WhatsApp Logo

ನಿಮ್ಮ ಎದೆಯಲ್ಲಿ ಕಟ್ಟಿದ ಕಫ , ಕೆಮ್ಮು , ವಿಪರೀತ ಶೀತ , ಅಲರ್ಜಿ ,ಮೂಗು ಕಟ್ಟೋಟರ ಆಗಿದ್ರೆ ಇದೊಂದು ಮನೆಮದ್ದು ಪರಿಹಾರ ಕೆಲವೇ ನಿಮಿಷಗಳಲ್ಲಿ ನಿಮಗೆ ನಿವಾರಣೆ ಮಾಡುತ್ತದೆ..

By Sanjay Kumar

Updated on:

ಗಂಟಲಲ್ಲಿ ಕಟ್ಟಿರುವ ಕಫಾ ಕರಗುವುದಕ್ಕೆ ಮತ್ತೊಂದು ಎಫೆಕ್ಟಿವ್ ಮನೆಮದ್ದು ಈ ದಿನದ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ, ಈ ಎಫೆಕ್ಟಿವ್ ಮನೆಮದ್ದನ್ನು ಮಕ್ಕಳಿಗೆ ಬರುವ ಕೆಮ್ಮು ಕಫ ನಿವಾರಣೆ ಮಾಡಲು ಬಳಸಬಹುದು.ಹಾಗಾಗಿ ಈ ಗಂಟಲಲ್ಲಿ ಕಟ್ಟಿರುವ ಕಸವನ್ನು ಕರಗಿಸೋದು ನಿಮಗೂ ಕೂಡ ಕಷ್ಟ ಹಾಗೆ ಕೆಮ್ಮು ಬಂದ ಕೂಡಲೇ ಈ ಕಫಾದಿ ಬಾಧೆ ಕೂಡ ಉಂಟಾಗುತ್ತಿದೆಯೋ ಹಾಗಾದಲ್ಲಿ ಈ ಮನೆಯಲ್ಲಿಯೇ ದೊರೆಯುವ ಪದಾರ್ಥಗಳನ್ನು ಬಳಸಿ ಮಾಡುವ ಮನೆಮದ್ದಿನ ಬಗ್ಗೆ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ಹೌದು ಬಹಳಷ್ಟು ಮಂದಿ ಕೆಮ್ಮು ಶೀತ ಕಫ ಸಮಸ್ಯೆ ಉಂಟಾದಾಗ ಆ ತೊಂದರೆಯನ್ನು ನಿವಾರಣೆ ಮಾಡಲು, ಬಹಳಷ್ಟು ಪ್ರಯತ್ನಗಳನ್ನು ಮಾಡ್ತಾರೆ ಕೊನೆಗೆ ಆಸ್ಪತ್ರೆಗೆ ಹೋಗಿ ಮಾತ್ರೆ ಬರೆಸಿಕೊಂಡು ಬಂದು ಆ ಮಾತ್ರೆ ತೆಗೆದುಕೊಳ್ಳುವ ರೂಢಿಯನ್ನ ಕೂಡ ಬೆಳೆಸಿಕೊಂಡಿರುತ್ತಾರೆಆದರೆ ನಿಮಗೆ ಇದರ ಅವಶ್ಯಕತೆಯೇ ಬರುವುದಿಲ್ಲ ಕೆಮ್ಮು ಬಂದ ಕೂಡಲೇ ಈ ಪರಿಹಾರವನ್ನು ಪಾಲಿಸಿ ಈ ಪರಿಹಾರವನ್ನು ಮಾಡಿದರೆ ಸಾಕು ಗಂಟಲಿನಲ್ಲಿ ಕಫ ಕೂಡ ಕಟ್ಟುವುದಿಲ್ಲ ಅಷ್ಟು ಸುಲಭವಾಗಿ ಗಂಟಲಿನಲ್ಲಿ ಕಫ ಕರಗುತ್ತದೆ ಇದರಿಂದ ಕೆಮ್ಮು ಕೂಡ ಬಹಳಷ್ಟು ಬೇಗ ನಿವಾರಣೆ ಆಗುತ್ತದೆ.

ಹಾಗಾಗಿ ಗಂಟಲಲ್ಲಿ ಕಟ್ಟಿರುವ ಮಾಡಿ ಈ ಎಫೆಕ್ಟಿವ್ ಮನೆಮದ್ದು ಇದಕ್ಕಾಗಿ ಬೇಕಾಗುವ ಪದಾರ್ಥಗಳು ಶುಂಠಿ ಈರುಳ್ಳಿ ಜೇನುತುಪ್ಪ ಮತ್ತು ತುಳಸಿ ಎಲೆ.ಈ ಮೇಲೆ ತಿಳಿಸಿದಂತಹ ಪದಾರ್ಥಗಳು ಇದ್ದರೆ ಸಾಕು ಈ ದಿನ ನಾವು ಮಾಡಲು ಹೊರಟಿರುವ ಮನೆ ಮದ್ದು ತಯಾರಾಗುತ್ತೆ, ಹೇಗೆ ಅಂದರೆ ಮಕ್ಕಳಿಗೆ ಈ ಮನೆಮದ್ದನ್ನು ಮಾಡುವ ವಿಧಾನ ಸ್ವಲ್ಪ ಬದಲಾಗಿರುತ್ತದೆ ಜತೆಗೆ ದೊಡ್ಡವರೂ ಕೂಡ ಪಾಲಿಸಬಹುದು ಈ ಮನೆಮದ್ದನ್ನು ಎಫೆಕ್ಟಿವ್ ಆಗಿ ಫಲಿತಾಂಶ ಕೊಡುತ್ತೆ ಈ ಮನೆ ಮದ್ದು ನಿಮ್ಮ ಕೆಮ್ಮು ಶೀತ ಕಫ ಕ್ಕೆ.

ಹೌದು ಮನೆಮದ್ದು ಮಾಡುವ ವಿಧಾನ ಕುರಿತು ತಿಳಿಯೋಣ ಬನ್ನಿ ಮೊದಲು ಮೊದಲಿಗೆ ಈರುಳ್ಳಿಯನ್ನು ಸುರಿದುಕೊಂಡು ಅದನ್ನು ಠಾಣೆಯಲ್ಲಿ ಕುಟ್ಟಿ ಬಟ್ಟೆ ಸಹಾಯದಿಂದ ರಸವನ್ನು ಬೇರ್ಪಡಿಸಿಕೊಳ್ಳಿ ನಂತರ ಶುಂಠಿಯನ್ನು ಕ್ಲೀನ್ ಮಾಡಿಕೊಂಡು ಸಿಪ್ಪೆ ತೆಗೆದು, ಶುಂಠಿಯನ್ನು ಜಜ್ಜಿ ಅದನ್ನು ಕೂಡ ಬಟ್ಟೆಯ ಸಹಾಯದಿಂದ ಬೇರೆ ಬೌಲ್ ಒಂದಕ್ಕೆ ಶುಂಠಿಯ ರಸವನ್ನು ಬೇರ್ಪಡಿಸಿಕೊಳ್ಳಿ ಈಗ ಕೃಷ್ಣ ತುಳಸಿ ತೆಗೆದುಕೊಂಡು ಅದನ್ನು ಜಜ್ಜಿ ಎರಡೇ ಹನಿ ತುಳಸಿ ರಸ ಬಂದರೂ ಪರವಾಗಿಲ್ಲ ಅದನ್ನು ಈರುಳ್ಳಿ ರಸದೊಂದಿಗೆ ಮಿಶ್ರಣ ಮಾಡಿ ಇಟ್ಟುಕೊಳ್ಳಿ.

ಈಗ ಶುಂಠಿಯ ರಸವನ್ನು ಈರುಳ್ಳಿಯ ರಸದೊಂದಿಗೆ ಮಿಶ್ರ ಮಾಡುವಾಗ ಆ ಶುಂಠಿಯ ಕೆಳಭಾಗದಲ್ಲಿ ಬಿಳಿ ರಸವನ್ನು ತೆಗೆದುಕೊಳ್ಳಬೇಡಿ ಕೇವಲ ಶುಂಠಿಯ ರಸವನ್ನು ಮಾತ್ರ ತೆಗೆದುಕೊಂಡು ಈರುಳ್ಳಿಯ ರಸದೊಂದಿಗೆ ಮಿಶ್ರ ಮಾಡಿ ಇದಕ್ಕೆ ಅರಿಶಿಣಪುಡಿ ಜೊತೆಗೆ ಕಾಲು ಚಮಚದಷ್ಟು ಪೆಪ್ಪರ್ ಪೌಡರನ್ನು ಮಿಶ್ರಣ ಮಾಡಿ ಇದನ್ನು ದೊಡ್ಡವರು ಸೇವಿಸಿ ಮಕ್ಕಳಿಗೆ ಆದರೆ ಪೆಪ್ಪರ್ ಪೌಡರ್ ಅನ್ನು ಬಳಸದೆ ಹಾಗೇ ಮಕ್ಕಳಿಗೆ ನೀಡಿ

ಮಕ್ಕಳಿಗಾದರೆ ಈರುಳ್ಳಿ ರಸ ಶುಂಠಿ ರಸ ಮತ್ತು ತುಳಸಿ ರಸದ ಜೊತೆಗೆ ಸ್ವಲ್ಪ ಅರಿಶಿಣ ಇದನ್ನು ಮಿಶ್ರ ಮಾಡಿ ನಾಲಿಗೆ ಗೆ ಹಚ್ಚಿ ಇದರಿಂದ ಮಕ್ಕಳು ಈ ರಸವನ್ನು ನುಂಗಿದಾಗ ಕಫ ಕರಗುತ್ತದೆ ಮತ್ತು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಕೆಮ್ಮು ಕೂಡ ನಿವಾರಣೆ ಆಗುತ್ತೆ. ಈ ಸರಳ ಪರಿಹಾರ ದೇಹದ ಶೀತ ಕೆಮ್ಮು ಕಫ ನಿವಾರಣೆ ಆಗುತ್ತೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment