WhatsApp Logo

ಪುನೀತ್ ಅವರ ಅದೊಂದು ಆಸೆಯನ್ನ ಈಡೇರಿಸಲು ದೊಡ್ಡ ನಿರ್ಧಾರ ತೆಗೆದುಕೊಂಡ ಅಶ್ವಿನಿ ಪುನೀತ್… ಅಷ್ಟಕ್ಕೂ ಅದು ಏನು ಗೊತ್ತ …

By Sanjay Kumar

Updated on:

ಅಪ್ಪು ಅವರು ಇನ್ನಿಲ್ಲ ಎಂಬ ವಿಚಾರ ಕೇಳುತ್ತಿದ್ದ ಹಾಗೆ ಕರ್ನಾಟಕದೆಲ್ಲೆಡೆ ಅಭಿಮಾನಿಗಳು ರಾಜಧಾನಿಯತ್ತ ಮುಖ ಮಾಡಿ ನಿಂತಿದ್ದರು ಹೌದು ಅಪೂರ್ವ ದರ್ಶನ ಪಡೆಯಬೇಕೆಂಬ ಹಂಬಲದಿಂದ ದೂರದೂರಿಂದ ಬಂದ ಅದೆಷ್ಟೋ ಅಭಿಮಾನಿಗಳು ಅಪ್ಪು ಅವರ ಅಂತಿಮ ದರ್ಶನ ಪಡೆದು ಊರಿಗೆ ತೆರಳಿರಲಿಲ್ಲ ಹಾಗೂ ಅಪ್ಪು ಅವರ ಅಂತ್ಯಕ್ರಿಯೆ ನಡೆದ ನಂತರವೂ ಸಹ ಅಪಾರ ಅಭಿಮಾನಿಗಳು ಅಪ್ಪು ಅವರ ದರ್ಶನ ಪಡೆದೆ ಹೋಗುವುದು ಎಂದು ಕಂಠೀರವ ಸ್ಟೇಡಿಯಮ್ ಮುಂದೆ ಸಾವಿರಾರು ಮಂದಿ ನೆರೆದಿದ್ದರು. ಇದೇ ವೇಳೆ ರಾಜ್ ಕುಟುಂಬದವರಿಗೆ ದೊಡ್ಡ ಆಘಾತವೇ ಆಗಿತ್ತು ಹೌದು ಪುನೀತ್ ಅವರು ಇನ್ನಿಲ್ಲ ಎಂಬ ಆ ವಿಚಾರವೇ ಅರಗಿಸಿಕೊಳ್ಳಲು ಸಾಧ್ಯವಾಗದೆ, ಬಹಳ ನೋವನ್ನು ಎದುರಿಸುತ್ತಿದ್ದಾರೆ .

ಹೌದು ಈಗಾಗಲೇ ಅವರನ್ನೂ ಕಳೆದುಕೊಂಡು ಹನ್ನೊಂದು ದಿನದ ಕಾರ್ಯವೂ ಸಹ ಮುಗಿದಿದೆ ಇನ್ನು ಅಪ್ಪನವರು ಇನ್ನಿಲ್ಲ ಎಂಬ ವಿಚಾರ ತಿಳಿದ ನಂತರ ಅವರ ಒಂದೊಂದು ಕೆಲಸವು ಬೆಳಕಿಗೆ ಬರುತ್ತಾ ಇದೆ ಹಾಗೆಯೇ ಅವರು ಕಂಡಿದ್ದ ಕನಸುಗಳು ಸಹ ಇದೀಗ ಮೀಡಿಯಾ ಮೂಲಕ ನಾವು ಕೇಳುತ್ತಲೇ ಇದ್ದೇವೆ ಇನ್ನೂ ಕೂಡ ಜನರು ತಮಗೆ ಅಪ್ಪು ಈ ಸಹಾಯ ಮಾಡಿದ್ದರು ಹೀಗೆ ನಮಗೆ ಸಹಾಯ ಮಾಡಿದ್ದರು ಅಂತ ಹೇಳುತ್ತಲೇ ಇದ್ದಾರೆ ಕೆಲವರು ಬಂದು ಹೇಳಿಕೆ ನೀಡುತ್ತಾ ಇದ್ದಾರೆ.

ಹೌದು ಇಷ್ಟು ಚಿಕ್ಕ ವಯಸ್ಸಿಗೇ ಅಗಲಿದ ಅಗಾಧವಾದ ಕನಸುಗಳನ್ನು ಕಟ್ಟಿಕೊಂಡಿದ್ದರು ಇವರು ಪಿಆರ್ ಕೆ ಪ್ರೊಡಕ್ಷನ್ಸ್ ಎಂಬ ಸಂಸ್ಥೆ ಸ್ಥಾಪನೆ ಮಾಡುವ ಮೂಲಕ ಈ ಸಂಸ್ಥೆ ಮೂಲಕ ಹಲವು ಹೊಸಬರಿಗೆ ಅವಕಾಶ ನೀಡಿ ಸಿನಿಮಾ ಮಾಡಬೇಕು ಅಂತ ಸಹ ಪುನೀತ್ ಅವರು ಕನಸು ಕಟ್ಟಿಕೊಂಡಿದ್ದ ಅದರಂತೆ ರಾಮನಗರ ಸುತ್ತಮುತ್ತ ಶೂಟಿಂಗ್ ಮಾಡಿ ಕೆಲವೊಂದು ಡಾಕ್ಯುಮೆಂಟರಿಗಳನ್ನು ಸಹ ಮಾಡಿದ್ದರು ಅಪ್ಪು ಎಂಬ ವಿಚಾರ ಇದೀಗ ತಿಳಿದು ಬಂದಿದೆ. ಇದೇ ವೇಳೆ ಅಪ್ಪು ಅವರು ಮಾಡುತ್ತಿದ್ದ ಎಲ್ಲ ಕೆಲಸವನ್ನು ಪತ್ನಿ ಅಶ್ವಿನಿ ಅವರು ನೋಡಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದು ಅಪ್ಪು ಅವರ ಆಸೆಯಂತೆ ಹೊಸ ಹೊಸ ಪ್ರತಿಭೆಗಳಿಗೆ ಹೊಸ ಅವಕಾಶಗಳನ್ನು ನೀಡಲು ಪಿಆರ್ ಕೆ ಪ್ರೊಡಕ್ಷನ್ಸ್ ಅನ್ನು ತಾವೇ ನೋಡಿಕೊಳ್ಳುತ್ತೇನೆ ಎಂದು ಸಹ ಹೇಳಿದ್ದಾರೆ ಹಾಗೆ ಇನ್ನೇನು ಸ್ವಲ್ಪ ದಿವಸಗಳಲ್ಲೇ ಹೊಸ ಸಿನೆಮಾ ಕುರಿತು ಅನೌನ್ಸ್ ಮಾಡಬೇಕಿತ್ತೋ ಅದು ಸಹ ಅಪ್ಪು ಅವರ ಕನಸು ಆಗಿದ್ದು ಇನ್ನೇನು ಸ್ವಲ್ಪ ದಿನದಲ್ಲೇ ಹೊಸ ಸಿನೆಮಾ ಕುರಿತು ಅನೌನ್ಸ್ ಮಾಡುತ್ತೇವೆ ಎಂದು ಸಹ ದೊಡ್ಮನೆಯಿಂದ ವಿಚಾರ ಹೊರಬಂದಿದ್ದು ಅಪ್ಪು ಅವರ ಕನಸು ನನಸು ಮಾಡುತ್ತೇವೆ ಎಂದು ದೊಡ್ಮನೆಯವರು ಹೇಳಿಕೊಂಡಿದ್ದಾರೆ.

ಇದರ ಜೊತೆಗೆ ತಮ್ಮ ಮಗಳು ಧೃತಿ ಕೂಡಾ ತಮಗೆ ಸಹಾಯ ಮಾಡುವುದಾಗಿ ಅಶ್ವಿನಿಯವರು ಹೇಳಿಕೊಂಡಿದ್ದು ಎಲ್ಲಾ ಅನಾಥಾಶ್ರಮಗಳನ್ನು ಸಹ ತಾವೇ ನೋಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ ಹಾಗೆ ಅಶ್ವಿನಿ ಅವರು ಸ್ವತಃ ಎಲ್ಲದರ ಜವಾಬ್ದಾರಿಯನ್ನ ಅವರೇ ವಹಿಸಿಕೊಂಡು ಹೋಗ್ತಾರೆ ಎಂದು ಹೇಳಲಾಗಿದೆ. ಇಲ್ಲಿಯವರೆಗೂ ನಟ ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಸಂಸ್ಥೆಯಿಂದ ಸಾಕಷ್ಟು ಹೊಸಬರಿಗೆ ಅವಕಾಶ ಕೊಟ್ಟಿದ್ದಾರೆ. ಅಷ್ಟೆಲ್ಲಾ ಪುನೀತ್ ಅವರು ಹೇಗೆ ವಿಭಿನ್ನ ಕಥೆಗಳೊಂದಿಗೆ ಅಭಿನಯ ಮಾಡುತ್ತಾ ಇದ್ದರೂ ಸಿನಿಮಾ ಮಾಡುತ್ತಾ ಇದ್ದರು ಅದೇ ರೀತಿ ವಿಭಿನ್ನ ಹಾಗೂ ವಿಶೇಷ ಕತೆ ಇರುವಂತಹ ಸಿನಿಮಾಗಳನ್ನು ನಿರ್ಮಾಣ ಸಂಸ್ಥೆಯ ಮೂಲಕ ಅಪೂರ್ವ ನಿರ್ಮಾಣ ಮಾಡಬೇಕು.

ಎಂಬ ಕನಸು ಕಟ್ಟಿಕೊಂಡಿದ್ದರು ಇನ್ನು ಮುಂದೆ ಆ ಎಲ್ಲ ಕೆಲಸವನ್ನು ಪತ್ನಿ ಅಶ್ವಿನಿ ಅವರೇ ಮುಂದುವರೆಸಿಕೊಂಡು ಹೋಗಲಿದ್ದಾರೆ ಎಂದು ಸಹ ಇದೀಗ ದೊಡ್ಮನೆಯವರು ಮೀಡಿಯಾ ಅವರ ಮುಂದೆ ಹೇಳಿಕೆ ನೀಡಿದ್ದಾರೆ. ಹೌದು ಪುನೀತ್ ಅವರು ನಮ್ಮ ಜೊತೆ ಇರದೇ ಇರಬಹುದು ಆದರೆ ಅವರ ಆದರ್ಶ ಸದಾ ನಮ್ಮ ಜೊತೆ ಇರುತ್ತದೆ ಅದರಂತೆ ಅವರ ಕನಸುಗಳನ್ನು ನನಸು ಮಾಡುವುದು ಸಹ ಪುನೀತ್ ರಾಜ್ ಕುಮಾರ್ ಅವರ ಪತ್ನಿಯ ಕರ್ತವ್ಯವಾಗಿದ್ದು ಇದನ್ನೆ ಅಶ್ವಿನಿ ಅವರು ಸಹ ಹೇಳಿದ್ದಾರೆ ಮತ್ತು ತಮ್ಮ ಪತಿಯ ಹೀಗೆಲ್ಲಾ ಕನಸು ನನಸು ಮಾಡುವುದಾಗಿ ಹೇಳಿಕೊಂಡಿದ್ದಾರೆ. ಮುಂದಿನ ದಿವಸದಲ್ಲಿ ಪಿಆರ್ ಕೆ ಪ್ರೊಡಕ್ಷನ್ಸ್ ಇಂದ ಅಪ್ಪು ಅವರ ಕನಸಿನಂತೆ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಹೊಸ ಸಿನಿಮಾಗಳು ಮೂಡಿ ಬರಲಿದೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment