WhatsApp Logo

ಅಂದು ಮದುವೆ ಆಗಿದ್ದ ಯಶ್ ಮತ್ತು ರಾಧಿಕಾ ಮದುವೆ ಪತ್ರಿಕೆಯಲ್ಲಿ ನಿಜಕ್ಕೂ ಏನೆಲ್ಲಾ ಬರೆದಿಡಲಾಗಿತ್ತು ಗೊತ್ತ ..… ನೋಡಿ

By Sanjay Kumar

Updated on:

ಜೀವನದಲ್ಲಿ ಕಷ್ಟ ಬಂದಾಗ ಕುಗ್ಗದೆ ಮುಂದೆ ಸಾಗಬೇಕು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬಾರದು ಸುಮ್ಮನೆ ಮುನ್ನುಗ್ಗುತ್ತಾ ಇರಬೇಕು ಎಂದು ತಿಳಿಸಿ ಕೊಟ್ಟಂತಹ ಜೀವಂತ ಉದಾಹರಣೆ ನಮ್ಮ ನಡುವೆಯೇ ಬಹಳಷ್ಟು ಜನರಿದ್ದಾರೆ ಹಾಗೂ ಸ್ನೇಹಿತರ ಕಷ್ಟ ಬಂದರೂ ಕೂಡ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಾನಂದುಕೊಂಡದ್ದನ್ನು ಮಾಡಬೇಕು ತಾನಂದುಕೊಂಡದ್ದು ನನ್ನ ಜೀವನದಲ್ಲಿ ನಡೆಯಲೇ ಬೇಕು ಅಲ್ಲಿಯವರೆಗೂ ನಾನು ಮುನ್ನುಗ್ಗುತ್ತಲೇ ಇರುತ್ತೇನೆ .

ಎಂದು ಪಣತೊಟ್ಟು ತಾ1ಕೊಂಡಂತೆ ಜೀವನದಲ್ಲಿ ಯಶಸ್ಸು ಪಡೆದುಕೊಂಡವರಲ್ಲಿ ಇವರು ಸಹ ಒಬ್ಬರು ಹೌದು ಮೊಗ್ಗಿನ ಮನಸು ಆಕೆ ಚಂದನವನಕ್ಕೆ ಬಂದ ಬಳಿಕ ರಾಜಧಾನಿ ರಾಜಾಹುಲಿ ಮಾಸ್ಟರ್ ಪೀಸ್ ರಾಮಾಚಾರಿ ಎಂಬ ಸೂಪರ್ ಡೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಇಂದು ಕೆಜಿಎಫ್ ಚಿತ್ರದ ಮೂಲಕ ಇಡೀ ವಿಶ್ವದೆಲ್ಲೆಡೆ ಎಲ್ಲರ ಬಾಯಲ್ಲಿಯೂ ರಾಕಿ ಭಾಯ್ ರಾಕಿ ಭಾಯ್ ಅನ್ನುವ ಹಾಗೆ ಮಾಡಿರುವ ನಟ ಯಶ್ ನಿಜಕ್ಕೂ ಇಂದಿನ ಯುವ ಪೀಳಿಗೆಗೆ ಮಾದರಿ ಅಂತ ಹೇಳಬಹುದು.

ಹೌದು ಅದು ಜೀವನದಲ್ಲಿ ಏನನ್ನಾದರೂ ಸಾಧಿಸಲೇ ಬೇಕೆಂದು ಬೆಂಗಳೂರಿಗೆ ಬಂದು ಬಸ್ ಸ್ಟಾಂಡ್ ನಲ್ಲಿ ಮಲಗಿ ಕೊನೆಗೆ ಏನಾದರೂ ಸಾಧಿಸಲೇಬೇಕೆಂದು ಕಿರುತೆರೆಯಲ್ಲಿ ಅವಕಾಶ ಪಡೆದುಕೊಂಡು ಕಿರುತೆರೆಯಲ್ಲಿ ಅಭಿನಯಿಸುವ ಮೂಲಕ ನಂತರ ಹಿರಿತೆರೆಯಲ್ಲಿ ಅವಕಾಶ ಪಡೆದುಕೊಂಡು ಇಂದು ಇಡೀ ವಿಶ್ವವೇ ತಮ್ಮತ್ತ ತಿರುಗಿ ನೋಡುವ ಹಾಗೆ ಮಾಡಿರುವಂತಹ ನಟ ಯಶ್ ಖಂಡಿತ ಎಲ್ಲರಿಗೂ ಮಾದರಿಯಾಗಿದ್ದಾರೆ ಹಾಗೆ ಅಂದು ಸ್ನೇಹಿತರಾಗಿದ್ದು ಎಂದು ಸಂಗಾತಿಗಳಾಗಿರುವ ದಂಪತಿಗಳಾಗಿರುವ ಈ ಜೋಡಿ, ಸ್ಯಾಂಡಲ್ ವುಡ್ ನ ಕ್ಯೂಟೆಸ್ಟ್ ಕಪಲ್ ಆಗಿದ್ದಾರೆ.

ಹೌದು ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಅವರನ್ನು ನೀವು ತೆರೆ ಮೇಲೆ ಸಾಕಷ್ಟು ಸಿನಿಮಾಗಳಲ್ಲಿ ನೋಡಿದ್ದೀರಾ ಹಾಗೂ ಅವರಿಬ್ಬರೂ ಒಂದಾಗಲಿ ಎಂದು ಹಾರೈಸಿದ್ದರು ಕೂಡ ಅದರಂತೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಬ್ಬರ ಮಕ್ಕಳ ತಂದೆ ತಾಯಿ ಆಗಿರುವ ಪೋಷಕರು ಜೀವನದಲ್ಲಿ ಬಹಳ ಏರಿಳಿತಗಳನ್ನೂ ಒಟ್ಟಿಗೆ ಕಂಡಿದ್ದಾರೆ ಅದನ್ನೂ ಎದುರಿಸಿದ್ದಾರೆ. ಇಂದು ತಮ್ಮ ಕಷ್ಟಗಳಿಗೆಲ್ಲಾ ಬಾಯ್ ಬಾಯ್ ಹೇಳಿ ಸುಂದರವಾದ ಬದುಕು ಕಟ್ಟಿಕೊಂಡಿರುವ ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಅವರ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಏನೆಂದು ಭರಿಸಲಾಗಿತ್ತು ಗೊತ್ತಾ ನೀವು ಕೂಡ ಅಚ್ಚರಿ ಪಡ್ತೀರಾ ಇದು ಕಣ್ರಿ ಅಭಿಮಾನ ಅಂದ್ರೆ ಅಂತಿರಾ ಹೌದು ಸ್ನೇಹಿತರೆ ಹಾಗಾದರೆ ಬನ್ನಿ ಇವರ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಏನೆಂದು ಬರೆದಿತ್ತು ಅಂತ ತಿಳಿಯೋಣ ಈ ಕೆಳಗಿನ ಪುಟದಲ್ಲಿ.

ನಮಸ್ತೆ, ”ಇಲ್ಲಿ ಎಲ್ಲರೂ ಸಂಬಂಧಿಕರೆ ಇಲ್ಲಿ ಎಲ್ಲವೂ ಅನುಬಂಧವೆ. ಸಹನೆ ಮರವೆಂಬುದನ್ನೂ ತಬ್ಬಿದ ಜೀವಲತೆಯಲ್ಲಿ ನಲುಮೆ ಹೂ ಅರಳಿದೆ! ಹಸನಾದ ಬಾಳ ನಂದನವನಕ್ಕಿಂದು ನಿತ್ಯನೂತನ ಚಿರವಸಂತ ಬಂದಿದೆ. ನಮ್ಮ ಈ ಸಂತಸದ ವೇಳೆ, ತಾಳಿ ಬಿಗಿಯುವುದಾದರೂ ಹೇಗೆ ಹೇಳಿ ನೀವೆಲ್ಲ ಬಾರದೇ?!!. ಸಂಬಂಧಕ್ಕಿಂತ ಕುಟುಂಕ್ಕಿಂತ ದೊಡ್ಡದು ಯಾವುದೂ ಇಲ್ಲ. ನೀವೆಲ್ಲ ನಮ್ಮ ಕುಟುಂಬದವರೆಂಬ ಹೆಮ್ಮೆಗಿಂತ ಬೇರ್ಯಾವ ಹೆಮ್ಮೆ ಬೇಕಿಲ್ಲ ನಮಗೆ.

ನಿಮ್ಮ ಪ್ರೀತಿ ಆದರಗಳಿಗಿಂತ ಮಿಗಿಲಾದದ್ದು ಬೇರೆ ಯಾವುದು ಇಲ್ಲ. ಇಲ್ಲಿ ಬರೆದುದಕ್ಕಿಂತ ಬರೆಯದ ಪದಗಳೇ ಹೆಚ್ಚು. ನಿಮ್ಮ ಆಗಮನವೇ ನಮ್ಮಿಬ್ಬರ ಜೋಡಿ ಜೀವಗಳಿಗೆ ಸ್ಪೂರ್ತಿ. ದಯಮಾಡಿ ಸಕಲರೂ ನಮ್ಮ ವಿವಾಹ ಸಂಭ್ರಮಕ್ಕೆ ತಪ್ಪದೇ ಬನ್ನಿ ನಮ್ಮನ್ನ ಹರಿಸಿ ಅಷ್ಟೇ…. ಯಶ್ ಹಾಗೂ ರಾಧಿಕಾ. ತಮ್ಮ ಕಲ್ಯಾಣ ಸಮಾರಂಭಕ್ಕೆ ಸರ್ವರಿಗೂ ಪ್ರೀತಿಯಿಂದ ಆಹ್ವಾನ ಮಾಡಿರುವ ಯಶ್ ಹಾಗೂ ರಾಧಿಕಾ, ಇನ್ನೂ ಆಮಂತ್ರಣ ಪತ್ರಿಕೆಯ ಕೊನೆಯಲ್ಲಿ, ಇಬ್ಬರು ತಮ್ಮ ಹೆಬ್ಬೆಟ್ಟಿನ ಬೆರಳಚ್ಚನ್ನ ಹೃದಯಾಕಾರವಾಗಿ ಮುದ್ರಿಸಿದ್ದರು. ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನ ಕ್ಯೂಟೆಸ್ಟ್ ಜೋಡಿಗಳಲ್ಲಿ ಒಂದಾದ ಯಶ್ ದಂಪತಿಗಳ ಆಮಂತ್ರಣ ಪತ್ರಿಕೆ ವಿಭಿನ್ನ ಹಾಗೂ ಹೊಸತನದಿಂದ ಕೂಡಿತ್ತು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment