WhatsApp Logo

100 ವರ್ಷಗಳ ಕಾಲ ನಿಮ್ಮ ಕಣ್ಣುಗಳಲ್ಲಿ ದೃಷ್ಟಿದೋಷ ಬರದೇ ಇರಲು ಮನೆಯಲ್ಲೇ ಈ ಮನೆಮದ್ದನ್ನ ಮಾಡಿ ನೋಡಿ … ಕನ್ನಡಕ ಹಾಕೋ ಸಮಯ ನಿಮ್ಮ ಹತ್ತಿರ ಬರೋದೇ ಇಲ್ಲ…

By Sanjay Kumar

Updated on:

ನಿಮಗೇನಾದರೂ ಮಂಡಿ ನೋವೆ? ಮಾತ್ರೆ ತೆಗೆದುಕೊಂಡರೂ ನೋವು ನಿವಾರಣೆ ಆಗ್ತಿಲ್ವಾ ಹಾಗದರೆ ಪ್ರತಿದಿನ ಬೆಳಗ್ಗೆ ಹಾಲಿಗೆ ಈ ಮನೆಯಲ್ಲೆ ತಯಾರಿಸಿದ ಪುಡಿ ಮಿಶ್ರಣ ಮಾಡಿ ಕುಡಿಯಿರಿ ನೋವು ಪಟಾಪಟ್ ಮಾಯ ಆಗುತ್ತದೆ…ನಮಸ್ಕಾರಗಳು ಪ್ರಿಯ ಓದುಗರೇ ಇಂದಿನ ಮಾಹಿತಿಯಲ್ಲಿ ಮಂಡಿನೋವು ಕೀಲುನೋವು ಹಾಗೂ ಮೂಳೆಗಳು ಬಲಗೊಳ್ಳುವುದಕ್ಕೆ ಸುಲಭ ಪರಿಹಾರವನ್ನು ತಿಳಿಸಿಕೊಡುತ್ತೇವೆ, ಈ ಪರಿಹಾರುವನ್ನು ಮಾಡುವುದರಿಂದ ನಿಮ್ಮ ಕಣ್ಣಿನ ದೃಷ್ಟಿ ಸಮಸ್ಯೆಗೆ ಕೂಡ ಪರಿಹಾರ ಆಗುತ್ತದೆ ಹಾಗಾಗಿ ಈ ಲೇಖನವನ್ನು ನೀವು ಸಂಪೂರ್ಣವಾಗಿ ತಿಳಿದು ಈ ಮನೆಮದ್ದನ್ನು ಪ್ರತಿದಿನ ಪಾಲಿಸುತ್ತಾ ಬನ್ನಿ ಇದರಿಂದ ಬಹಳಷ್ಟು ಅರೋಗ್ಯಕರ ಲಾಭಗಳು ದೊರೆತು ನೀವು ಅಂದುಕೊಳ್ಳದ ರೀತಿಯಲ್ಲಿ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಇದರಲ್ಲಿ ನಾವು ಬಳಕೆ ಮಾಡುತ್ತಿರುವ ಪದಾರ್ಥ ಯಾವುದು ದುಬಾರಿ ಅಲ್ಲ ಜೊತೆಗೆ ನಿಮ್ಮ ಆರೋಗ್ಯಕ್ಕೆ ಬೇಕಾಗಿರುವಂತಹ ಪದಾರ್ಥಗಳೇ ಆಗಿವೆ.

ಹೌದು ಬಹಳಷ್ಟು ಮನೆಮದ್ದುಗಳನ್ನು ಈಗಾಗಲೇ ತಿಳಿಸಿಕೊಟ್ಟಿದ್ದೇವೆ ಅದರಲ್ಲಿ ಯಾವುದನ್ನು ಪಾಲಿಸುವುದು ಯಾವುದನ್ನು ಬಿಡುವುದು ಎಂಬ ಗೊಂದಲ ಈಗಾಗಲೇ ಬಹಳಷ್ಟು ಜನರಿಗೆ ಕಾಡುತ್ತಾ ಇರುತ್ತದೆ ಆದರೆ ಒಬ್ಬೊಬ್ಬರಿಗೆ ಒಂದೊಂದು ಪದಾರ್ಥಗಳು ಶರೀರಕ್ಕೆ ಒದಗುವುದರಿಂದ ಯಾವ ಮನೆಮದ್ದುಗಳು ನಮಗೆ ಸೆಟ್ ಆಗುತ್ತದೆಯೋ ಅದನ್ನು ಪಾಲಿಸುವುದು ಒಳ್ಳೆಯದು ಹಾಗೂ ಆರೋಗ್ಯ ಕೂಡ ಉತ್ತಮವಾಗಿದೆ.ಹಾಗಾಗಿ ನಿಮ್ಮ ದೇಹಕ್ಕೆ ಯಾವ ಪದಾರ್ಥಗಳು ಆಗಿ ಬರುತ್ತದೆ ಆ ಪದಾರ್ಥದಿಂದ ಮಾಡಿದ ಮನೆಮದ್ದುಗಳ ನಾ ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಈಗ ಕಣ್ಣಿನ ದೃಷ್ಟಿ ಮೂಳೆಗಳು ಬಲಗೊಳ್ಳುವುದಕ್ಕೆ ಮಾಡಬಹುದಾದ ಮನೆಮದ್ದಿನ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಈ ಪರಿಹಾರ ಮಾಡುವುದಕ್ಕೆ ನಮಗೆ ಬೇಕಾಗಿರುವುದು ಕಲ್ಲುಸಕ್ಕರೆ ಮೆಣಸಿನಕಾಳು ಬಾದಾಮಿ ಜೊತೆಗೆ ಹಾಲು. ಹೌದು ಪ್ರತಿದಿನ ಹಾಲು ಕುಡಿಯುವುದರಿಂದ ಆಗುವ ಲಾಭಗಳೇನು ಅಂತ ಗೊತ್ತೇ ಇದೆ ಅಲ್ವಾ ಹೌದು ಹಾಲಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ನಮ್ಮ ಆರೋಗ್ಯಕ್ಕೆ ಒಳ್ಳೆಯದು ನಮ್ಮ ಜೀರ್ಣ ಶಕ್ತಿಗೆ ಉತ್ತಮ ಹಾಗೆ ಕರುಳಿನ ಆರೋಗ್ಯಕ್ಕೂ ಒಳ್ಳೆಯದು.ಇನ್ನೂ ಬಾದಾಮಿ ಕಣ್ಣಿನ ದೃಷ್ಟಿ ವೃದ್ಧಿಗೆ ಸಹಕಾರಿ, ಈ ಮನೆ ಮದ್ದಿನಲ್ಲಿ ಬಳಕೆ ಮಾಡುತ್ತಿರುವ ಈ ಕಲ್ಲು ಸಕ್ಕರೆ ಕೂಡ ಜೀರ್ಣಶಕ್ತಿಗೆ ಉತ್ತಮ ಹಾಗೂ ಕಲ್ಲುಸಕ್ಕರೆಯನ್ನು ನಾವು ಬಳಸುವುದರಿಂದ ಇದು ರಕ್ತದ ಶುದ್ಧಿಗೂ ಸಹ ಕಾರಣವಾಗುತ್ತದೆ.

ಇನ್ನು ಮೆಣಸಿನ ಕಾಳು ಕೂಡ ಆರೋಗ್ಯಕ್ಕೆ ಒಳ್ಳೆಯದು ಹಾಗೆ ವಾತ ಪಿತ್ತ ಕಫದ ಸಮಸ್ಯೆ ಕೂಡ ನಿವಾರಣೆ ಮಾಡುವಲ್ಲಿ ಮೆಣಸಿನಕಾಳು ಪ್ರಯೋಜನಕಾರಿ ಹಾಗಾಗಿ ಈ ಮನೆ ಮದ್ದಿನಲ್ಲಿ ಈ ಎಲ್ಲಾ ಸಮಸ್ಯೆಗಳಿಗೂ ಕೂಡ ಪರಿಹಾರ ನೀಡುವ ಅಂಶಗಳಿದ್ದು ಮೆಣಸಿನ ಕಾಳು ಹಾಗೂ ಬಾದಾಮಿ ಅನ್ನೋ ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ ಬಾದಾಮಿಯನ್ನು ನೆನೆಸಿಟ್ಟು ಸಿಪ್ಪೆ ತೆಗೆದು ಮೆಣಸಿನ ಕಾಳಿನ ಜೊತೆ ಕುಟ್ಟಿ ಪುಡಿ ಮಾಡಿಕೊಳ್ಳಿ ಈ ಕುಟ್ಟಿ ಪುಡಿ ಮಾಡಿ ಕೊಳ್ಳುವಾಗ ಕಲ್ಲುಸಕ್ಕರೆಯನ್ನು ಕೂಡ ಜೊತೆಗೆ ಹಾಕಿ.

ಇದೀಗ ಈ ಪದಾರ್ಥಗಳ ಮಿಶ್ರಣವನ್ನ ಕುಟ್ಟಿ ಪುಡಿ ಮಾಡಿಕೊಂಡು ಏರ್ ಟೈಟ್ ಕಂಟೈನರ್ ನಲ್ಲಿ ಶೇಖರಣೆ ಮಾಡಿ ಇಟ್ಟುಕೊಳ್ಳಿ ಪ್ರತಿದಿನ ಹಾಲು ಕುಡಿಯುವ ಸಮಯದಲ್ಲಿ ಹಾಲಿಗೆ ಅರ್ಧ ಅಥವಾ ಒಂದು ಚಮಚದಷ್ಟು ಪುಡಿಯನ್ನು ಮಿಶ್ರಮಾಡಿ ಕುಡಿಯುತ್ತಾ ಬನ್ನಿ. ಯಾವುದೇ ಸಕ್ಕರೆ ಬೆಲ್ಲ ಜೇನುತುಪ್ಪದ ಮಿಶ್ರಣ ಮಾಡಬೇಕಿಲ್ಲ ಇದಿಷ್ಟೇ ಸಾಕು. ಇದರಿಂದ ನೀವು ಕನ್ನಡಕ ಧರಿಸುತ್ತಿದ್ದರು ನಿಮ್ಮ ಕಣ್ಣಿನ ದೃಷ್ಟಿ ವೃದ್ಧಿ ಆಗಿ ಕನ್ನಡಕ ಬಳಸುವುದು ಬೇಡ.ಅಷ್ಟೆಲ್ಲಾ ಮೂಳೆಗಳು ಬಲಗೊಳ್ಳುತ್ತವೆ ಇದೊಂದು ಪರಿಹಾರದಿಂದ ಹೀಗೆ ಮಾಡಿ ಜೊತೆಗೆ ಪ್ರತಿದಿನ ಆಗದಿದ್ದರೂ ವಾರಕ್ಕೆ 3 ಬಾರಿಯಾದರೂ ಹಣ್ಣುಗಳನ್ನು ತಿನ್ನಿ ಸೀಸನಲ್ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ ಹಾಗೆ ಪ್ರತಿದಿನ ಆಹಾರದಲ್ಲಿ ತರಕಾರಿ ಸೊಪ್ಪು ಬಳಸಿ ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment