡಬೇಕಿರುತ್ತದೆ.

ಅದೇ ರೀತಿ ಈ ಶುಕ್ರವಾರದ ದಿನದಂದು ಅಮ್ಮನವರ ವಾರ ಅಂದರೆ ಶ್ರೀ ಮಹಾಲಕ್ಷ್ಮಿ ಅಮ್ಮನವರ ಲಕ್ಷ್ಮೀ ದೇವಿಯ ವಿಶೇಷ ವಾರವಾಗಿರುತ್ತದೆ ಈ ದಿನದಂದು ನಾವು ಅಂದರೆ ಆರ್ಥಿಕ ಸಮಸ್ಯೆಯಿಂದ ಬಳಲುವವರು ತಾಯಿಯ ಆರಾಧನೆಯನ್ನು ಮಾಡಿಕೊಳ್ಳುವುದರಿಂದ ತಾಯಿಯ ಕೃಪೆಯ ಪಡೆಯಬಹುದು ಹಾಗೆ ಹಲವು ಬಗೆಯ ಸಮಸ್ಯೆಗಳನ್ನು ಪರಿಹಾರ ಮಾಡಬಹುದು ಹೌದು ತಾಯಿ ಅನುಗ್ರಹ ಬಂದಿದ್ದರೆ ಆ ವ್ಯಕ್ತಿ ಎಷ್ಟೇ ಬಡವನಾಗಿದ್ದರೂ ತಾಯಿ ಲಕ್ಷ್ಮೀ ದೇವಿಯ ಕೃಪಕಟಾಕ್ಷದಿಂದ ಬಹಳ ಸುಖ ಶಾಂತಿ ನೆಮ್ಮದಿಯನ್ನು ಜೀವನದಲ್ಲಿ ಪಡೆದುಕೊಳ್ಳಬಹುದು. ಈ ದಿನ ಅಂದರೆ ಶುಕ್ರವಾರದ ದಿನ ಮನೆಯ ಗೃಹಿಣಿಯಾದವಳು ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನವೇ ಎದ್ದು ಮನೆಯ ಕೆಲಸವನ್ನು ಮುಗಿಸಿ ಸ್ನಾನಾದಿಗಳನ್ನು ಮುಗಿಸಿ ಮನೆಯಲ್ಲಿ ದೀಪವನ್ನು ಹಚ್ಚಿಡಬೇಕು ಹೌದು ಸೂರ್ಯೋದಯ ಆಗುವಾಗ ಮನೆಯಲ್ಲಿ ದೀಪ ಉರಿಯಬೇಕು.

ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮೀದೇವಿ ಅನುಗ್ರಹವನ್ನು ನಾವು ಪಡೆದುಕೊಳ್ಳಬಹುದು ತಾಯಿ ಸಂತುಷ್ಟಳಾಗಿ ಮನೆಯಲ್ಲೇ ನೆಲೆಸುತ್ತಾಳೆ ಹಾಗೆ ಈ ದಿನದಂದು ಹೆಣ್ಣುಮಕ್ಕಳು ದೇವರ ಕೋಣೆಯಲ್ಲಿ ಮತ್ತು ತುಳಸಿ ಕಟ್ಟೆಯ ಮುಂದೆ ಕುಬೇರ ರಂಗೋಲಿಯನ್ನು ಹಾಕಬೇಕು ಹೌದು ಪ್ರತಿದಿನ ಮುಖ್ಯ ದ್ವಾರದ ಹೊಸ್ತಿಲ ಬಳಿ ಸ್ವಸ್ತಿಕ್ ರಂಗೋಲಿಯನ್ನು ಹಾಕಬೇಕು ಮತ್ತು ಕೇಳಿರಿ ಈ ಸ್ವಸ್ತಿಕ್ ರಂಗೋಲಿಯನ್ನು ಯಾರೂ ಕೂಡ ತುಳಿಯಬಾರದು. ಈ ರೀತಿ ಕುಬೇರ ರಂಗೋಲಿಯನ್ನು ಶುಕ್ರವಾರದ ದಿನದಂದು ಮಾತ್ರ ದೇವಿಯ ಮುಂದೆ ಮತ್ತು ತುಳಸಿ ಕಟ್ಟೆಯ ಮುಂದೆ ಕುಬೇರ ದೇವನ ರಂಗೋಲಿ ಹಾಕುವುದರಿಂದ ತಾಯಿ ಸಂತುಷ್ಟಳಾಗುತ್ತಾಳೆ ಮತ್ತು ಈ ದಿನ ಅಂದರೆ ಶುಕ್ರವಾರದ ದಿನ ಈ ರಂಗೋಲಿಯನ್ನು ಹಾಕಿ ತಾಯಿಯ ಆರಾಧನೆ ಮಾಡಿದರೆ ಲಕ್ಷ್ಮೀ ದೇವಿ ಸಂತಸಪಡುತ್ತಾಳೆ.

ಶುಕ್ರವಾರದ ದಿನದಂದು ತಾಯಿಗೆ ವಿಶೇಷವಾಗಿ ಪೂಜೆ ಸಲ್ಲಿಸುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹ ವನ್ನು ಪಡೆಯಬಹುದು. ಹೌದು ಕೇವಲ ಆರ್ಥಿಕ ಸಮಸ್ಯೆ ಬಗೆಹರಿಸುವುದಕ್ಕಾಗಿ ಮಾತ್ರ ತಾಯಿಯ ಅನುಗ್ರಹ ಬೇಕಾಗಿರುವುದಿಲ್ಲ. ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಹಾಗೂ ಹಣಕಾಸು ಐಶ್ವರ್ಯ ಎಲ್ಲವನ್ನೂ ನಾವು ಪಡೆಯಲು, ತಾಯಿಯ ಅನುಗ್ರಹ ಒಂದಿದ್ದರೆ ಸಾಕು ಜೀವನದಲ್ಲಿ ಯಾವುದಕ್ಕೂ ಕೊರತೆ ಇಲ್ಲದಿರುವ ಹಾಗೆ ಎಷ್ಟೇ ಸಮಸ್ಯೆಗಳು ಎದುರಾದರೂ ಬಹಳ ಧೈರ್ಯದಿಂದ ಸಮಸ್ಯೆಯನ್ನು ಎದುರಿಸುವ ಸಾಮರ್ಥ್ಯವನ್ನು ನೀವು ಹೊಂದಿರುತ್ತೀರಾ ಆದಕಾರಣ ಶುಕ್ರವಾರ ತಾಯಿ ಅನುಗ್ರಹವನ್ನು ವಿಶೇಷವಾಗಿ ಮಾಡಿ ಲಕ್ಷ್ಮೀಪುತ್ರರಾಗಿ ಧನ್ಯವಾದ.

WhatsApp Channel Join Now
Telegram Channel Join Now