ತುಮಕೂರಿನ ಮಧುಗಿರಿಯಲ್ಲಿ ಸಾವಿರದ ಒಂಬೈನೂರ ಅರವತ್ನಾಲ್ಕರಲ್ಲಿ ಕನ್ನಡದ ಖ್ಯಾತ ನಟ ಶಕ್ತಿ ಪ್ರಸಾದ್ ಅವರ ಮಗನಾಗಿ ಹುಟ್ಟಿದ್ರು ನಟ ಅರ್ಜುನ್ ಸರ್ಜಾ ತಂದೆ ಶಕ್ತಿ ಪ್ರಸಾದ್ ಅಂದಿನ ಕಾಲದ ಖ್ಯಾತ ಖಳನಟ ಹಾಗೂ ಪೋಷಕ ನಟರಾಗಿ ಕನ್ನಡ ಚಿತ್ರರಂಗದಲ್ಲಿ ತುಂಬಾ famous ಆಗಿದ್ರು ಅರ್ಜುನ್ ಸರ್ಜಾ ಬಾಲನಟರಾಗಿ ಸಾವಿರದ ಒಂಬೈನೂರ ಎಂಬತ್ತೊಂದರಲ್ಲಿ ಕನ್ನಡ ಚಿತ್ರರಂಗವನ್ನ ಪ್ರವೇಶಿಸಿದರು ಮಕ್ಕಳ ಚಿತ್ರ ಸಿಂಹದ ಮರಿ ಸೈನ್ಯ ಚಿತ್ರ ಖ್ಯಾತ ನಿರ್ದೇಶಕ SV ರಾಜೇಂದ್ರಸಿಂಗ್ ಬಾಬು ಅವರು ನಿರ್ದೇಶಿಸಿದ್ದರು ಈ ಚಿತ್ರದಲ್ಲಿ ಅರ್ಜುನ್ ಸರ್ಜಾ ಅವರ ಸಾಹಸಮಯ ದೃಶ್ಯಗಳು ಅಂದಿನ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ,
ಎಲ್ಲರಿಗೂ ಕೂಡ ಇಷ್ಟವಾಗಿದ್ದವು ನಂತರ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಕೆಲವು ಚಿತ್ರಗಳಲ್ಲಿ ನಟಿಸಿದ್ದರು ಆದರೂ ಅರ್ಜುನ್ ಸರ್ಜಾ ಅಷ್ಟಾಗಿ success ಕಾಣಲಿಲ್ಲ ಕನ್ನಡಿಗರಾಗಿ ಹುಟ್ಟಿದ ಇವರ ಪ್ರತಿಭೆಗೆ ತಕ್ಕ ಅವಕಾಶ ಸಿಕ್ಕಿದ್ದು ತಮಿಳು ಹಾಗು ತೆಲುಗು ಚಿತ್ರರಂಗದಲ್ಲಿ ತಮಿಳು ಚಿತ್ರರಂಗದಲ್ಲಿ ಅರ್ಜುನ್ ಸರ್ಜಾ ತುಂಬಾ famous ನಟರಾಗಿ ಬೆಳೆದರು ತಮಿಳಿನಲ್ಲಿ ಖ್ಯಾತ action hero ಆಗಿ ಗುರುತಿಸಿಕೊಂಡರು ತಮಿಳಿನ ಹೆಸರಾಂತ ನಿರ್ದೇಶಕ ಶಂಕರ್ ಅವರ gentleman ಚಿತ್ರ ಅರ್ಜುನ್ ಸರ್ಜಾ ಅವರಿಗೆ ತುಂಬಾ ಹೆಸರನ್ನು ತಂದು ಕೊಟ್ಟಿತ್ತು.
ಹಾಗೂ ತಮಿಳು ಪ್ರೇಕ್ಷಕರು ಕೂಡ ಅರ್ಜುನ್ ಸರ್ಜಾ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಿದರು ತಮಿಳು, ತೆಲುಗು ನಟರಾಗಿ ಅರ್ಜುನ್ ಸರ್ಜಾ ಬೆಳೆದರೂ ಕೂಡ ತನ್ನ ತಾಯ್ನಾಡಿನ ನಂಟನ್ನ ಬಿಡಲಿಲ್ಲ ಮತ್ತೆ ಕನ್ನಡದಲ್ಲಿ ನಟಿಸಿ ಹಾಗು ಕೆಲವು ಚಿತ್ರಗಳನ್ನ ನಿರ್ಮಿಸಿ ನಿರ್ದೇಶನ ಕೂಡ ಮಾಡಿದ್ರು ಕೇವಲ ಆಕ್ಷನ್ ಚಿತ್ರಗಳಷ್ಟೇ ಅಲ್ಲದೆ ಭಕ್ತಿ ಪ್ರದಾನ ಚಿತ್ರಗಳಲ್ಲಿ ಕೂಡ ಅರ್ಜುನ್ ಸರ್ಜಾ ಮನೋಜ್ಞವಾಗಿ ನಟಿಸಿದ್ದಾರೆ ಶ್ರೀ ಮಂಜುನಾಥ ಚಿತ್ರ ಇವರ ಮುಖ್ಯವಾದ ಭಕ್ತಿ ಪ್ರಧಾನ ಚಿತ್ರ ಇತ್ತೀಚಿಗೆ ಅರ್ಜುನ್ ಸರ್ಜಾ ಅವರು ಪ್ರೇಮ ಬರಹ ಎಂಬ ಚಿತ್ರವನ್ನ ಕನ್ನಡದಲ್ಲಿ ನಿರ್ಮಿಸಿ ನಿರ್ದೇಶಿಸಿದ್ದಾರೆ .
ಅರ್ಜುನ್ ಸರ್ಜಾ ಅವರ ಮಗಳು ಈ ಚಿತ್ರದಲ್ಲಿ ಐಶ್ವರ್ಯ ಅವರು ನಾಯಕ ನಟಿಯಾಗಿ ನಟಿಸಿದ್ದಾರೆ ಅರ್ಜುನ್ ಸರ್ಜಾ ಅವರ ಸಾಧನೆಗೆ ತಮಿಳು ಹಾಗೂ ತೆಲುಗು ಕನ್ನಡ ಚಿತ್ರರಂಗದಲ್ಲಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ ಅರ್ಜುನ್ ಸರ್ಜಾ ಅವರ ಪತ್ನಿ ಆಶಾರಾಣಿ ಅವರು ಕನ್ನಡದ ಖ್ಯಾತ ಹಿರಿಯ ನಟ ಕಲಾತಪಸ್ವಿ ಆಗಿದ್ದ ರಾಜೇಶ್ ಅವರ ಪುತ್ರಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರ ರಥಸಪ್ತಮಿ ಚಿತ್ರದಲ್ಲಿ ರಾಣಿ ಅರ್ಜುನ್ ಅವರು ನಾಯಕಿಯಾಗಿ ನಟಿಸಿದ್ರು.
ನಟ ಅರ್ಜುನ್ ಸರ್ಜಾ ಅವರು ನಿಮಗೆ ಇಷ್ಟವಾದಲ್ಲಿ ಈ ವೀಡಿಯೊಗೆ ಒಂದು ಲೈಕ್ ಮಾಡಿ. ಹಾಗೆ ಈ ವೀಡಿಯೋ ಬಗ್ಗೆಗಿನ ನಿಮ್ಮ ಅನಿಸಿಕೆ, ಅಭಿಪ್ರಾಯವನ್ನ ತಪ್ಪದೆ ನಮ್ಮ ಕಾಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ. ಹಾಗೆ ನೀವಿನ್ನು ನಮ್ಮ ಚಾನೆಲನ್ನ ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಮಾಡಿ. ಧನ್ಯವಾದಗಳು.
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
This website uses cookies.