WhatsApp Logo

ವರ್ಷಕ್ಕೆ ಈ ಡ್ರಿಂಕ್ ಎರಡು ಬಾರಿ ಕುಡಿಯಿರಿ ಸಾಕು ನಿಮ್ಮ ಲಿವರ್ ಚೆನ್ನಾಗಿ ಶುದ್ದಿ ಆಗುತ್ತದೆ .. ಹಾಗು ಮೂವತ್ತಕ್ಕೂ ಹೆಚ್ಚು ರೋಗಗಳು ನಿಮ್ಮ ಹತ್ತಿರ ಕೂಡ ಸುಳಿಯೋದಿಲ್ಲ…

By Sanjay Kumar

Updated on:

ಲಿವರ್ ಶುದ್ದಿಗೆ ಹೀಗೆ ಮಾಡಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಿ ನಿಮ್ಮ ಲಿವರ್ ಸಂಬಂಧಿ ಸಮಸ್ಯೆಗಳಿಗೆ ಶಮನ ನೀಡುತ್ತದೆ, ಇದನ್ನು ಮಾಡುವುದು ಹೇಗೆ ಮತ್ತು ಯಾವ ಸಮಯದಲ್ಲಿ ಹೇಗೆ ಮಾಡಬೇಕು, ಎಂಬುದರ ಕುರಿತು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.ಲಿವರ್ ಅಂದರೆ ನಮ್ಮ ಬಾಡಿ ಗೆ ಡಿ ಬಾಸ್ ಅನ್ನಬಹುದು, ನಮ್ಮ ಶರೀರದಲ್ಲಿ ಸಂಪೂರ್ಣ ಕೆಲಸಗಳು ಸರಿಯಾಗಿ ನಡೆಯಬೇಕು ಅಂದರೆ ಈ ಯಕೃತ್ ಚೆನ್ನಾಗಿ ಕೆಲಸ ಮಾಡಬೇಕು.

ಹಾಗಾಗಿ ಲಿವರ್ ಫೇಲ್ ಆಗುತ್ತಿದ್ದ ಹಾಗೆ ವ್ಯಕ್ತಿಯಲ್ಲಿ ಒಂದೊಂದೆ ಕಾರ್ಯಚಟುವಟಿಕೆಗಳು ನಿಂತುಹೋಗಿ ವ್ಯಕ್ತಿಯ ಪ್ರಾಣ ಪಕ್ಷಿ ಹಾರಿ ಹೋಗುತ್ತೆ.ಆದ್ದರಿಂದ ಲಿವರ್ ಆರೋಗ್ಯ ಕುರಿತು ನಾವು ಹೆಚ್ಚು ಕಾಳಜಿ ಮಾಡಬೇಕಿರುತ್ತದೆ ಸುಮಾರು ನೂರಕ್ಕೂ ಅಧಿಕ ಕಾರ್ಯಚಟುವಟಿಕೆಗಳನ್ನು ಲಿವರ್ ಒಂದೇ ಮಾಡುತ್ತ ಹಾಗಾಗಿ ಇದು ನಮ್ಮ ದೇಹದ ಡಿ ಬಾಸ್ ಅಂತ ಹೇಳಬಹುದು.

ಲಿವರ್ ಕಾರ್ಯಚಟುವಟಿಕೆಯ ಮೇಲೆ ಹೇಗೆ ನಮ್ಮ ಜೀವನಶೈಲಿ ಪ್ರಭಾವ ಬೀರುತ್ತಿದೆ ಅನ್ನೋದು ನಿಮಗೆ ಗೊತ್ತಾ?ಹೌದು ನಮ್ಮ ಲಿವರ್ ಗೆ ಸಂಬಂಧಿಸಿದ ಫ್ಯಾಟಿ ಲಿವರ್ ಸಮಸ್ಯೆ ಅನ್ನೋದು ಬಹಳ ದೊಡ್ಡ ಸಮಸ್ಯೆ ಆಗಿದೆ ಈ ಫ್ಯಾಟಿ ಲಿವರ್ ಸಮಸ್ಯೆ ಮುಂದಿನ ದಿನಗಳಲ್ಲಿ ಜಾಂಡೀಸ್ಗೆ ತಿರುಗಬಹುದು ಅಥವಾ ಈ ಫ್ಯಾಟಿ ಲಿವರ್ ಸಮಸ್ಯೆ ಇನ್ನೂ ದೊಡ್ಡದಾಗಿ ಇಡೀ ಶರೀರದ ಆರೋಗ್ಯವನ್ನು ಹಾಳು ಮಾಡಬಹುದು.

ಹಾಗಾಗಿ ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕ ನಿಮ್ಮ ಕೆಟ್ಟ ಚಟುವಟಿಕೆ ಗಳಾಗಿರುವ ಧೂಮಪಾನ ಮದ್ಯಪಾನ ಹಾಗೂ ಕರಿದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುವುದು ಹೆಚ್ಚು ಕೊಲೆಸ್ಟ್ರಾಲ್ ಅಂಶ ಇರುವ ಆಹಾರ ಪದಾರ್ಥಗಳನ್ನು ತಿನ್ನುವುದು, ಇಂತಹ ಎಲ್ಲ ಸಮಸ್ಯೆಗಳು ನೇರವಾಗಿ ಲಿವರ್ ಮೇಲೆ ಪ್ರಭಾವ ಬೀರಿ ಲಿವರ್ ಕಾರ್ಯಚಟುವಟಿಕೆಯನ್ನ ಕಡಿಮೆ ಮಾಡಿಸುತ್ತಾ ಬರುತ್ತದೆ.

ಯಾವಾಗ ಫ್ಯಾಟಿ ಲಿವರ್ ಸಮಸ್ಯೆ ಉಂಟಾಗುತ್ತೆ ತಕ್ಷಣವೇ ಅದು ಲಿವರ್ ಆರೋಗ್ಯವನ್ನ ಕಡಿಮೆ ಮಾಡಿಬಿಡುತ್ತದೆ.ಆಗ ನಾವು ತಕ್ಷಣವೇ ಲಿವರ್ ಕಳಚಿ ಮಾಡದೆ ಅದನ್ನು ನಿರ್ಲಕ್ಷ್ಯ ಮಾಡುತ್ತಾ ಹೋದರೆ ಈ ಮೇಲೆ ತಿಳಿಸಿದಂತೆ ಜಾಂಡಿಸ್ ಆಗಲಿ ಅಥವಾ ಕೊಲೆಸ್ಟ್ರಾಲ್ ಸಮಸ್ಯೆ ಅಂತಹ ತೊಂದರೆಗಳು ಉದ್ಭವವಾಗಿ ಇದು ಸಂಪೂರ್ಣ ಆರೋಗ್ಯವನ್ನೇ ಹಾಳು ಮಾಡಿಬಿಡುತ್ತದೆ.

ಈಗ ಲಿವರ್ ಸಂಬಂಧಿ ಸಮಸ್ಯೆಗಳು ಬರಬಾರದು ಲಿವರ್ ಆರೋಗ್ಯ ಉತ್ತಮವಾಗಿರಬೇಕು ಹಾಗೂ ಅದರ ಕಾರ್ಯಚಟುವಟಿಕೆ ಸರಿಯಾಗಿ ನಡೆಯಬೇಕು ಅಂದರೆ ಏನು ಮಾಡಬೇಕು ಅಂತ ಹೇಳೋದಾದರೆ ಮುಖ್ಯವಾಗಿ ನಮ್ಮ ಜೀವನಶೈಲಿ ಹಾಗೂ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು.ಹೆಲ್ದಿ ಫುಡ್ ರೊಟೀನ್ ಪಾಲಿಸಬೇಕು ಆಹಾರದಲ್ಲಿ ತರಕಾರಿ ಸೊಪ್ಪು ಬೇಳೆಕಾಳುಗಳು ಇರಬೇಕು ಮತ್ತು ಪ್ರತಿದಿನ ಒಂದಾದರೂ ಹಣ್ಣನ್ನು ತಿನ್ನಬೇಕು.

ಲಿವರ್ ಡಿಟಾಕ್ಸಿಫೈ ಮಾಡುವ ಹಳ್ಳಿ ಡ್ರಿಂಕ್ ಬಗ್ಗೆ ಈ ಮಾಹಿತಿಯಲ್ಲಿ ತಿಳಿಸಿಕೊಡುತ್ತದೆ ಇದಕ್ಕಾಗಿ ಬೇಕಾಗಿರುವುದು ಅಮೃತಬಳ್ಳಿಯ ಎಲೆಯ ರಸ ಸೋರೆಕಾಯಿಯ ಜ್ಯೂಸ್ ಮತ್ತು ನಿಂಬೆಹಣ್ಣಿನ ರಸ ಹಾಗೆ ಸೈಂಧವ ಲವಣ ಅರಿಶಿಣ ಪುಡಿ.30 ml ನಷ್ಟು ಅಮೃತಬಳ್ಳಿಯ ಎಲೆಯ ರಸವನ್ನು ತೆಗೆದುಕೊಂಡು ಇದನ್ನು ಒಂದು ದೊಡ್ಡ ಗ್ಲಾಸ್ ಸೋರೆಕಾಯಿಯ ಜ್ಯೂಸ್ ಗೆ ಮಿಶ್ರ ಮಾಡಿ ಇದಕ್ಕೆ ಚಿಟಿಕೆಯಷ್ಟು ಅರಿಶಿಣ ಮತ್ತು ಕಾಲು ಚಮಚದಷ್ಟು ಸೈಂಧವ ಲವಣ ಮಿಶ್ರಣ ಮಾಡಿ, ಅರ್ಧ ಚಮಚದಷ್ಟು ನಿಂಬೆಹಣ್ಣಿನ ರಸವನ್ನು ಹಾಕಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳಬೇಕು.

ಈಗ ಡ್ರಿಂಕ್ ತಯಾರಾಗಿದೆ ಇದನ್ನು ಬೆಳಗಿನ ಸಮಯದಲ್ಲಿ ಉಷಾಪಾನದ ನಂತರ ಕುಡಿಯಬೇಕು, ಇದೇ ರೀತಿ ದಿನಬಿಟ್ಟು ದಿನ ಕುಡಿಯಬಹುದು ಅಥವಾ ವಾರಕ್ಕೊಮ್ಮೆ ಕುಡಿಯಬಹುದು ನಿಮ್ಮ ಅನುಕೂಲ. ಇದರಿಂದ ನಿಮ್ಮ ತೂಕ ಇಳಿಕೆಯಾಗುತ್ತದೆ ಕೊಲೆಸ್ಟ್ರಾಲ್ ಸಮಸ್ಯೆ ಕೂಡ ನಿವಾರಿಸುತ್ತೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment