WhatsApp Logo

ನೋಡಿ ಬಾಸ್ ಅಭಿಮಾನಿಗಳ ಮನೆಯಲ್ಲಿ ಹೇಗಿರುತ್ತಾರೆ ..! ಅಷ್ಟಕ್ಕೂ ಅವರ ಜೊತೆಗೆ ಇರೋರು ಯಾರು ಗೊತ್ತ …

By Sanjay Kumar

Updated on:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಕನ್ನಡ ಜನತೆ ಕಿವಿ ನೇರ ಆಗಿಬಿಡುತ್ತದೆ ಹೌದು ಯಾರಿಗೆ ತಾನೆ ಡಿ ಬಾಸ್ ಇಷ್ಟ ಇಲ್ಲ ಹೇಳಿ ಸದಾ ಸ್ನೇಹ ಪ್ರೀತಿ ಸಹಾಯ ಸ್ನೇಹಿತರು ಎಂದೇ ಇರುವ ದರ್ಶನ್ ಅವರು ಇದೀಗ ನಮ್ಮ ಕರ್ನಾಟಕದ ಕರ್ಣ. ಹೌದು ಇವರು ಸಹಾಯ ಮಾಡುವುದಕ್ಕೆ ಸದಾ ಮುಂದಿರುತ್ತಾರೆ ದರ್ಶನ್ ಅಂದರೆ ಚಿಕ್ಕ ಮಕ್ಕಳು ಸಹ ಇಷ್ಟಪಡ್ತಾರೆ ಇವರ ಉದ್ದುದ್ದ ಡೈಲಾಗ್ ಹೇಳ್ತಾರೆ ಇವರ ಹಾಡುಗಳನ್ನು ಸಹ ಹಾಡ್ತಾರೆ. ನಟ ದರ್ಶನ್ ಅವರು ಅಂದರೆ ಇಷ್ಟ ಪಡುವ ಬಹಳಷ್ಟು ಮಂದಿ ಇದ್ದಾರೆ ಆದರೆ ದರ್ಶನ್ ಅವರು ಹಾಗೆ ಹೀಗೆ ಎಂದು ಹೇಳುವ ಕೆಲ ಮಂದಿ ಸಹ ಇದ್ದಾರೆ ಅಂಥವರು ಈ ಲೇಖನವನ್ನು ತಿಳಿಯಲೇಬೇಕು. ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಿ ಯಶಸ್ಸಿನ ಹಾದಿ ಹಿಡಿದಿರುವ ದರ್ಶನ್ ಅವರ ಕುರಿತು ಹೇಳಬೇಕೆಂದರೆ ಇವರು ಫೆಬ್ರವರಿ 16 1977ರಲ್ಲಿ ಜನಿಸಿದರು, ಇವರ ತಂದೆ ಹೆಸರು ತೂಗುದೀಪ ಶ್ರೀನಿವಾಸ್ ಎಂದು, ಇನ್ನು ತಾಯಿ ಮೀನಾ ತೂಗುದೀಪ್. ದರ್ಶನ್ ಅವರಿಗೆ ಸಹೋದರ ಕೂಡ ಇದ್ದಾರೆ.

ಇನ್ನು ನಟ ದರ್ಶನ್ ಅವರು ಪ್ರೀತಿಸಿ ಮದುವೆಯಾದದ್ದು. ದರ್ಶನ್ ಅವರು ಸಿನಿಮಾ ಇಂಡಸ್ಟ್ರಿಗೆ ಮೆಜೆಸ್ಟಿಕ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದು ಇವರು 2001ರಲ್ಲಿ ಮೆಜೆಸ್ಟಿಕ್ ಸಿನಿಮಾದಲ್ಲಿ ಅಭಿನಯ ಮಾಡುವ ಮೂಲಕ ಸಿನಿಮಾರಂಗಕ್ಕೆ ಬರುತ್ತಾರೆ. ಈ ಸಿನಿಮಾದಿಂದ ದರ್ಶನ್ ಅವರ ಜೀವನವೇ ಬದಲಾಯಿತು. ಇದಾದ ಮೇಲೆ ಕರಿಯ, ನಮ್ಮ ಪ್ರೀತಿಯ ರಾಮು, ಕಲಾಸಿಪಾಳ್ಯ,ಸಾರತಿ ಸುಂಟರಗಾಳಿ, ಬುಲ್ ಬುಲ್, ಕುರುಕ್ಷೇತ್ರ, ರಾಬರ್ಟ್ ಹೀಗೆ ಇನ್ನೂ ಸಾಕಷ್ಟು ಚಿತ್ರಗಳು ಸೂಪರ್ ಡೂಪರ್ ಹಿಟ್ ಆದವು. ಅದರಲ್ಲೂ ಸಾರಥಿ ಮತ್ತು ಸಂಗೊಳ್ಳಿರಾಯಣ್ಣ ಚಲನ ಚಿತ್ರಗಳಿಗೆ ದರ್ಶನ್ ಅವರಿಗೆ ಎಲ್ಲರಿಂದಲೂ ಬಹಳ ಪ್ರಶಂಸೆಗಳು ದೊರಕಿದೆ.

ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ದರ್ಶನ್ ಅವರಿಗೆ ಕರ್ನಾಟಕ ರಾಜ್ಯದ ಪ್ರಶಸ್ತಿ ಕೂಡ ದೊರತಿದೆ. ಇನ್ನು ನಮ್ಮ ಡಿ ಬಾಸ್ ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳು ಮತ್ತು ಪರಿಸರ ಎಂದರೆ ತುಂಬಾ ಇಷ್ಟ. ಇದರ ಜೊತೆಗೆ ಇವರು ಸಾಕಷ್ಟು ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಅವುಗಳನ್ನು ಸಾಕುವ ಅಭ್ಯಾಸ ದರ್ಶನ್ ಅವರಿಗಿದೆ. ಇನ್ನು ಅಭಿಮಾನಿಗಳ ಜೊತೆ ದರ್ಶನ್ ಅವರು ಎಂದಿಗೂ ಕೂಡ ತಾನು ಸೆಲೆಬ್ರಿಟಿ ಎಂದು ಅಹಂ ತೋರಿಸುವುದಿಲ್ಲಾ. ಎಲ್ಲರ ಜೊತೆಗೂ ಸಾಮಾನ್ಯರಂತೆ ಸಾಮಾನ್ಯವಾಗಿ ಇರುತ್ತಾರೆ ಡಿ ಬಾಸ್ ದರ್ಶನ್ ಹೌದೋ ಸರಳತೆಯಲ್ಲಿ ಸರಳತೆ ಹಾಗೆ ಇರುವ ದರ್ಶನ್ ಅವರು ಸೆಲೆಬ್ರೆಟಿಗಳ ಜೊತೆ ಸೆಲಬ್ರಿಟಿ ಆಗಿರುತ್ತಾರೆ ಇನ್ನು ತಮ್ಮ ಅಭಿಮಾನಿಗಳ ಜೊತೆ ಅಭಿಮಾನ ದಿಂದ ಇರುವ ಇವರು ನಿಜವಾಗಿಯೂ ಬಹಳ ಗ್ರೇಟ್.

ಅದರಲ್ಲೂ ದರ್ಶನ್ ಅವರು ಕಾರ್ ನಲ್ಲಿ ಹೋಗುವ ಸಮಯದಲ್ಲಿ ಯಾರಾದರೂ ತಮ್ಮ ಅಭಿಮಾನಿಗಳು ಗಾಡಿಯ ಮೇಲೆ ದರ್ಶನ್ ಅವರ ಫೋಟೋವನ್ನು ಹಾಕಿಕೊಂಡಿದ್ದರೆ, ಅವರ ಕಾರನ್ನು ನಿಲ್ಲಿಸಿ ದಯವಿಟ್ಟು ಹೀಗೆ ಮಾಡಬೇಡಿ ಎಂದು ಹೇಳಿ ಅವರ ಜೊತೆಗೆ ಒಂದು ಫೋಟೋ ಕೂಡ ತೆಗೆಸಿಕೊಳ್ಳುತ್ತಾರೆ. ಇನ್ನು ದರ್ಶನ್ ಅವರು ತಮ್ಮ ಅಭಿಮಾನಿಯ ಮನೆಯಲ್ಲಿ ಊಟ ಮಾಡಿದ ವಿಡಿಯೋ ಈಗ ಎಲ್ಲ ಕಡೆ ತುಂಬಾ ವೈರಲ್ ಆಗುತ್ತ ಇದೆ. ಹೌದು ಎಷ್ಟೋ ಜನರು ದರ್ಶನ್ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತಾರೆ ಆದರೆ ದರ್ಶನ್ ಅವರು ತಮ್ಮ ಅಭಿಮಾನಿಗಳು ಪ್ರೀತಿಯಿಂದ ಮನೆಗೆ ಊಟಕ್ಕೆ ಕರೆದರೆ ಅಂಥವರ ಮನೇಲಿ ಪ್ರೀತಿಯಿಂದ ಗೌರವದಿಂದ ಹೋಗಿ ತಮ್ಮ ಅಭಿಮಾನಿಗಳ ಮನೆಯಲ್ಲಿ ಸಾಮಾನ್ಯರಂತೆ ಊಟ ಮಾಡಿ ಬರುತ್ತಾರೆ.

ಹೌದು ನಟ ದರ್ಶನ್ ಅವರನ್ನು ತಮ್ಮ ಅಭಿಮಾನಿಯೊಬ್ಬರು ತಮ್ಮ ಮನೆಗೆ ಊಟಕ್ಕೆ ಕರೆದಾಗ ತಾನು ದೊಡ್ಡ ನಟನೆಂದು ತೋರಿಸದೇ ಸಾಮಾನ್ಯರಂತೆ ಅವರ ಮನೆಗೆ ಹೋಗಿ ಊಟ ಮಾಡಿಕೊಂಡು ಬಂದಿದ್ದಾರೆ. ಇವರು ಊಟ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದ್ದು ಈ ವಿಡಿಯೋವನ್ನು ನೀವೂ ಸಹ ನೋಡಿರುತ್ತೀರಾ ಹೀಗೆ ನಮ್ಮ ದರ್ಶನ್ ಸರಳತೆಯಲ್ಲಿ ಸರಳರು ಇವರಿಗೆ ದೇವರು ಒಳ್ಳೆಯದನ್ನು ಮಾಡಲಿ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment