WhatsApp Logo

ಮಂತ್ರಾಲಯದಲ್ಲಿ ಪುನೀತ್ ಬಂದಾಗ ದೇವರ ತೊಟ್ಟಿಲು ಅಲ್ಲಾಡಿತ್ತಂತೆ .. ಇದಕ್ಕೆ ಕೊನೆಗೂ ಸಿಕ್ಕಿದೆ ಸ್ಪಷ್ಟನೆ .. ಈ ವಿಚಾರದ ಬಗ್ಗೆ ಇಲ್ಲಿದೆ ಶಾಕಿಂಗ್ ಮಾಹಿತಿ…

By Sanjay Kumar

Updated on:

ಹೌದು ನಮ್ಮೆಲ್ಲರ ನೆಚ್ಚಿನ ನಟ ಇವರನ್ನು ಹೊಗಳಲು ಪದಗಳೇ ಸಾಲುವುದಿಲ್ಲ ಇವರು ಇದ್ದಾಗಲೂ ಸಹ ಸಾರ್ಥಕತೆ ಮೆರೆದಿದ್ದರು ಇವರು ಇಹಲೋಕ ತ್ಯಜಿಸಿದ ನಂತರವೂ ಸಹ ಸಾರ್ಥಕತೆ ಮೆರೆದವರು. ಇಂತಹವರು ರೀಲ್ ಲೈಫ್ ನಲ್ಲಿ ಮಾತ್ರ ನಾಯಕ ಅಲ್ಲ ರಿಯಲ್ ಲೈಫ್ ನಲ್ಲಿಯೂ ಸಹ ಎಲ್ಲರೂ ಮೆಚ್ಚಿ ಕೊಂಡಂತಹ ಎಲ್ಲರೂ ಮೆಚ್ಚುವಂತಹ ಅಜಾತಶತ್ರುವಿನಂತೆ ಪ್ರತಿಯೊಬ್ಬರ ಮನವನ್ನು ಗೆದ್ದಿದ್ದಾರೆ ಇವರು ಹೌದು ಇವರು ಸದ್ಯ ನಮ್ಮ ಜೊತೆ ಇಲ್ಲದಿರಬಹುದು ಆದರೆ ಸದಾ ನಮ್ಮೊಂದಿಗೆ ಇರುತ್ತಾರೆ ನಮ್ಮ ಅಪ್ಪು ಸದಾ ನಮ್ಮ ಮನುಷ್ಯನಲ್ಲಿ ಇರುತ್ತಾರೆ ಸದಾ ಸಮಾಜದಲ್ಲಿ ಇವರ ಆದರ್ಶ ಗುಣಗಳು ಸಮಾಜದಲ್ಲಿ ನೆಲೆ ಊರಿರುತ್ತದೆ. ಹೌದು ಈಗಾಗಲೇ ಹಲವು ಮಂದಿ ನಿರ್ಧಾರ ಮಾಡಿ ಪುನೀತ್ ಅವರಂತೆ ಇದ್ದರೆ ಇರಬೇಕು ಎಂದು ಯೋಚಿಸಿ ಅವರ ಹಾದಿ ಅನ್ನೋ ಹಿಡಿದು ಅವರಂತೆ ಬಾಳಬೇಕೆಂಬ ನಿರ್ಧಾರ ಮಾಡಿಕೊಂಡಿದ್ದಾರೆ.

ಇವರು ಸೆಲೆಬ್ರಿಟಿ ಆದರೂ ಸಹ ಸಾಮಾನ್ಯರಂತೆ ಸರಳತೆಯಲ್ಲಿ ಸರಳತೆಯಾಗಿ ಇದ್ದವರು ಯಾವತ್ತಿಗೂ ದೊಡ್ಡ ದೊಡ್ಡ ವ್ಯಕ್ತಿ ಅಂತ ಐಷಾರಾಮಿ ಜೀವನ ನಡೆಸಬೇಕು ಅಂತ ಆಸೆ ಪಟ್ಟವರಲ್ಲ ಆದರೆ ಈ ಸಮಾಜದಲ್ಲಿ ಹೆಣ್ಣುಮಕ್ಕಳು ಬೆಳೆಯಬೇಕೋ ಬಡತನ ದೂರವಾಗಬೇಕು ಎಂದು ಶ್ರಮಿಸಿದವರು ನಮ್ಮ ಪುನೀತ್ ಸರ್. ಇವತ್ತಿನ ದಿನ ಕನ್ನಡಾಂಬೆಯ ನೆಚ್ಚಿನ ಕಂದಾ ಅಪ್ಪು ಬಾರದ ಲೋಕಕ್ಕೆ ಪ್ರಯಾಣ ಮಾಡಿದ್ದಾರೆ ಅವರ ಅಪ್ಪ ಅಮ್ಮನ ಜೊತೆ ಸೇರಿ ಕೊಂಡಿದ್ದಾರೆ ಅವರಿಗೆ ಯಾಕೆ ಇಷ್ಟು ಆತುರವಿತ್ತು ಯಾರಿಗೂ ಸಹ ಇದರ ಬಗ್ಗೆ ತಿಳಿದಿಲ್ಲಾ.

ಅಪ್ಪು ಅವರನ್ನು ಕಳೆದುಕೊಂಡಿರುವ ದುಃಖ ಕರ್ನಾಟಕದ ಪ್ರತಿಯೊಂದು ಮನೆಯಲ್ಲಿ ಕೂಡ ಎದ್ದು ಕಾಣಿಸುತ್ತ ಇದೆ. ಹೌದು ಒಮ್ಮೆಯಾದರೂ ನಮ್ಮಲ್ಲಿ ಈ ಪ್ರಶ್ನೆ ಮೂಡುತ್ತದೆ ನಮಗೆ ಅಪ್ಪು ಬಂದು ಅಲ್ಲ ಅಲ್ಲ ನಮ್ಮ ಸ್ನೇಹಿತನೂ ಅಲ್ಲ ಹತ್ತಿರದಿಂದ ಅವರನ್ನು ನೋಡು ಇಲ್ಲ ಅವರನ್ನು ನಾವು ಎಂದಿಗೂ ಭೇಟಿ ಆಗಿಲ್ಲ ಆದರೆ ಅವರು ಮಾತ್ರ ಪ್ರತಿಯೊಬ್ಬರ ಮನೆಯ ಮಗನಂತೆ ಇದ್ದರು. ಇನ್ನು ರಾಜ್ ಕುಟುಂಬದವರು ಮಂತ್ರಾಲಯದ ಶ್ರೀ ರಾಘವೇಂದ್ರ ಅವರ ಭಕ್ತರಾಗಿದ್ದರು ಮತ್ತು ಪುನೀತ್ ಅವರು ಕಳೆದ ವರ್ಷ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯವರ ದರ್ಶನಕ್ಕೆ ಹೋಗಿದ್ದರು.

ಪುನೀತ್ ಅವರು ದಂಪತಿಗಳ ಸಮೇತ ಮಂತ್ರಾಲಯಕ್ಕೆ ಹೋದಾಗ ಇದೇ ವೇಳೆ ರಾಯರ ಮೂರ್ತಿ ಹಾಗೂ ವೀಣೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾತನಾಡುತ್ತ ಇದ್ದ ಸಂದರ್ಭದಲ್ಲಿ ಅಲುಗಾಡಿತ್ತು, ಹಾಗೆ ಈ ವಿಡಿಯೋ ಪುನೀತ್ ಅವರ ಅಗಲಿಕೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು ಇದು ಪುನೀತ್ ಸರ್ ಅವರ ನಿಧನದ ಮುನ್ಸೂಚನೆ ಆಗಿದೆ ಎಂದು ಹಲವರು ಈ ವೀಡಿಯೋ ನೋಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು ಆದರೆ ಈ ವಿಡಿಯೋ ಕುರಿತು ಮಂತ್ರಾಲಯದ ಪೀಠಾಧಿಪತಿ ಆಗಿರುವ ಶ್ರೀ ಸುಭುದೇಂದ್ರತೀರ್ಥ ರವರು ಆ ವಿಡಿಯೋ ಗೆ ಪ್ರತಿಕ್ರಿಯೆ ನೀಡಿದ್ದು ಈ ರೀತಿ ಹೇಳಿಕೆ ನೀಡಿದ್ದಾರೆ. ಯಾರು ಕೂಡ ಈ ಘಟನೆಯನ್ನು ಕಂಡು ಕೆಟ್ಟದಾಗಿ ಭಾವಿಸಬಾರದು, ಇದು ಕೇವಲ ಕಾಕತಾಳೀಯ ಮಾತ್ರ ಎಂಬುದಾಗಿ ಸ್ಪಷ್ಟಿಕರಣ ಮಾಡಿದ್ದಾರೆ, ಹಾಗೂ ಇದಕ್ಕೂ ಪುನೀತ್ ರವರಿಗೆ ಆಗಿರುವುದನ್ನು ಸಂಬಂಧವಿಲ್ಲ ಎಂದಿದ್ದಾರೆ.

ಅದೇನೇ ಆಗಿರಲಿ ಇಷ್ಟೊಂದು ರಾಶಿಯಲ್ಲಿ ಆ ದೇವರಿಗೆ ಮುಗ್ಧವಾದ ಆ ಬೆಟ್ಟದ ಹೂವು ಬೇಕಾಯ್ತು ಯಾಕೆ ದೇವರು ನಮಗೆ ಇಂತಹ ಅನ್ಯಾಯ ಮಾಡಿದ ಅಂತ ಕೇಳಬೇಕು ಅನಿಸುತ್ತದೆ ಆದರೆ ಇದೆಲ್ಲವೂ ಸಹ ಮನಸಲ್ಲಿ ನಲ್ಲಿಯೇ ಉಳಿದು ಬಿಡುತ್ತದೆ. 1ಕ್ಷಣಕ್ಕೆ ಅಪ್ಪು ಅವರ ನಗುಮುಖವನ್ನು ನೆನೆದರೆ ಕಣ್ಣೀರು ತುಂಬಿ ಬರುತ್ತದೆ ಅವರು ಸದಾ ನಮ್ಮ ಮನಸ್ಸು ನಲ್ಲಿರುತ್ತಾರೆ ಅಪ್ಪು ಸದಾ ಅಮರರು. ಹೌದು ಅವರು ನಮ್ಮನ್ನು ಬಿಟ್ಟು ಹೋಗಿಲ್ಲ ಅವರ ಆದರ್ಶಗಳು ಅವರ ಗುಣಗಳು ಅವರ ಮುಗ್ಧ ನಗು ಇವತ್ತಿಗೂ ನಮ್ಮಲ್ಲಿ ಹಾಗೆ ಅವರು ಅವರ ಅಪ್ಪ ಅಮ್ಮನ ಬಳಿ ಹೋಗಿ ಅವರ ಮಡಿಲು ಸೇರಿದ್ದಾರೆ ಅಷ್ಟೇ ಆದರೆ ಅಪ್ಪು ಸದಾ ಕನ್ನಡದ ಕಂದನಾಗಿರುತ್ತಾರೆ, ಕನ್ನಡ ಜನತೆಯ ಪ್ರತಿಯೊಬ್ಬರ ಮನೆ ಮಗನಾಗಿರುತ್ತಾರೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment