ಅಂದು ಮದುವೆಯ ಪೂರ್ವ ಮೇಘನಾ ರಾಜ್ ಚಿರು ಮದುವೆ ಕಾರ್ಡಿನಲ್ಲಿ ಏನೆಂದು ಬರೆದಿದ್ದರು ಗೊತ್ತಾ… ನೋಡಿ ನಿಜಕ್ಕೂ ಬೇಜಾರ್ ಆಗುತ್ತೆ ಕಣ್ರೀ

256

ಸ್ಯಾಂಡಲ್ ವುಡ್ ನಲ್ಲಿ ಇವರನ್ನು ಕ್ಯೂಟ್ ಕಪಲ್ ಅಂತ ಕರೀತಾರೆ ಇವತ್ತಿಗೂ ಈ ಜೋಡಿಯನ್ನು ನಾವು ಸೋಷಿಯಲ್ ಮೀಡಿಯಾಗಳಲ್ಲಿ ಒಟ್ಟಿಗೆ ನೋಡಿದಾಗ ಕಣ್ಣು ತುಂಬಿ ಬರುತ್ತದೆ. ಯಾಕೆ ಈ ಜೋಡಿ ನೂರುಕಾಲ ಸುಖವಾಗಿ ಬಾಳಲು ಸಾಧ್ಯವಾಗಲಿಲ್ಲ ಅನ್ನುವ ನೋವು ನಮ್ಮನ್ನು ಕಾಡುತ್ತದೆ. ಹೌದು ಒಬ್ಬರಿಗೊಬ್ಬರು ಜೊತೆಯಾಗಿ ಜೀವನ ನಡೆಸಬೇಕು ಮುಂದೆ ನಮ್ಮ ಜೀವನವು ಹಾಗಿರಬೇಕು ಹೀಗಿರಬೇಕು.

ಎಂದು ಬಹಳಷ್ಟು ಕನಸುಗಳನ್ನು ಕಂಡು ಆ ಕನಸನ್ನು ನನಸು ಮಾಡುವುದಕ್ಕೆ ಏನೆಲ್ಲ ಬೇಕೋ ಅದನ್ನೆಲ್ಲಾ ತಯಾರಿ ಮಾಡಿಕೊಂಡಿದ್ದು, ಈ ಜೋಡಿಗಳು ಅರ್ಧಕ್ಕೆ ಇವರ ಜೀವನದ ಪಯಣವನ್ನು ಒಂಟಿಯಾಗಿ ಸಾಗಿಸುವ ಪರಿಸ್ಥಿತಿ ಬಂದಿದೆ. ಹೌದು ಇಬ್ಬರೂ ಕೂಡಿ ನಮ್ಮ ಸಂಸಾರವನ್ನು ಸುಖಮಯವಾಗಿ ಸಾಗಿಸಬೇಕು ಅಂತ ಒಬ್ಬರಿಗೊಬ್ಬರು ಮಾತುಕೊಟ್ಟಿದ್ದರು ಆದರೆ ವಿಧಿಯಾಟವೇ ಬೇರೆಯಿತ್ತು ಈ ಜೋಡಿಯ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲಾ.

ಸಂಸಾರ ಎಂಬ ದೋಣಿಯನ್ನು ಇಬ್ಬರೂ ಸೇರಿ ನಡೆಸಬೇಕಿತ್ತು ಆದರೆ ಆ ದೋಣಿಯಲ್ಲಿ ಒಬ್ಬಂಟಿಗರಾಗಿ ಸದ್ಯ ನಟಿ ಮೇಘನಾ ರಾಜ್ ಅವರು ತಮ್ಮ ಜೀವನವನ್ನು ಸಾಗಿಸಬೇಕಿದೆ. ಹೌದು ಮೇಘನಾ ರಾಜ್ ಅವರು ಕಳೆದುಕೊಂಡು ಇಂದಿಗೆ 2ವರ್ಷಗಳು ಕಳೆದಿದೆ ಆದರೂ ತಮ್ಮ ಜೊತೆ ಚಿರು ಇದ್ದಾರೆ ಅನ್ನುವ ನೆನಪುಗಳಲ್ಲಿಯೇ ಬಾಳುತ್ತಿರುವ ಮೇಘನಾ ರಾಜ್ ತಮ್ಮ ಮಗುವಿನೊಂದಿಗೆ ಮಗುವಿನಲ್ಲಿ ಚಿರು ಪ್ರೀತಿಯನ್ನು ಕಾಣುತ್ತಾ ಮೇಘನರಾಜ್ ಮಗುವಿನ ಮುಖದಲ್ಲಿ ತಾವು ಸಂತಸಪಡುತ್ತಾ ಜೀವನ ನಡೆಸುತ್ತಿದ್ದಾರೆ.

ಚಿರು ಅವರನ್ನ ಕಳೆದುಕೊಂಡಾಗ ಮೇಘನಾ ರಾಜ್ ಅವರು 4 ತಿಂಗಳ ಗರ್ಭಿಣಿ ಆಗಿದ್ದರು, ತಮ್ಮ ಜೀವನವೇ ಇಲ್ಲವಾಯ್ತು ಅನ್ನುವಷ್ಟರಲ್ಲಿ ಮತ್ತೆ ಮೇಘನಾ ರಾಜ್ ಅವರ ಬಾಳಿಗೆ ಜ್ಯೂ ಚಿರು ಎಂಟ್ರಿ ಕೊಟ್ಟರು ಆಗ ಮತ್ತೆ ಮೇಘನಾ ರಾಜ್ ಅವರ ಬಾಳಲ್ಲಿ ಬೆಳಕು ಮೂಡಿತ್ತು. ಚಿರು ಮತ್ತು ಮೇಘನಾ ರಾಜ್ ಅವರ ಪ್ರೀತಿ ಯಾವ ಸಿನಿಮಾ ಕತೆಗೂ ಕಡಿಮೆ ಇರಲಿಲ್ಲ, ಹೌದು 8 ವರುಷಗಳ ಕಾಲದ ಅವರ ಪ್ರೀತಿ ಮನೆಯವರ ಒಪ್ಪಿಗೆ ಮದುವೆಯಲ್ಲಿ ಜೊತೆಯಾಗಿತ್ತು.

ಚಿರು ತಮ್ಮ ಪ್ರೀತಿಯ ಮಡದಿಗೆ ಕುಟ್ಟಿಮ ಎಂದು ಕರೆಯುತ್ತಿದ್ದರು ಚಿರು ಮತ್ತು ಮೇಘನಾ ರಾಜ್ ಅವರ ಮದುವೆಯ ಆಮಂತ್ರಣ ಪತ್ರಿಕೆ ಹೇಗಿತ್ತು ಗೊತ್ತಾ ಹೌದು ನಿಮಗೆ ಈಗಾಗಲೇ ಗೊತ್ತಿರುವ ನಟಿ ಮೇಘನಾ ರಾಜ್ ಅವರು ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರಾಗಿದ್ದರು. ಹಾಗಾಗಿ ನಟ ಚಿರು ಮತ್ತು ನಟಿ ಮೇಘನರಾಜ್ ಸರ್ಜಾ ಅವರ ಮದುವೆ ಎರಡೂ ಧರ್ಮಗಳಲ್ಲಿಯು ನೆರವೇರಿತ್ತು. ಹೌದು ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದ ನಟಿ ಮೇಘನಾ ರಾಜ್ ಮತ್ತು ನಟ ಚಿರು ಹಾಗೆ ಕ್ರಿಶ್ಚಿಯನ್ ಸಮುದಾಯ ದ ಶೈಲಿಯಲ್ಲಿಯೂ ಕೂಡ ಈ ದಂಪತಿಗಳು ಮದುವೆಯಾಗಿದ್ದರು.

ಹೌದು ಈ ದಂಪತಿಗಳನ್ನೂ ಒಟ್ಟಿಗೆ ನೋಡುವುದಕ್ಕೆ ಖುಷಿ ಹಾಗೆ ಇವರ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಎರಡು ಸಮುದಾಯಕ್ಕೂ ಹೋಲುವಂತೆ, ಇವರ ಆಮಂತ್ರಣ ಪತ್ರಿಕೆ ಇತ್ತು. ಇಂದು ನಟಿ ಮೇಘನಾ ರಾಜ್ ಅವರು ತಮ್ಮ ಪ್ರೀತಿಯ ಚಿರು ಅವರ ಸಮಾಧಿಯ ಬಳಿ ತಮ್ಮ ಮಗನನ್ನು ಕರೆದುಕೊಂಡು ಹೋಗಿದ್ದರು. ಹೌದು ಅಪ್ಪನನ್ನ ನೋಡಿ ನಮಸ್ಕರಿಸಿದ ರಾಯನ್ ಎಷ್ಟು ಮುದ್ದಾಗಿ ತಂದೆಯ ಆಶೀರ್ವಾದ ಪಡೆದುಕೊಂಡಿದ್ದಾನೆ. ಸದ್ಯ ಚಿರು ಮತ್ತು ಮೇಘನಾ ರಾಜ್ ಅವರ ಆಮಂತ್ರಣ ಪತ್ರಿಕೆಯಲ್ಲಿ ಏನು ಬರೆದಿದ್ದಾರೆ ಅಂತ ನೀವೇ ನೋಡಿ. ಹಾಗಾದರೆ ಈ ಲೇಖನಿಯಲ್ಲಿ ಚಿರು ಮತ್ತು ಮೇಘನಾ ರಾಜ್ ಅವರ ಮದುವೆಯ ಆಮಂತ್ರಣ ಪತ್ರಿಕೆಯ ಫೋಟೊ ನೀಡಲಾಗಿದೆ ನೀವು ಕೂಡ ನೋಡಿ ಹಾಗೆ ಇವರ ಪ್ರೀತಿಯ ಸಂಕೇತವಾಗಿರುವ ರಾಯನ್ ಗೆ ನಿಮ್ಮ ಶುಭಾ ಹಾರೈಕೆಯನ್ನು ತಿಳಿಸಿ ಧನ್ಯವಾದ…