WhatsApp Logo

ರಾಕಿಂಗ್ ಸ್ಟಾರ್ ಯಶ್ ರಾಜಮೌಳಿ ನಿರ್ದೇಶನದಲ್ಲಿ ಛತ್ರಪತಿ ಶಿವಾಜಿ ಪಾತ್ರ…ಆದ್ರೆ ನಿಜವಾದ ಸ್ಟೋರಿ ನೇ ಬೇರೆ..

By Sanjay Kumar

Updated on:

ಕೆಜಿಎಫ್ ಸಿನಿಮಾ ಹಿಟ್ ಆಗುತ್ತಿದ್ದ ಹಾಗೆ ನಟ ಯಶ್ ಅವರ ಖದರ್ ಕೂಡಾ ಬದಲಾಗಿ ಹೋಗಿದೆ ಅಷ್ಟೇ ಅಲ್ಲ ಅವರ ಸಂಭಾವನೆ ಕೂಡ ದುಪ್ಪಟ್ಟು ಆಗಿದ್ದು ಎಲ್ಲೆಡೆ ರಾಕಿ ಭಾಯ್ ಅವರದ್ದೆ ಹವಾ. ಹೌದು ಸ್ವಲ್ಪ ದಿನಗಳಿಂದ ಅದರಲ್ಲಿಯೂ ಕೆಜಿಎಫ್ ಚಾಪ್ಟರ್ 2 ಸಿನಿಮಾ ರಿಲೀಸ್ ಆದ ಬಳಿಕ ಕೆಜಿಎಫ್ ಚಾಪ್ಟರ್ 3 ಸಿನೆಮಾ ಕುರಿತು ಜನರು ಬಹಳಷ್ಟು ಚರ್ಚೆಗಳನ್ನು ಮಾಡಿದರು ಮತ್ತು ಕೆಜಿಎಫ್ ಚಾಪ್ಟರ್ 3 ಸಿನಿಮಾ ಹೇಗೆ ಮೂಡಿಬರಬಹುದು ಅದರಲ್ಲಿ ಯಾರೆಲ್ಲ ನಟನೆ ಮಾಡಲಿದ್ದಾರೆ ಎಂಬುದರ ಕುರಿತು ಜನರು ಬಹಳಷ್ಟು ಕುತೂಹಲವನ್ನು ವ್ಯಕ್ತಪಡಿಸಿದ್ದರು. ಆದರೆ ಯಶ್ ಅವರ ಕುರಿತು ಇದೀಗ ಮತ್ತೊಂದು ವಿಚಾರ ಮೀಡಿಯಾಗಳಲ್ಲಿ ವೈರಲ್ ಆಗ್ತಾ ಇದ್ದು, ಈ ಕುರಿತು ಯಶ್ ಅವರು ಹೇಳಿರುವುದೇನು ಮತ್ತು ಯಶ್ ಅವರ ಮುಂದಿನ ಸಿನಿಮಾದ ಅಪ್ಡೇಟ್ಸ್ ಗಳೇನೂ ಎಲ್ಲವನ್ನ ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ.

ಹೌದು ಕೆಜಿಎಫ್ ಚಾಪ್ಟರ್ ಹಿಟ್ ಆಗುತ್ತಿದ್ದ ಹಾಗೆ ಇನ್ನೇನೋ ಯಶ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ, ಎಲೆಕ್ಷನ್ ನಲ್ಲಿ ನಿಲ್ತಾರೆ ಅಂತ ಬಹಳಷ್ಟು ವಿಚಾರಗಳನ್ನು ಜನರು ತಮ್ಮಷ್ಟಕ್ಕೆ ತಾವೇ ಮಾತನಾಡುತ್ತಾ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗಳನ್ನು ಕೂಡ ಮಾಡುತ್ತಿದ್ದರು. ಆದರೆ ಅದ್ಯಾವುದರ ಕುರಿತು ತಲೆಕೆಡಿಸಿಕೊಳ್ಳದ ಯಶ್ ರಾಜಕೀಯ ಕುರಿತು ಯಾವುದೇ ತರಹದ ಅಧಿಕೃತ ಹೇಳಿಕೆಗಳನ್ನು ಕೂಡ ಕೊಟ್ಟಿರಲಿಲ್ಲ. ಆದರೆ ಅಭಿಮಾನಿಗಳು ಮಾತ್ರ ಯಶ್ ಅವರಿಗೆ ಕೇಳುತ್ತಿದ್ದ ಪ್ರಶ್ನೆಗಳು, ಮುಂದಿನ ಸಿನಿಮಾ ಯಾವುದು ಮುಂದೆ ಯಾವ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತೀರಾ ಅಂತ. ಇತ್ತ ಯಶ್ ಅವರ ಕೆಜಿಎಫ್ ಸಿನಿಮಾ ಹಿಟ್ ಆಗುತ್ತಿದ್ದ ಹಾಗೆ ದೇಶದೆಲ್ಲೆಡೆ ಅವರಿಗೆ ಅಭಿಮಾನಿಗಳಾಗಿದ್ದಾರೆ.

ಇದೇ ಸಮಯದಲ್ಲಿ ಯಶ್ ಅವರಿಗೆ ಮಹಾರಾಷ್ಟ್ರದ ಅಭಿಮಾನಿಗಳು ತಮ್ಮ ನಾಯಕರಾಗಿರುವ ಛತ್ರಪತಿ ಶಿವಾಜಿ ಅವರ ಬಯೋಪಿಕ್ ಸಿನಿಮಾ ಮಾಡುವುದಾಗಿ ಕೇಳಿಕೊಂಡಿದ್ದರು ಹಾಗೆ ಅಭಿಮಾನಿಯೊಬ್ಬ ಶಿವಾಜಿ ಅವರ ರೂಪದಲ್ಲಿ ಯಶ್ ಅವರ ಪೇಂಟಿಂಗ್ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಕೂಡ. ಇಂತಹ ಬೆಳವಣಿಗೆಗಳು ಆಗುವಾಗಲೇ ಯಶ್ ಅವರು ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಸಿನಿಮಾ ಮಾಡುತ್ತಿರುವುದಾಗಿ ಮತ್ತು ತಮ್ಮ ಮುಂದಿನ ಚಿತ್ರವನ್ನು ನರ್ತನ್ ನಿರ್ದೇಶನ ಮಾಡುತ್ತಿದ್ದಾರೆಂದು ಸುಳಿವು ಬಿಟ್ಟುಕೊಟ್ಟಿದ್ದು ಮುಂದೆ ನಟ ಯಶ್ ಅವರು ನಿಜವಾಗಿಯೂ ಛತ್ರಪತಿ ಶಿವಾಜಿ ಅವರ ಲೈಫ್ ಸ್ಟೋರಿ ಸಿನಿಮಾ ಮಾಡ್ತಾರಾ ಎಂಬುದನ್ನ ಜನರು ಕಾದು ನೋಡಬೇಕಿದೆ ಹಾಗೆ ಈ ವಿಚಾರಕ್ಕೆ ಪುಷ್ಟಿ ನೀಡುವಂತೆ ಸ್ವಲ್ಪ ತಿಂಗಳುಗಳ ಹಿಂದೆ ಯಶ್ ಮತ್ತು ಅವರ ಪತ್ನಿ ರಾಧಿಕಾ ಪಂಡಿತ್ ಅವರು ಗೋವಾ ಸಿಎಂ ಅನ್ನು ಕೂಡ ಭೇಟಿ ಮಾಡಿದ್ದರು. ಇದೇ ವೇಳೆ ಕೆವಿಎನ್ ಪ್ರೊಡಕ್ಷನ್ಸ್ ನ ಮುಖ್ಯಸ್ಥರಾಗಿರುವ ವೆಂಕಟ್ ಅವರ ಜೊತೆಗಿನ ಫೋಟೋವನ್ನು ಕೂಡ ಶೇರ್ ಮಾಡಿಕೊಂಡಿದ್ದರು.

ಇದನ್ನೆಲ್ಲ ಗಮನಿಸಿದಾಗ ನಟ ಯಶ್ ಅವರು ಮುಂದೆ ಛತ್ರಪತಿ ಶಿವಾಜಿ ಅವರ ಬಯೋಪಿಕ್ ಚಿತ್ರದಲ್ಲಿ ನಟಿಸುತ್ತಾರೆ ಎಂಬುದು ಎಲ್ಲೋ ಒಂದೆಡೆಯಿಂದ ದೃಢವಾಗಿದ್ದು, ಅಭಿಮಾನಿಗಳ ಆಸೆ ಏನೆಂದರೆ ಈ ಚಿತ್ರಕ್ಕೆ ನಿರ್ದೇಶಕರಾಗಿರುವ ರಾಜಮೌಳಿ ಅವರೆ ಆಕ್ಷನ್ ಕಟ್ ಹೇಳಬೇಕು ಅಂತ. ನಟ ಯಶ್ ಅವರು ಈ ಹಿಂದೆಯೇ ಕೆವಿಎನ್ ಪ್ರೊಡಕ್ಷನ್ಸ್ ಅವರ ಅಡಿಯಲ್ಲಿ ಮೂಡಿ ಬರುವ ಸಿನೆಮಾದಲ್ಲಿ ಮತ್ತು ನರ್ತನ್ ಅವರ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸಬೇಕು ಅಂತಿದ್ದರು. ಆದರೆ ಇದೀಗ ಅದಕ್ಕೆ ಸಮಯ ಕೂಡಿ ಬಂದಿದ್ದು ಛತ್ರಪತಿ ಶಿವಾಜಿ ಅವರ ಬಯೋಪಿಕ್ ಸಿನಿಮಾದಲ್ಲಿ ಯಶ್ ಅವರು ಅಭಿನಯ ಮಾಡ್ತಾರ ಎಂಬುದನ್ನ ಕಾದು ನೋಡಬೇಕಿದೆ. ಒಟ್ಟಾರೆಯಾಗಿ ಯಶ್ ಅಭಿಮಾನಿಗಳಿಗೆ ಮತ್ತೊಂದು ಶುಭ ಸುದ್ದಿ ಇರುವುದಂತೂ ಖಂಡಿತ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment