WhatsApp Logo

ಮಹಿಳೆಯರು ಶುಕ್ರವಾರ ದಿನ ಈ ಮಂತ್ರವನ್ನ ಪಾಲಿಸಿದರೆ ಮಹಾಲಕ್ಷ್ಮಿ ಅನುಗ್ರಹ ಸಿಗುತ್ತದೆ.. ಮನೆಯಲ್ಲಿ ಕಾಂಚಾಣ ಕುಣಿಯುತ್ತದೆ…

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೆ ವಿಷ್ಣುಸಹಸ್ರನಾಮದಲ್ಲಿ ಉಲ್ಲೇಖಗೊಂಡಿರುವಂಥ ಈ ಮಂತ್ರವನ್ನು ಶುಕ್ರವಾರದ ದಿನದಂದು ಹೆಣ್ಣುಮಕ್ಕಳು ಪಠಿಸುತ್ತಾ ಬಂದದ್ದೇ ಆದಲ್ಲಿ ಮನೆಯಲ್ಲಿ ಆಗುವ ಬದಲಾವಣೆ, ನೀವು ಎಂದಿಗೂ ಊಹಿಸಿರುವುದಿಲ್ಲ…

ಹೌದು ಗಾಯತ್ರಿ ಮಂತ್ರದ ಬಗ್ಗೆ ನಿಮಗೆ ಗೊತ್ತೇ ಇದೆ ಅಲ್ವಾ ಹೌದು ಈ ಮಂತ್ರದ ಉಚ್ಚಾರಣೆ ಮತ್ತು ಈ ಮಂತ್ರವನ್ನು ಕೇಳುವುದರಿಂದ ನಮ್ಮಲ್ಲಿ ಪಾಸಿಟಿವಿಟಿ ಉಂಟಾಗುತ್ತದೆ ಎಂದು ಸ್ವತಃ ವಿಜ್ಞಾನವೇ ತಿಳಿಸಿದ ಅಂತಹದರಲ್ಲಿ ನಮ್ಮ ಹಿಂದೂ ಸಂಪ್ರದಾಯದ ಪ್ರತಿಯೊಂದು ಮಂತ್ರಿಗಳಿಗೂ ಕೂಡ ಅದರದ್ದೇ ಆದ ಶಕ್ತಿ ಇದೆ ಜೊತೆಗೆ ಆಂಜನೇಯನ ಹನುಮಾನ್ ಚಾಲೀಸಾ ಕೂಡ ಅದರದ್ದೇ ಆದ ಮಹತ್ವವನ್ನು ಹೊಂದಿದೆ ಮತ್ತು ಅದನ್ನು ಪ್ರತೀಕವಾದ ಸಮಯದಲ್ಲಿ ಪ್ರತೀಕವಾಗಿ ಪಠಣೆ ಮಾಡುವುದರಿಂದ ಅಥವಾ ಆ ಮಂತ್ರವನ್ನು ಕೇಳುವುದರಿಂದ ಆಗುವ ಬದಲಾವಣೆ ನಮ್ಮ ವಾತಾವರಣದಲ್ಲಿ ಉಂಟಾಗುವ ಬದಲಾವಣೆ ನಿಜಕ್ಕೂ ಹೇಳತೀರದು.

ಹಾಗಾಗಿ ನಮ್ಮ ಹಿಂದೂ ಸಂಪ್ರದಾಯದ ಪ್ರತಿಯೊಂದು ಮಂತ್ರಿಗಳಿಗೂ ಕೂಡ ವಿಶೇಷ ಶಕ್ತಿ ಇದೆ ಎಂದು ಹೇಳಲಾಗಿದೆ ಹಾಗೆ ಮಂತ್ರದ ಪ್ರತಿಯೊಂದು ಪದವೂ ಕೂಡ ವಿಶೇಷ ಶಕ್ತಿಯನ್ನು ಹೊಂದಿರುತ್ತದೆ ವಾತಾವರಣದಲ್ಲಿ ಆ ಪದದ ತರಂಗ ಇರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಅಲ್ಲಿ ಸಕಾರಾತ್ಮಕ ಶಕ್ತಿಯನ್ನು ಉಂಟು ಮಾಡುತ್ತದೆ ಹಾಗಾಗಿಯೇ ದೇವಸ್ಥಾನಗಳಿಗೆ ಹೋದಾಗ ಅಲ್ಲಿ ಎಲೆಕ್ಟ್ರೋ ಮ್ಯಾಗ್ನೆಟಿಕ್ ಶಕ್ತಿ ಇರುವುದನ್ನು ನಾವು ನೀವು ಗಮನಿಸಬಹುದು.

ಈ ಎಲೆಕ್ಟ್ರೋಮ್ಯಾಗ್ನೆಟಿಕ್ ಎನರ್ಜಿ ಬಗ್ಗೆ ನೀವು ಕೇಳಿದ್ದೀರಾ ಇದು ಬ್ರಹ್ಮಾಂಡದಲ್ಲಿ ಅಡಗಿರುವ ವಿಶೇಷ ಶಕ್ತಿಯಾಗಿದೆ ಇದು ನಮ್ಮಲ್ಲಿರುವ ನಕಾರಾತ್ಮಕತೆಯನ್ನು ಹೊರಹಾಕಿ ನಮ್ಮಲ್ಲಿ ಪಾಸಿಟಿವಿಟಿ ಹೆಚ್ಚಿಸುತ್ತದೆ. ಈ ದಿನದ ಮಾಹಿತಿ ಯಲ್ಲಿಯೂ ಕೂಡ ವಿಶೇಷ ಮಂತ್ರ ವೊಂದರ ಬಗ್ಗೆ ನಿಮಗೆ ಪರಿಚಯಿಸಿಕೊಡಲು ಬಂದಿದ್ದೇವೆ ಮತ್ತು ಇದನ್ನು ಹೆಣ್ಣುಮಕ್ಕಳು ಪ್ರತ್ಯೇಕವಾದ ದಿನದಂದು ಅಂದರೆ ಈ ಮಂತ್ರ ಲಕ್ಷ್ಮೀ ದೇವಿಗೆ ಪ್ರಿಯವಾದ ಮಂತ್ರ ಆಗಿದ್ದು, ಈ ಮಂತ್ರ ಹುಟ್ಟಿಕೊಂಡ ಬಗೆಯನ್ನು ಕೂಡ ನೀವು ತಿಳಿಯಲೇಬೇಕು. ಹೌದು ಸಮುದ್ರ ಮಥನದ ವೇಳೆ ಲಕ್ಷ್ಮೀದೇವಿ ಜನಿಸುತ್ತಾಳೆ ಆಗ ಅಸುರರು ದೇವಾನುದೇವತೆಗಳು ಲಕ್ಷ್ಮೀದೇವಿಯನ್ನು ಮೇಲಕ್ಕೆತ್ತುವಾಗ ಲಕ್ಷ್ಮೀ ದೇವಿಯ ತವರು ಮನೆಯವರು ಲಕ್ಷ್ಮೀದೇವಿಯನ್ನು ಅಡಿಯಿಂದ ಮುಡಿಯವರೆಗೂ ವರ್ಣಿಸುವಾಗ ಈ ಮಂತ್ರ ಹುಟ್ಟಿಕೊಂಡಿದ್ದು.

ಹಾಗಾಗಿ ಈ ವಿಶೇಷ ಮಂತ್ರವನ್ನ ಪ್ರತ್ಯೇಕವಾಗಿ ಲಕ್ಷ್ಮೀ ದೇವಿಗೆ ಪ್ರಿಯವಾದ ದಿನದಂದೇ ಪಠಿಸಬೇಕು ಆ ಮಂತ್ರ ಯಾವುದು ಅಂದರೆ ಅದನ್ನು ನೀವು ವಿಷ್ಣುಸಹಸ್ರನಾಮ ಪುಸ್ತಕ ದಲ್ಲಿ ಕೊನೆಯ ಭಾಗದಲ್ಲಿ ಸ್ತ್ರೀ ಯುಕ್ತ ಮಂತ್ರ ಮತ್ತು ಪುರುಷ ಯುಕ್ತ ಮಂತ್ರ ಎಂಬ ಪುಟ್ಟ ಬರುತ್ತದೆ ಅಲ್ಲಿ ಸ್ತ್ರೀ ಯುಕ್ತ ಮಂತ್ರವನ್ನು ಶುಕ್ರವಾರದ ದಿನದಂದು ಹೆಣ್ಣುಮಕ್ಕಳು ಪಠಿಸಬೇಕು ಯಾವ ಸಮಯದಲ್ಲಿ ಅಂದರೆ ಸಂಜೆ ಗೋಧೂಳಿ ಸಮಯದಲ್ಲಿ ಈ ಮಂತ್ರ ಪಠಿಸು ವುದರಿಂದ ಆಗುವ ಬದಲಾವಣೆ ನಿಜಕ್ಕೂ ಅಪಾರವಾದುದು ನೀವು ಊಹೆ ಮಾಡಿರುವುದಿಲ್ಲ ಅಂಥದೊಂದು ಬದಲಾವಣೆಯನ್ನು ನೀವು ನಿಮ್ಮ ಜೀವನದಲ್ಲಿ ಕಾಣಬಹುದು ಲಕ್ಷ್ಮೀದೇವಿಯ ಅನುಗ್ರಹವನ್ನು ಸಹ ನೀವು ಪಡೆಯಬಹುದು.

ಈ ಮಂತ್ರ ಶಕ್ತಿಶಾಲಿ ಮಂತ್ರವಾಗಿದ್ದು ಹೆಣ್ಣುಮಕ್ಕಳು ಪಠಿಸಬೇಕು. ಹೌದು ವಿಷ್ಣು ಸಹಸ್ರನಾಮದ ಭಾಗವಾಗಿರುವ ಸ್ತ್ರಿ ಯುಕ್ತ ಮಂತ್ರವು ಆರ್ಥಿಕ ಬಿಕ್ಕಟ್ಟುಗಳನ್ನು ಪರಿಹಾರ ಮಾಡುತ್ತದೆ. ಅಷ್ಟೇ ಅಲ್ಲ ಮನೆಯ ಯಜಮಾನ ಕೆಲಸ ಮಾಡುತ್ತ ಇರುವಂತಹ ಸ್ಥಳದಲ್ಲಿ ತೊಂದರೆಗಳನ್ನು ಅನುಭವಿಸುತ್ತ ಇದ್ದಾರೆ ಅಂದರೆ ಅಥವಾ ಉದ್ಯೋಗ ಸಂಬಂಧಿ ಸಮಸ್ಯೆಗಳು ಕಾಡುತ್ತಿದೆ ಅನ್ನುವವರು ಈ ಮಂತ್ರವನ್ನು ಪಠಿಸಬಹುದು ಮನೆಯ ಹೆಣ್ಣುಮಕ್ಕಳು ಈ ಮಂತ್ರವನ್ನು ಪಠಣ ಮಾಡುವುದರಿಂದ ಅದರಲ್ಲಿಯೂ ಸೂರ್ಯಸ್ತದ ಸಮಯದಲ್ಲಿ ಬರುವ ಗೋಧೂಳಿ ಲಗ್ನದಲ್ಲಿ ಈ ಮಂತ್ರ ಪಠಣೆ ಮಾಡುವುದರಿಂದ ಆಗುವ ಲಾಭ ಅಪಾರವಾದದ್ದು. ಈ ಶಕ್ತಿಶಾಲಿ ಮಂತ್ರ ಪಠಣೆ ಮಾಡಿ ಮತ್ತು ತಾಯಿಯ ಕೃಪೆಗೆ ಪಾತ್ರರಾಗಿ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment