WhatsApp Logo

ಗುರುವಾರದ ದಿನ ಒಂದು ಲವಂಗದಿಂದ ಈ ಸಣ್ಣ ತಂತ್ರವನ್ನ ಮಾಡಿ , ಎಂತ ಸಮಸ್ಸೆಗಳು ಬಂದರು ಸಹ ಪಾರಾಗುತ್ತೀರಾ… ಅಷ್ಟಕ್ಕೂ ಇದನ್ನ ಮಾಡೋದು ಹೇಗೆ…

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೆ ಮನೆಯಲ್ಲಿ ಸಮಸ್ಯೆಗಳು ಕಾಡುತ್ತಿದ್ದರೂ ಅದು ಯಾವ ರೀತಿ ಸಮಸ್ಯೆಗಳು ಅಂದರೆ ಮಕ್ಕಳು ಹೇಳಿದ ಮಾತು ಕೇಳದೆ ಇರುವುದು ಮಕ್ಕಳ ಆರೋಗ್ಯದಲ್ಲಿ ಆಗಾಗ ಏರುಪೇರು ಉಂಟಾಗುವುದು ಅಷ್ಟೇ ಅಲ್ಲ ಮಕ್ಕಳು ವಿದ್ಯಾಭ್ಯಾಸದಲ್ಲಿ ಸರಿಯಾಗಿ ಆಸಕ್ತಿ ತೋರದೇ ಇರುವುದು ಜೊತೆಗೆ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಇದ್ದರೂ ಸಹ ಅದಕ್ಕೆ ಪರಿಹಾರವನ್ನು ನಾವು ತಿಳಿಸಿಕೊಡುತ್ತೇವೆ ನಾವು ಹೇಳಿದಂತೆ ಗುರುವಾರದ ದಿನದಂದು ನಾವು ಹೇಳುವ ಪರಿಹಾರವನ್ನ ಪಾಲಿಸಿ ಖಂಡಿತವಾಗಿಯೂ ನಿಮ್ಮ ಈ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಅಂತೂ ಸಿಕ್ಕೇ ಸಿಗುತ್ತದೆ ಹಾಗಾದರೆ ಪರಿಹಾರ ಕುರಿತು ತಿಳಿಯೋಣ ಬನ್ನಿ ಈ ಲೇಖನಿಯಲ್ಲಿ.

ಜೀವನದಲ್ಲಿ ಎಲ್ಲರೂ ಸಹ ಒಂದಲ್ಲ ಒಂದು ಸಮಸ್ಯೆಗಳಿಂದ ಕಷ್ಟಪಡುತ್ತಲೇ ಇರುತ್ತಾರೆ ಇನ್ನು ಕೆಲವರಿಗಂತೂ ಕಷ್ಟ ಇರದೇ ಇರಬಹುದು ಆದರೆ ನೆಮ್ಮದಿ ಅಂತೂ ಇರುವುದಿಲ್ಲ ಹೌದು ಹಲ್ಲಿದ್ದವರಿಗೆ ಕಡಲೆ ಇಲ್ಲ ಕಡಲೆ ಇದ್ದವರಿಗೆ ಹಲ್ಲು ಇಲ್ಲ ಎಂಬ ಗಾದೆ ಮಾತನ್ನು ಕೇಳಿದ್ದೀರಾ ಅಲ್ವಾ. ಅದೇ ರೀತಿ ಹಣ ಇದ್ದವರು ಬಹಳ ನೆಮ್ಮದಿಯಾಗಿ ಇದ್ದಾರೆ ಎಂಬುದು ಮಾತ್ರ ಸುಳ್ಳು ಹಾಗೆ ಹಣ ಇಲ್ಲದವರು ನೆಮ್ಮದಿಯಾಗಿ ಇಲ್ಲ ಅನ್ನುವುದು ಕೂಡ ಸುಳ್ಳು. ಈ ಮಾಹಿತಿಯಲ್ಲಿ ಸಮಸ್ಯೆಗಳು ಏನೇ ಇರಲಿ ಅದಕ್ಕೆ ಗುರುವಾರದ ದಿನದ ದು ಹೇಗೆ ಪರಿಹಾರ ಪಡೆದುಕೊಳ್ಳುವುದು ಎಂಬುದನ್ನು ತಿಳಿಸಿಕೊಡುತ್ತೇವೆ.

ಹೌದು ಗುರುವಾರದ ದಿನದಂದು ಗುರುರಾಯರ ದಿನ ಅಂತ ಹೇಳ್ತಾರೆ ಈದಿನ ಗುರು ಪ್ರಭಾವವು ಕೂಡ ಹೆಚ್ಚಿರುತ್ತದೆ ಆದ್ದರಿಂದ ಈ ಗುರುವಾರದ ದಿನದಂದು ನೀವು ಈ ಪರಿಹಾರವನ್ನು ಮಾಡುವುದರಿಂದ ಖಂಡಿತ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಅಷ್ಟೇ ಅಲ್ಲ ಈ ದಿನ ಲಕ್ಷ್ಮೀ ದೇವಿಗೆ ಪ್ರಿಯವಾದ ವಿಚಾರವಾಗಿರುವ ಕಾರಣ ನಾವು ಹೇಳುವ ಪರಿಹರವನು ಮಾಡುವುದರಿಂದ ಖಂಡಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ವಿಷ್ಣು ದೇವನಿಗೂ ಕೂಡ ಆರಾಧನೆ ಮಾಡಲು ಈ ಗುರುವಾರ ಉತ್ತಮ ವಾರವಾಗಿದ್ದು ಆದ್ದರಿಂದಲೆ ಲಕ್ಷ್ಮೀದೇವಿ ಗೂ ಕೂಡ ಈ ವಾರ ಪ್ರಿಯವಾಗಿರುತ್ತದೆ.

ಗುರುವಾರದ ದಿನದಂದು ನಿಮ್ಮ ಮನೆಯ ಕೆಲಸಗಳನ್ನೆಲ್ಲ ಮುಗಿಸಿ ಹಾಗೂ ಮನೆ ದೇವರ ಆರಾಧನೆಯನ್ನು ಮುಗಿಸಿ ಮಧ್ಯಾಹ್ನ ಹನ್ನೆರಡು ಗಂಟೆಗಳ ಮುನ್ನ ಈ ಪರಿಹಾರವನ್ನು ಮಾಡಬೇಕು. ಗುರುವಾರದ ದಿನದಂದು ಏನಾದರೂ ಹುಣ್ಣಿಮೆ ಬಂದರೆ ಇನ್ನೂ ಈ ಪರಿಹಾರ ಮಾಡಲು ಉತ್ತಮ ದಿವಸ ವಾಗಿರುತ್ತದೆ ಕಾಗದ ಒಂದಕ್ಕೆ ಲವಂಗವನ್ನು ತೆಗೆದುಕೊಳ್ಳಬೇಕೋ ಇಷ್ಟು ಸಂಖ್ಯೆಯಲ್ಲಿರಬೇಕು ಅಂದರೆ 4 ಅಥವಾ 5 ಲವಂಗವನ್ನು ತೆಗೆದುಕೊಂಡು ಅದಕ್ಕೆ ಕರ್ಪೂರವನ್ನು ಕೂಡ ಇಡಬೇಕು ಈ ಕಾಗದವನ್ನು ಪೊಟ್ಟಣದ ರೀತಿ ಕಟ್ಟಿ ನಿಮ್ಮ ಮನೆಯ ಮಧ್ಯ ಭಾಗದಲ್ಲಿ ಇಡಬೇಕು.

ಬಳಿಕ ಸ್ವಲ್ಪ ಸಮಯದ ನಂತರ ನಿಮ್ಮ ಮನೆಯ ಮುಖ್ಯ ದ್ವಾರವನ್ನು ಈ ಲವಂಗ ಮತ್ತು ಕರ್ಪೂರದಿಂದ ನಿವಾಳಿಸಬೇಕು. ನಿವಾಳಿಸಿದ ಪೊಟ್ಟಣವನ್ನು ಮನೆಯ ಮುಖ್ಯ ದ್ವಾರದ ಎದುರು ತೆಗೆದುಕೊಂಡು ಹೋಗಿ ಅದನ್ನು ಪೂರ್ಣವಾಗಿ ಸುಡಬೇಕು ಮನೆಗೆ ಹಿಂದಿರುಗಿ ಬರುವಾಗ ಕೈ ಕಾಲನ್ನು ಸ್ವಚ್ಛಗೊಳಿಸಿಕೊಂಡು ಮನೆಯ ಒಳಗೆ ಬನ್ನಿ ಈ ರೀತಿ ಪ್ರತೀ ಗುರುವಾರ ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಮೇಲೆ ಆಗುತ್ತದೆ ಮನೆಯಲ್ಲಿ ಯಾವುದೇ ತರಹದ ಕೆಟ್ಟ ಶಕ್ತಿ ಇದ್ದರೂ ಅದರಿಂದ ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ಮನೆಯಲ್ಲಿ ಗ್ರಹಚಲನೆ ಆಗುತ್ತಾ ಇದೆ ಅಂತಾರೆ ಅಂತಹ ಸಮಸ್ಯೆ ಕೂಡ ಪರಿಹಾರವಾಗತ್ತೆ ಈ ತಂತ್ರವನ್ನು ನೀವು ಪ್ರತಿ ಗುರುವಾರ ಮಾಡುವುದರಿಂದ.ಈ ಸುಲಭ ಪರಿಹಾರವನ್ನು ನೀವು ಸಹ ಮಾಡಿ ಖಂಡಿತವಾಗಿಯೂ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಹಾಗೂ ಗುರುವಾರದ ದಿನದಂದು ಮಾಡುವ ಈ ಪರಿಹಾರವನ್ನು ತಪ್ಪದೆ ನಿಮ್ಮ ಮನೆ ದೇವರ ಆರಾಧನೆಯ ಬಳಿಕವೇ ಈ ಪರಿಹಾರ ಪಾಲಿಸಬೇಕು ಶುಭದಿನ ಧನ್ಯವಾದ….

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment