WhatsApp Logo

ಸಿಕ್ಕಾಪಟ್ಟೆ ಕೂತೂಹಲ ಮೂಡಿಸುತ್ತೆ ಅವತ್ತು ಶಿವಣ್ಣ ಮದುವೆಗೆ ಮಾಡಿಸಿಕೊಂಡ ಲಗ್ನ ಪತ್ರಿಕೆ … ಅಷ್ಟಕ್ಕೂ ಏನಿತ್ತು ಅದರಲ್ಲಿ

By Sanjay Kumar

Updated on:

ಕನ್ನಡ ಸಿನಿಮಾರಂಗದಲ್ಲಿ ಅದೊಂದು ಸಮಯವಿತ್ತು ಅನ್ನೋ ಕನ್ನಡ ಸಿನಿಮಾರಂಗದ ಪ್ರತಿಯೊಬ್ಬ ಕಲಾವಿದನ ನಡುವೆಯಾಗಲಿ ಅಥವಾ ನಿರ್ದೇಶಕರು ನಿರ್ಮಾಪಕರು ಯಾರ ನಡುವೆಯೂ ಮನಸ್ತಾಪಗಳೇ ಬರುತ್ತಿರಲಿಲ್ಲ ಅಷ್ಟು ಉತ್ತಮವಾಗಿತ್ತು ನಮ್ಮ ಸಿನಿಮಾ ರಂಗದಲ್ಲಿ ಒಗ್ಗಟ್ಟು ಎಂಬುದು. ಹೌದು ಇದಕ್ಕೆ ಕಾರಣವೇನು ಗೊತ್ತಾ ಎಂದು ನಟ ಸಾರ್ವಭೌಮ ಕನ್ನಡದ ಕುವರ ಎಂದೇ ಖ್ಯಾತಿ ಪಡೆದುಕೊಂಡಿದ್ದ ರಾಜಕುಮಾರ್ ಅವರು ಚಿತ್ರರಂಗದಲ್ಲಿ ಇದ್ದರು. ಅವರ ಉಪಸ್ಥಿತಿ ಚಂದನವನದಲ್ಲಿ ಇರುವವರೆಗೂ ಎಂದಿಗೂ ಕನ್ನಡ ಸಿನಿಮಾರಂಗದಲ್ಲಿ ಬಿರುಕು ಎಂಬುದು ಬಂದಿರಲಿಲ್ಲ ಮತ್ತು ಸಿನೆಮಾ ರಂಗಕ್ಕೆ ಸಂಬಂಧಿಸಿದಂತಹ ಯಾವುದೇ ವಿಚಾರಗಳು ಬಂದರೂ ಅದನ್ನು ಬಹಳ ಸರಳವಾಗಿ ಪರಿಹಾರ ಮಾಡುತ್ತಿದ್ದರೂ ರಾಜಣ್ಣ.

ಆದರೆ ಅವರ ಅಗಲಿಕೆಯ ಬಳಿಕ ಈ ಚಿತ್ರರಂಗದ ಜವಾಬ್ದಾರಿಯನ್ನು ತೆಗೆದುಕೊಂಡು ಚಿತ್ರರಂಗವನ್ನ ಬೆಳೆಸಲು ಹಾಗೂ ಚಿತ್ರರಂಗದ ಏಳಿಗೆಗೆ ಕಾರಣಕರ್ತರಾದರು ರೆಬೆಲ್ ಸ್ಟಾರ್ ಅಂಬರೀಶ್ ಅವರು. ಹೌದು ಅಂಬಿ ಅಣ್ಣ ಇರುವವರೆಗೂ ಸಹ ಕನ್ನಡ ಚಿತ್ರರಂಗದಲ್ಲಿ ಏನೇ ಸಮಸ್ಯೆಗಳುಂಟಾದರೂ ಅದನ್ನ ಬಹಳ ಚಾಕುಚಕ್ಯತೆಯಿಂದ ಪರಿಹಾರ ಮಾಡುತ್ತಿದ್ದರು ಆದರೆ ಅವರ ಅಗಲಿಕೆಯ ಬಳಿಕ ಕನ್ನಡ ಚಿತ್ರರಂಗದಲ್ಲಿ ಮುಂದೆ ಯಾರು ಚಿತ್ರರಂಗವನ್ನ ಮುಂದುರಿಸಿಕೊಂಡು ವಕ್ತಾರ ಹಾಗೂ ಚಿತ್ರರಂಗದ ವಿಚಾರದ ಸಂಬಂಧಿಸಿದಂತೆ ಏನೇ ಸಮಸ್ಯೆಗಳು ಬಂದರೂ ಯಾರೂ ಅದನೆಲ್ಲ ಪರಿಹಾರ ಮಾಡುತ್ತಾರೆ.

ಎಂದು ಮುಂದೆ ನೋಡುವಾಗ ಅದೊಂದು ಸಮಯದಲ್ಲಿ ಸಿನೆಮಾ ರಂಗದ ಹಲವು ಕಲಾವಿದರುಗಳು ಟೆಕ್ನಿಷಿಯನ್ಸ್ ಗಳು ಒಂದೊತ್ತು ಊಟಕ್ಕೂ ಕೂಡ ಕಷ್ಟ ಪಡಬೇಕಾದ ಸಂದರ್ಭ ಬಂದಿತ್ತು ಅದೇ ವೇಳೆ ಚಂದನವನದ ಎಲ್ಲರನ್ನು ಒಗ್ಗೂಡಿಸಿ ಸಹಾಯ ಮಾಡಲು ಮುಂದಕ್ಕೆ ಬಂದದ್ದು ದೊಡ್ಮನೆಯ ಮತ್ತೊಂದು ಕುಡಿ ಶಿವರಾಜ್ ಕುಮಾರ್ ಅವರು ಹೌದು ಈಗಾಗಲೇ ನೂರು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಸಿನಿಮಾ ರಂಗದಲ್ಲಿ ಅಪಾರ ಯಶಸ್ಸನ್ನು ಪಡೆದುಕೊಂಡಿರುವಂತಹ ಶಿವರಾಜ್ ಕುಮಾರ್ ಅವರು, ಎಲ್ಲರನ್ನ ಮನವೊಲಿಸಿ ಹಲವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದರು.

ಹೌದು ದೊಡ್ಮನೆ ಅಂದ್ರೆ ಹಾಗೆ ಅಲ್ವಾ ಕಷ್ಟ ಅಂದರೆ ಸದಾ ತಮ್ಮ ಸಹಾಯಹಸ್ತ ನೀಡುವ ದೊಡ್ಮನೆ ಬಂದೆ ಅಂದಿನ ಕಷ್ಟದ ಪರಿಸ್ಥಿತಿಯಲ್ಲಿಯೂ ಕೂಡಾ ದೊಡ್ಮನೆ ಸಹೋದರರು ಹಲವರ ಸಹಾಯಕ್ಕೆ ನಿಂತಿದ್ದರು. ಹೌದು ನಟ ಶಿವರಾಜ್ ಕುಮಾರ್ ಅವರ ಬಗ್ಗೆ ಮಾತನಾಡುವುದಾದರೆ ನಿಜಕ್ಕೂ ಇವರ ದೊಡ್ಡ ಗುಣದ ಬಗ್ಗೆ ಹೇಳಲೇಬೇಕು. ಕನ್ನಡ ಸಿನಿಮಾರಂಗದಲ್ಲಿ ಯುವ ರಾಜಕುಮಾರ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ಶಿವರಾಜ್ ಕುಮಾರ್ ಅವರು ಕನ್ನಡ ಸಿನೆಮಾ ರಂಗದಲ್ಲಿ ಇವರು ಅಭಿನಯ ಮಾಡುವ ಪ್ರತಿಯೊಂದು ಸಿನೆಮಾಗಳು ಕೂಡ ವಿಭಿನ್ನವಾಗಿರುತ್ತದೆ ಎಕ್ಸ್ಪರಿಮೆಂಟಲ್ ಆಗಿ ಇರುತ್ತದೆ.

ಶಿವಣ್ಣ ನ ಸಿನೆಮಾಗಳು ವಿಭಿನ್ನವಾಗಿ ಹಾಗೂ ಪವರ್ ಫುಲ್ಲಾಗಿ ಇರುತ್ತದೆ ಯಾಕೆಂದರೆ ಅವರ ವಯಸ್ಸಿನಲ್ಲಿಯೂ ಅಷ್ಟು ಡೈನಮಿಕ್ ಆಗಿ ಅಭಿನಯ ಮಾಡುವ ಶಿವಣ್ಣ ಹಲವರಿಗೆ ಮಾದರಿ ಇಂದಿನ ಯುವಜನತೆ ಸ್ವಲ್ಪ ಸಮಯ ನಡೆದರೂ ಸುಸ್ತಾಗುತ್ತೆ ಅಂತಾರೆ, ಆದರೆ ಶಿವಣ್ಣನ ಸ್ಟೈಲು ಶಿವಣ್ಣನ ಡಾನ್ಸ್ ಅವರ ಪವರ್ ನೋಡ್ತಿದ್ರೆ ಅಚ್ಚರಿಯಾಗತ್ತೆ. ಎಷ್ಟೇ ಆದರೂ ಪವರ್ ಗೆ ಅಣ್ಣಾ ಅಲ್ವಾ ನಮ್ಮ ಶಿವಣ್ಣ. ಶಿವನ್ ಅವರ ಬಗ್ಗೆ ಮಾತನಾಡುತ್ತಾ ಶಿವಣ್ಣ ಅವರ ಮದುವೆಯ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ. ಹೌದು ಈ ಮೇ ತಿಂಗಳಿನಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಶಿವಣ್ಣ ಮತ್ತು ಗೀತಕ್ಕ ದಂಪತಿಗಳಿಗೆ ಇದೀಗ ತಮ್ಮ ಮದುವೆ ವಾರ್ಷಿಕೋತ್ಸವದ ಸಂಭ್ರಮ, ಇದೇ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಶಿವಣ್ಣ ಅವರ ಮದುವೆಯ ಲಗ್ನಪತ್ರಿಕೆಯು ಸುದ್ಧಿ ಮಾಡುತ್ತಿದ್ದು, ಈ ಲಗ್ನ ಪತ್ರಿಕೆಯಲ್ಲಿ ಏನೇನು ಬರೆದಿದ್ದಾರೆ ನೋಡಿ ಈ ಕೆಳಗೆ ನೀಡಲಾಗಿರುವ ಫೋಟೋವನ್ನು ಮತ್ತು ದೊಡ್ಮನೆ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment