WhatsApp Logo

ನನ್ನ ಉಸಿರು ಇರೋವರ್ಗೂ ರಾಕ್ ಲೈನ್ ಸರ್ ಹೆಲ್ಪ್ ಮರೆಯೋದಿಲ್ಲ ಎಂದು ಕಿಚ್ಚ ಸುದೀಪ್ ಅವರು ಅಂದಿದ್ಯಾಕೆ ಗೊತ್ತ …!!!!

By Sanjay Kumar

Updated on:

ಹಾಯ್ ಫ್ರೆಂಡ್ಸ್ ಯಾವ ವ್ಯಕ್ತಿಗೆ ಆಗಲಿ ಸ್ನೇಹಿತ ಅಥವಾ ಗೆಳೆಯ ಇವರ ಮಹತ್ವ ಜೀವನದಲ್ಲಿ ಬಹಳಷ್ಟು ಇರುತ್ತದೆ ಹಾಗೆ ಯಾವ ವ್ಯಕ್ತಿಯಾಗಿರಲಿ ಕುಟುಂಬಸ್ಥರ ಬಳಿ ಹೇಳಿಕೊಳ್ಳುವುದಕ್ಕೆ ಆಗದಿರುವ ಎಷ್ಟೋ ವಿಚಾರಗಳನ್ನು ಸ್ನೇಹಿತನ ಬಳಿ ಹೇಳಿಕೊಳ್ಳುತ್ತಾನೆ ಹಾಗೂ ತನ್ನ ಕಷ್ಟಕ್ಕೆ ಸಹಾಯವನ್ನು ಪಡೆದು ಕೊಳ್ಳುತ್ತಾನೆ. ಹೌದು ಇವತ್ತು ಯಾವ ವ್ಯಕ್ತಿ ಬಹಳ ಎತ್ತರಕ್ಕೆ ಏರಿರುವ ತಾನೆ ಅಂತಹ ವ್ಯಕ್ತಿಯು ತನ್ನ ಹಿಂದಿನ ಜೀವನದಲ್ಲಿ ಬಹಳ ಕಷ್ಟಗಳನ್ನು ಎದುರಿಸುತ್ತಾನೆ, ಹಾಗೂ ಆ ಕಷ್ಟದ ಮಹತ್ವ ಆತನಿಗೆ ಸರಿಯಾಗಿ ಅರ್ಥವಾಗಿರುತ್ತದೆ ಆಗಲೆ ಆತ ತನ್ನ ಜೀವನದಲ್ಲಿರುವ ಗುರಿ ಮುಟ್ಟಲು ಸಾಧ್ಯ.

ಕನ್ನಡ ಚಿತ್ರರಂಗದಲ್ಲಿ ನಟ ಸಾರ್ವಭೌಮ ಅಂತಾನೇ ಹೆಸರು ಪಡೆದಿರುವ ಕಿಚ್ಚ ಸುದೀಪ್ ಅವರು ಕೂಡ ತಮ್ಮ ಹಿಂದಿನ ಕಾಲದಲ್ಲಿ ಬಹಳ ಕಷ್ಟವನ್ನು ಎದುರಿಸಿ ಹಾಗೂ ಅನೇಕ ಸಂದರ್ಶನಗಳಲ್ಲಿ ತಮ್ಮ ಜೀವನದ ಅನುಭವಗಳ ಬಗ್ಗೆ ಹೇಳಿಕೊಳ್ಳುವಾಗ ನಮಗೆ ತಿಳಿಯುತ್ತದೆ. ಸುದೀಪ್ ಅವರು ಇಷ್ಟು ಎತ್ತರಕ್ಕೆ ಬೆಳೆಯಬೇಕೆಂದರೆ ಅವರು ತಮ್ಮ ಜೀವನದಲ್ಲಿ ಎಷ್ಟು ಕಷ್ಟಪಟ್ಟಿರಬೇಕು ಎಂದು. ಸುದೀಪ್ ಅವರ ಸಾಧನೆ ಬಗ್ಗೆ ಹೇಳುವುದೇ ಬೇಡ ಇವರು ಯಾರ ಸಹಾಯವಿಲ್ಲದೆಯೇ ಸಾಮಾನ್ಯ ವ್ಯಕ್ತಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟವರು ಇದೀಗ ತಮ್ಮ ಛಾಪನ್ನು ಹೊರದೇಶದ ಎತ್ತರದ ಕಟ್ಟಡದ ಮೇಲೆ ನಮ್ಮ ಕನ್ನಡದ ಬಾವುಟವನ್ನು ಹಾರಿಸಿದವರು ಹೌದು ಬುರ್ಜ್ ಖಲೀಫಾದ ಮೇಲೆ ಕನ್ನಡದ ಬಾವುಟವನ್ನು ಹಾರಿಸಿದ ಹಿರಿಮೆ ಸುದೀಪ್ ಅವರಿಗೆ ಸಲ್ಲಬೇಕು.

ಹೀಗೆ ಸಂದರ್ಶನವೊಂದರಲ್ಲಿ ಸುದೀಪ್ ಅವರು ತಮ್ಮ ಹಿಂದಿನ ಜೀವನದ ಬಗ್ಗೆ ಮಾತನಾಡುವಾಗ ತಮ್ಮ ಕಷ್ಟಕ್ಕೆ ಆದವರು ರಾಕ್ ಲೈನ್ ವೆಂಕಟೇಶ್ ಅವರು ಎಂಬ ವಿಚಾರವನ್ನು ತಿಳಿಸಿದ್ದಾರೆ ಹಾಗೂ ಕಿಚ್ಚ ಸುದೀಪ್ ಆ ಚಿತ್ರದ ನಂತರ ತನ್ನ ಜೀವನದಲ್ಲಿ ಇರುವ ಕಷ್ಟವನ್ನು ಯಾರ ಬಳಿಯೂ ಹೇಳಿಕೊಳ್ಳುವುದಕ್ಕೆ ಸಾಧ್ಯವಾಗದೆ ಮಧ್ಯರಾತ್ರಿಯಲ್ಲಿ ರಾಕ್ ಲೈನ್ ವೆಂಕಟೇಶ್ ಅವರಿಗೆ ಕರೆ ಮಾಡಿದ ಕಿಚ್ಚ ಸುದೀಪ್, ಆ ದಿನ ಸುದೀಪ್ ಅವರ ಸಹಾಯಕ್ಕೆ ನಿಂತವರು ರಾಕ್ ಲೈನ್ ವೆಂಕಟೇಶ್ ಅಂತಹ ಮಧ್ಯರಾತ್ರಿಯಲ್ಲಿಯೂ ಕಾಲ್ ರಿಸೀವ್ ಮಾಡಿ ಸುದೀಪ್ ಅವರ ಕಷ್ಟಕ್ಕೆ ರಾಕ್ ಲೈನ್ ವೆಂಕಟೇಶ್ ಅವರು, ಇವತ್ತಿಗೂ ಕೂಡ ಆ ಸಹಾಯವನ್ನು ಸುದೀಪ್ ಅವರು ಮರೆಯುವುದಿಲ್ಲಾ ಎಂದು ಹೇಳಿಕೊಂಡಿದ್ದಾರೆ.

ಯಾವ ವ್ಯಕ್ತಿಯೂ ಕಷ್ಟದ ಹಾದಿಯನ್ನು ತುಳಿಯದೆ ಮುಂದಿನ ದಿವಸಗಳಲ್ಲಿ ಅಂದರೆ ಭವಿಷ್ಯದಲ್ಲಿ ಸುಖದ ಸುಪತ್ತಿಗೆಯಲ್ಲಿ ಇರಲು ಸಾಧ್ಯವಿಲ್ಲಾ. ಅದಕ್ಕೆ ಉದಾಹರಣೆ ಅಂದರೆ ನಟ ಕಿಚ್ಚ ಸುದೀಪ್ ಅವರೇ ಆಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಸುದೀಪ್ ಅವರು ಹೇಳಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ರಾಕ್ ಲೈನ್ ವೆಂಕಟೇಶ್ ಅವರನ್ನು ಕುರಿತು ತಮ್ಮ ಮಾತುಗಳ ಮೂಲಕ ರಾಕ್ ಲೈನ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ ಹಾಗೂ ಕಿಚ್ಚ ಸುದೀಪ್ ಅವರು ಯಾವತ್ತಿಗೂ ರಾಕ್ ಲೈನ್ ವೆಂಕಟೇಶ್ ಅವರನ್ನು ತಮ್ಮ ಜೀವನದಲ್ಲಿ ಮರೆಯುವಂತಿಲ್ಲ ಎಂದು ಹೇಳಿದ್ದು ತಮ್ಮ ಹಿರಿಯ ಅಣ್ಣನ ಸ್ಥಾನವನ್ನು ಅವರಿಗೆ ನೀಡಿದ್ದೇನೆ ಅಂತಾ ಸಹ ಸುದೀಪ್ ಹೇಳಿಕೊಂಡಿದ್ದಾರೆ. ಇವರಿಬ್ಬರ ಸ್ನೇಹ ಹೀಗೆ ಇರಲಿ ಇವರಿಬ್ಬರ ನಡುವಿನ ಬಾಂಧವ್ಯ ಮುಂದಿನ ದಿವಸಗಳಲ್ಲಿಯು ಹಿುಗೆ ಗಟ್ಟಿಯಾಗಿರಲಿ ಎಂದು ಕೇಳಿಕೊಳ್ಳೋಣ ಧನ್ಯವಾದಗಳು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment