WhatsApp Logo

ಕೌನ್ ಬನೇಗಾ ಕರೋಡ್ ಪತಿಯಲ್ಲಿ ಬರೋಬ್ಬರಿ 5 ಕೋಟಿ ಗೆದ್ದಿದ್ದವನ ಬದುಕು ಬೀದಿಗೆ ಬಂತು ! ಅಷ್ಟಕ್ಕೂ ಆಗಿದ್ದೇನು ? ಆತ ಈಗ ಹೇಗಿದ್ದಾನೆ ಗೊತ್ತಾ ?

By Sanjay Kumar

Updated on:

ಪ್ರತಿಯೊಬ್ಬರಿಗೂ ಸಹ ಹಣ ಎಷ್ಟು ಮುಖ್ಯ ಎಂಬುದು ಈಗಾಗಲೇ ಪ್ರತಿಯೊಬ್ಬರಿಗು ತಿಳಿದಿರುತ್ತದೆ ಹೌದು ಈಗ ಹುಟ್ಟಿದ ಮಗುವಿಗೂ ಕೂಡ ಹಣ ಅದೆಷ್ಟು ಬೇಗ ಆಕರ್ಷಣೀಯ ಗೊಳಿಸುತ್ತದೆ ಅಂದರೆ ಇನ್ನೂ ಪ್ರಪಂಚ ದ ಅರಿವು ಮೂಡಿದ ಹಣ ಬೇಕು ಅಂತ ಎಷ್ಟು ಬೇಡ ನೀವೇ ಹೇಳಿ ಹೌದು ಪ್ರತಿಯೊಬ್ಬರೂ ಸಹ ದುಡಿಯುವುದು ಹಣಕ್ಕಾಗಿಯೇ ಹಾಗೆ ಕೆಲವರು ಅಂದುಕೊಳ್ತಾ ಇರ್ ತಾರೆ ನಾವು ಇದ್ದಕ್ಕಿದ್ದ ಹಾಗೆ ಕೋಟ್ಯಧಿಪತಿಗಳಾದರೆ ಹೇಗಿರಬಹುದು!? ಹೌದು ಇದನ್ನು ಕನಸು ಕಾಣುವುದರಲ್ಲಿಯೇ ಏನೋ ಖುಷಿ ಏನೋ ನಿಜವಾಗಿಯೂ ಕೋಟ್ಯಧಿಪತಿಗಳಾದರೆ ಅದರ ಕುರಿತು ವಿವರವನ್ನು ನೀಡುವುದೂ ಸಹ ಕಷ್ಟಾನೆ ಬಿಡಿ. ಹೌದು ಆಗ ಏನೂ ಬೇಕಾದರೂ ಕೊಂಡುಕೊಳ್ಳಬಹುದು ಬೇಕೆಂದ ಕಡೆ ಹೋಗಬಹುದು ಇಡೀ ಜೀವನವನ್ನೆಲ್ಲಾ ಆರಾಮವಾಗಿ ಸ್ವರ್ಗದಂತೆ ಕಳೆಯಬಹುದು ಅಂತ ಯೋಚನೆ ಎಂಥವರಿಗಾದರೂ ಬರುತ್ತದೆ.

ಆದರೆ ಇಲ್ಲೊಬ್ಬ ವ್ಯಕ್ತಿ ರಾತ್ರೋ ರಾತ್ರಿ ಬರೋಬ್ಬರಿ 5 ಕೋಟಿ ರೂಪಾಯಿಗಳನ್ನ ಗಳಿಸಿದ್ದಾನೆ. ರಾತ್ರೋರಾತ್ರಿ ಸಿರಿವಂತನಾದ ಈ ವ್ಯಕ್ತಿ ಪುಡಿಗಾಸು ಇಲ್ಲದೆ ಬೀದಿ ಗೆ ಬಿದ್ದಿರುತ್ತಾನೆ ಅಂತ ಹೇಳಿದರೆ ನೀವು ನಂಬುವುದಿಲ್ಲ ಆದರೆ ನೀವು ನಂಬಲೇಬೇಕು. ಹೌದು ಸ್ನೇಹಿತರ 2011ರಲ್ಲಿ ಬಾಲಿವುಡ್ ಲೆಜೆಂಡ್ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿ ಶೋ ನಿಮಗೂ ಕೂಡ ಗೊತ್ತೇ ಇದೆ ಈ ಶೋ ಅಲ್ಲಿ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡುವ ಮೂಲಕ ಬರೋಬ್ಬರಿ 5ಕೋಟಿ ರೂಪಾಯಿಗಳನ್ನು ಗೆದ್ದಿರುವ ಈ ವ್ಯಕ್ತಿ ಮೂಲತಃ ಬಿಹಾರದವರು ಇವರ ಹೆಸರು ಸುಶೀಲ್ ಎಂದು. ಸುಶೀಲ್ ಮೂಲತಃ ಮಿಡಲ್ ಕ್ಲಾಸ್ ಕುಟುಂಬದಿಂದ ಬಂದವರು. ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಅಂತ ಅಂದುಕೊಳ್ಳುತ್ತಿದ್ದ ಸುಶೀಲ್ ನಾನು ಇನ್ನು ಮುಂದೆ ಜೀವನವೆಲ್ಲ ಖುಷಿಯಿಂದ ಇರಬಹುದು ಯಾವುದೇ ಕಷ್ಟಗಳಿರುವುದಿಲ್ಲ ಅಂತ ಅಂದುಕೊಳ್ಳುತ್ತೇವೆ ಆದರೆ ಇದ್ದಕ್ಕಿದ್ದ ಹಾಗೆ ಏನಾಯ್ತು ಗೊತ್ತಾ! ಈ ವಿಚಾರ ಕುರಿತು ಸುಶಿಲ್ ಹೇಳಿದೆನು ತಿಳಿಯೋಣ ಬನ್ನಿ ಕೆಳಗಿನ ಲೇಖನದಲ್ಲಿ.

ಕೆಲವರಿಗೆ ಇದ್ದಕಿದ್ದಂತೆ ಕೋಟ್ಯಂತರ ಹಣ ಬಂದುಬಿಟ್ಟರೆ ಅದನ್ನ ಹೇಗೆ ಖರ್ಚು ಮಾಡಿ ಉಳಿಸಿಕೊಳ್ಳಬೇಕು ಎಂದು ತಿಳಿಯುವುದಿಲ್ಲ ಇನ್ನು ಕೆಲವರು ದೊಡ್ಡ ಮೊತ್ತದ ಹಣ ನೋಡಿದ ಕೂಡಲೇ ಜೀವನದಲ್ಲಿ ತುಂಬಾ ಬದಲಾಗಿಬಿಡುತ್ತಾರೆ ಅದುವೇ ಸುಶೀಲ್ ಜೀವನದಲ್ಲಿಯೂ ಕೂಡ ನಡೆದೆ ಬಿಡ್ತು. ಸುಶೀಲ್ ಗೆದ್ದಿದ್ದ ಬರೋಬ್ಬರಿ ೫ ಕೋಟಿಯನ್ನ ಕೆಲವೇ ವರ್ಷಗಳಲ್ಲಿ ಖಾಲಿ ಮಾಡಿಬಿಟ್ಟ. ಕೆಟ್ಟ ಚಟಗಳಿಗೆ ದಾಸನಾದ ಸುಶೀಲ್ ಸಂಸಾರವನ್ನ ಹಾಳು ಮಾಡಿಕೊಂಡ ನಂತರ ಜೀವನದಲ್ಲಿ ಏನೆಲ್ಲಾ ನಡೆಯಿತು ಎಂದು ಸ್ವತಃ ಅವರೇ ಹೇಳಿದ್ದಾರೆ.

ತನ್ನ ಜೀವನದಲ್ಲಿ ಏನಾಯ್ತು ಎಂದು ಸ್ವತಃ ಸುಶೀಲ್ ಅವರೇ ಹೇಳಿಕೊಂಡಿದ್ದು ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ 5ಕೋಟಿ ಗೆದ್ದ ಬಳಿಕ ನನ್ನ ಜೀವನದಲ್ಲಿ ಅತಿ ಕೆಟ್ಟ ಕಾಲ ಶುರು ಆಯಿತು. ಇನ್ನು ಕಾರ್ಯಕ್ರಮದಲ್ಲಿ ಗೆದ್ದ ಬಳಿಕ ಸುಶೀಲ್ ಒಬ್ಬ ಸೆಲೆಬ್ರೆಟಿಯಾಗಿ ಬಿಟ್ಟಿದ್ದರು. ಪ್ರತೀ ದಿನ ಹತ್ತರಿಂದ ಹದಿನೈದು ಸ್ಥಳೀಯ ಕಾರ್ಯಕ್ರಮಗಲ್ಲಿ ಭಾಗವಹಿಸುತ್ತಿದ್ದರು ಸುಶೀಲ್ ಇದರಿಂದ ವಿದ್ಯಾಭ್ಯಾಸ ಮಾಡಲು ಸಹ ಸಾಧ್ಯವಾಗಲಿಲ್ಲ ಮತ್ತು ಪದೇ ಪದೇ ಮೀಡಿಯಾದವರು ಸಹ ಈಗ ನೀವು ಏನು ಮಾಡುತ್ತಿದ್ದಿರಿ ಎಂದು ಪ್ರಶ್ನೆ ಕೇಳುತ್ತಾ ಇದ್ದರು. ಇನ್ನು ಸಾಮಾನ್ಯ ಎಂಬಂತೆ ಒಬ್ಬ ವ್ಯಕ್ತಿಗೆ ದೊಡ್ಡ ಮಟ್ಟದ ಹಣ ಬಂದಾಗ ಆ ವ್ಯಕ್ತಿಯ ಸುತ್ತ ಮುತ್ತ ಜನ ಹೆಚ್ಚಾಗುವುದು ಸಂಬಂದಿಕರು ಹೆಚ್ಚಾಗುವುದು ಸರ್ವೇ ಸಾಮಾನ್ಯ. ಸುಶೀಲ್ ಗೂ ಇನ್ನು ದಾನ ಮಾಡಲು ಶುರು ಮಾಡಿದ್ದ ಇದೇ ವೇಳೆ ಸುಶೀಲ್ ಜೊತೆ ಹಲವು ಕೆಟ್ಟ ಮಂದಿ ಕೂಡ ಸೇರಿಕೊಂಡರು.

ಹಣ ಬಂದ ನಂತರ ಕೆಟ್ಟ ಚಟಗಳಿಗೆ ದಾಸನಾದ ಸುಶೀಲ್ ತನ್ನ ಪತ್ನಿಯ ಜತೆಗಿನ ಸಂಬಂಧವನ್ನು ಕೂಡ ಕಳೆದುಕೊಳ್ಳುತ್ತಾನೆ. ಆದರೆ ನಂತರ ಜೀವನಕ್ಕಾಗಿ ಕಾರು ಓಡಿಸಿ ದೆಹಲಿಯಲ್ಲಿ ಹೊಸ ಜೀವನ ಪ್ರಾರಂಭ ಮಾಡಿದ್ರು. ಆದರೆ ಅಲ್ಲಿ ಕೂಡ ಅತೀ ಕೆಟ್ಟ ಚಟಗಳನ್ನ ಮೈಗೂಡಿಸಿಕೊಂಡ ಸುಶೀಲ್ ಗೆ ಹೆಂಡತಿಯಿಂದ ಡೈವರ್ಸ್ ಗೆ ನೋಟಿಸ್ ಬಂತು. ಇನ್ನು ಸಿನಿಮಾ ನಿರ್ದೇಶನ ಮಾಡುವ ಕನಸು ಹೊತ್ತು ಮುಂಬೈಗೆ ಬಂದವನಿಗೆ ಅದು ಸಹ ನೆರವೇರಲಿಲ್ಲ ಕೆಟ್ಟ ಚಟಗಳಿಂದ ಹೆಚ್ಚು ಮದ್ಯಪಾನ ಮಾಡುತ್ತಾ ಇದ್ದ ಸುಶೀಲ್ ಚೈನ್ ಸ್ಮೋ..ಕರ್ ಕೂಡ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ಮುಂಬೈನಲ್ಲಿ ಸ್ನೇಹಿತನ ಜೊತೆಗಿದ್ದ ಸುಶೀಲ್ ಗೆ ಕಡೆಗೂ ತಾನು ಮಾಡುತ್ತಿದ್ದ ತಪ್ಪುಗಳ ಬಗ್ಗೆ ತಿಳಿಯುತ್ತದೆ ಚಟಗಳನ್ನೆಲ್ಲ ಬಿತ್ತೋ ತಮ್ಮ ಜೀವನದಲ್ಲಿ ಏನೇ ಬಂದರು ಎದುರಿಸಬೇಕು ಎಂದು ಹೊರಟೆ ನಂತರ ಮುಂಬೈ ಬಿಟ್ಟು ತನ್ನ ಹಳ್ಳಿಗೆ ಬಂದು ಶಿಕ್ಷಕನಾಗಿ ಕೆಲಸ ಮಾಡಲು ಶುರುಮಾಡಿದೆ ಎಂದು ಹೇಳಿಕೊಂಡಿದ್ದಾರೆ ಸುಶೀಲ್. ಇನ್ನು ಪರಿಸರವಾದಿಯಾಗು ಕೆಲಸ ಮಾಡುತ್ತಿರುವ ಸುಶೀಲ್ ನನ್ನಿಂದ ಪ್ರಕೃತಿಯ ಸೇವೆ ನಿರಂತರವಾಗಿ ನಡೆಯುತ್ತದೆ ಎಂದು ಹೇಳಿಕೊಂಡಿದ್ದಾರೆ ಸುಶೀಲ್. ಇದಕ್ಕೆಲ್ಲಾ ದೊಡ್ಡವರು ಹೇಳೋದು ಹಣ ಮನುಷ್ಯನನ್ನು ಎಲ್ಲಿಂದ ಎಲ್ಲಿಗೆ ಬೇಕಾದರೂ ಕರೆದೊಯ್ಯಬಹುದು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment