ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ತಮ್ಮ ಜೀವಿತಾವಧಿಯಲ್ಲಿ ನಡೆದು ಬಂದ ಹಾದಿಯೇ ರೋಚಕ … ಅಷ್ಟಕು ಯಾರು ಹೇಗಿದ್ದರೂ ನೋಡಿ .. ಎಲ್ಲ ಗೊತ್ತಾತ್ರೇ ನಿಮ್ಮ ಜೀವನದಲ್ಲೂ ಸ್ವಲ್ಪ ಬದಲಾವಣೆ ಆಗುತ್ತೆ…

ಹೇಗಿದ್ದೀರಿ ಎಲ್ಲರು ಬಂಧುಗಳೇ ಶತಮಾನದ ಸಂತ ನಡೆದಾಡುವ ದೇವರು ಆಧುನಿಕ ದೇವಮಾನವ ಎರಡನೇ ವಿವೇಕಾನಂದ ಸಿದ್ದೇಶ್ವರ ಸ್ವಾಮೀಜಿಯನ್ನ ಕಳೆದುಕೊಂಡಿದ್ದೇವೆ ಭಕ್ತಸಾಗರದಲ್ಲಿ ಅನಾಥ ಪ್ರಜ್ಞೆ ಮೂಡಿದೆ ಬಂಧುಗಳೇ ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಗಳು ಅಂದ್ರೆ ಎಲ್ಲಿಯವರೆಗೆ ಬಂದು ಬಿಟ್ಟಿದೆ ಅಂದ್ರೆ ಪ್ರಚಾರವನ್ನ ಬಯಸುವಂತವರು ರಾಜಕೀಯ ನಾಯಕರಿಗೆ ಬಕೆಟ್ ಹಿಡಿದುಕೊಂಡು ಜೈಕಾರವನ್ನ ಹಾಕುವಂತವರು ಕೇವಲ ತಮ್ಮ ಸಮುದಾಯದ ಬಗ್ಗೆ ಮಾತ್ರ ಯೋಚನೆ ಮಾಡುವಂತವರು.

ಮಠದ ಆಸ್ತಿ ಪಾಸ್ತಿ ಹಣದ ವ್ಯಾಮೋಹಕ್ಕೆ ಒಳಗಾದಂತವರು ದಾರಿಗಳು ಅಂದ್ರೆ ನಂಬಿಕೆಗೆ ಅರ್ಹರಲ್ಲ ಅದರಲ್ಲೂ ಕೂಡ ಈ ಮುರುಘಾ ಮಠದ ಶಿವಮೂರ್ತಿಯ ಕಿರಾತಕ ಕೃತ್ಯದ ನಂತರ ಸ್ವಾಮೀಜಿಗಳ ಬಗ್ಗೆ ಅಸಯ್ಯ ಹುಟ್ಟೋದಿಕ್ಕೆ ಶುರುವಾಗಿದೆ ಆದ್ರೆ ಅದರ ನಡುವೆ ಸ್ವಾಮೀಜಿಗಳು ಅಂದ್ರೆ ಹೇಗಿರಬೇಕು ಅನ್ನೋದನ್ನ ಮಾದರಿಯಾಗಿ ತೋರಿಸಿಕೊಟ್ಟಂತವರು ನಮ್ಮೆಲ್ಲರ ಪ್ರೀತಿಯ ಸಿದ್ಧೇಶ್ವರ ಸ್ವಾಮೀಜಿ ಬಂಧುಗಳೇ ನೀವು ಒಂದಷ್ಟು ಜನ ಇವರ ಹೆಸರನ್ನ ಕೇಳಿರಬಹುದು .

ಒಂದಷ್ಟು ಜನ ಕೇಳದೆ ಇರಬಹುದು ಆದರೆ ಉತ್ತರ ಕರ್ನಾಟಕದ ಪ್ರತಿ ಮನೆ ಮನೆಯಲ್ಲೂ ಕೂಡ ದೇವರಂತೆ ಪೂಜಿಸುತ್ತ ಪೂಜಿಸಲ್ಪಡುತ್ತಾರೆ ಸಿದ್ದೇಶ್ವರ ಸ್ವಾಮೀಜಿ ಆದರೆ ಕರ್ನಾಟಕದ ಒಂದಷ್ಟು ಮಂದಿಗೆ ಇವರು ಗೊತ್ತಿಲ್ಲದೇ ಇರಬಹುದು ಅದಕ್ಕೆ ಕಾರಣ ಏನು ಗೊತ್ತಾ ಈ ಮನುಷ್ಯ ಯಾವತ್ತೂ ಕೂಡ ಪ್ರಚಾರವನ್ನು ಬಯಸಿದವರಲ್ಲ ಮಾಧ್ಯಮಗಳ ಮುಂದೆ ಬಂದಂತವರಲ್ಲ ತಾವು ಜೀವಂತ ಇರುವವರೆಗೂ ಕೂಡ ದಿನಪತ್ರಿಕೆಗಳಲ್ಲಿ ಆಗಲಿ ಅಥವಾ ಇನ್ನೆಲ್ಲೇ ಆಗಲಿ ಅವರ ಬಗ್ಗೆ ಒಂದೇ ಒಂದು ಆರ್ಟಿಕಲ್ ಅಥವಾ ಒಂದೇ ಒಂದು ಅಕ್ಷರವನ್ನು ಬರೆಯುವುದಕ್ಕೆ ಬಿಟ್ಟಂತವರಲ್ಲ .

ಯಾವುದೇ ರಾಜಕೀಯ ನಾಯಕರ ಸಹವಾಸವನ್ನು ಮಾಡಿದಂತವರಲ್ಲ ರಾಜಕೀಯ ನಾಯಕರಿಗೆ ಬಕೆಟ್ ಹಿಡಿದು ಜೈಕಾರವನ್ನು ಹಾಕಿದಂತವರಲ್ಲ ಮಠದ ಆಸ್ತಿ ಪಾಸ್ತಿ ಜಾಸ್ತಿ ಮಾಡಿಸುವಂತಹ ಪ್ರಯತ್ನವನ್ನು ಪಟ್ಟ ಸರ್ಕಾರದ ಮುಂದೆ ಕೈ ಒಡ್ಡಿದಂತವರಲ್ಲ ಸುಖ ಸುಮ್ಮನೆ ಯಾರನ್ನೋ ಹೊಗಳಿದಂತ ಮನುಷ್ಯ ಅಂತೂ ಅಲ್ಲವೇ ಅಲ್ಲ ಈ ಕಾರಣಕ್ಕಾಗಿ ಒಂದಷ್ಟು ಜನರಿಗೆ ಇವರ ಬಗ್ಗೆ ಗೊತ್ತೇ ಇಲ್ಲ ಈಗ ತಿಳಿದುಕೊಳ್ಳೋಕೆ ಶುರು ಮಾಡಿಕೊಂಡಿದ್ದಾರೆ ಹಾಗಾದರೆ ಸಿದ್ದೇಶ್ವರ ಸ್ವಾಮೀಜಿ ಯಾರು ಯಾವ ಕಾರಣಕ್ಕಾಗಿ .

ಅಷ್ಟು ದೊಡ್ಡ ಭಕ್ತಸಾಗರ ಇವರನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದೆ ಅದೆಲ್ಲವನ್ನು ಕೂಡ ವಿಸ್ತಾರವಾಗಿ ಹೇಳುತ್ತಾ ಹೋಗುತ್ತೇನೆ ಕೇಳಿ ಬಂಧುಗಳೇ ಹೆಚ್ಚು ಕಡಿಮೆ ಒಂದು ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಶ್ರೀಗಳು ಯಾವತ್ತೂ ಕೂಡ ಅವರು ಆಸ್ಪತ್ರೆ ಮೆಟ್ಟಿಲು ಹತ್ತುವಂತವರಲ್ಲ ಯಾವತ್ತೂ ಕೂಡ ಇಂಗ್ಲೀಷ್ medicine ಅಂತದ್ದು ಯಾವುದನ್ನು ಕೂಡ ತೆಗೆದುಕೊಂಡಂತವರಲ್ಲ ಸಣ್ಣ ಪುಟ್ಟ ಸಮಸ್ಯೆಯಾದರೆ ಆಯುರ್ವೇದ ಚಿಕಿತ್ಸೆಯನ್ನ ಮಾತ್ರ ತೆಗೆದುಕೊಳ್ಳುತ್ತಿದ್ದರು ಈ ನಾಲ್ಕೈದು ದಿನಗಳ ಕಾಲ ಆರೋಗ್ಯದಲ್ಲಿ ಏರು ಪೇರು ಆದಾಗ ಅವರಿಗೆ ಮಠದಲ್ಲೆ ಚಿಕಿತ್ಸೆಯನ್ನ ನೀಡುವಂತ ವ್ಯವಸ್ಥೆಯನ್ನ ಮಾಡಲಾಯಿತು .

ಅದಾದ ನಂತರ ಯಾವಾಗ ಅರೋಗ್ಯ ಸಮಸ್ಯೆ ಇನ್ನಷ್ಟು ಜಾಸ್ತಿ ಆಯ್ತೋ ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲಿಸುವಂತ ಪ್ರಯತ್ನವನ್ನ ಮಾಡಲಾಯಿತು ಅಲ್ಲಿಗೆ ಹೋದಂತ ಜನ ಪ್ರತಿನಿಧಿಗಳು ಆಗಿರಬಹುದು ಅಥವಾ ಭಕ್ತರು ಆಗಿರಬಹುದು ಎಲ್ಲರು ಕೂಡ ಅವರ ಮನ ಕೆಲಸವನ್ನ ಮಾಡಿದ್ರು ದಯವಿಟ್ಟು ನಿಮ್ಮನ್ನ ಆಸ್ಪತ್ರೆಗೆ ಸೇರಿಸಬೇಕು ಅವಕಾಶವನ್ನ ಮಾಡಿ ಕೊಡಿ ಅಂತ ಆದ್ರೆ ಸಿದ್ದೇಶ್ವರ ಸ್ವಾಮೀಜಿ ಏನ್ ಹೇಳ್ತಾರೆ ಗೊತ್ತ ಸಹಜವಾಗಿ ಹೋಗುವಂತ ಉಸಿರನ್ನ ಯಾರು ಕೂಡ ತಡಿಬೇಡಿ ಆ ಉಸಿರು ಹೋಗುತ್ತೆ ಅಂತಾದ್ರೂ ಹೋಗ್ಲಿ ತುಂಬಾ forcefully ಆ ಉಸಿರನ್ನ ಹಿಡಿದಿಡುವಂತ ಕೆಲಸವನ್ನ ಮಾಡಬಾರದು.

ನಾನಂತೂ ಆಸ್ಪತ್ರೆಗೆ ಬರೋದಿಲ್ಲ ಮಠದಲ್ಲೆ ಏನೇನ್ ವ್ಯವಸ್ಥೆಯನ್ನ ಮಾಡ್ತೀರಿ ಆ ಎಲ್ಲ ಬೇಸಿಕ್ ವ್ಯವಸ್ಥೆಯನ್ನ ಮಾಡಿ ಹೆಚ್ಚಿನ ಟ್ರೀಟ್ಮೆಂಟನ್ನ ಕೊಡ್ಲೆ ಬೇಡಿ ಅಂತ ಹೇಳಿ ನಿರಾಕರಿಸ್ತಾರೆ ಅಂತಿಮವಾಗಿ ಸಿದ್ದೇಶ್ವರ ಸ್ವಾಮೀಜಿಯನ್ನ ನಿನ್ನೆ ಸಂಜೆ ಆರು ಐದಕ್ಕೆ ಕಳೆದುಕೊಳ್ಳುವಂತ ಪರಿಸ್ಥಿತಿ ಎದುರಾಗುತ್ತೆ ಇವತ್ತು ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಅಂತಿಮ ದರ್ಶನವನ್ನ ಪಡೀತಾಯಿದ್ದರೆ ಹೆಚ್ಚು ಕಡಿಮೆ ಇಪ್ಪತ್ತು ಲಕ್ಷ ಸೇರುವಂತ ನಿರೀಕ್ಷೆಯನ್ನ ಇಟ್ಟುಕೊಳ್ಳಲಾಗಿದೆ ಅಂದರೆ ಲೆಕ್ಕ ಹಾಕಿ ಯಾವ ರೀತಿಯಾಗಿ ಪ್ರಭಾವವನ್ನ ಬೀರಿದ್ರು ಯಾವ ಪರಿಯಾಗಿ ಭಕ್ತರನ್ನ ಸೂಜಿ ಕಲ್ಲಿನಂತೆ ಸೆಳೆದಿದ್ದರು.

ಅಂತ ಹೇಳಿ ಅವರ ಬಗ್ಗೆ ಒಂದಷ್ಟು ವಿವರವನ್ನ ಹೇಳ್ತ ಹೋಗ್ತೀನಿ ಕೇಳಿ ಅವರ ಬಗ್ಗೆ ಇರುವಂತಹ ಭಕ್ತಿ ಅಭಿಮಾನ ಎಲ್ಲವೂ ಕೂಡ ನಿಮ್ಮಲ್ಲಿ ದುಪ್ಪಟ್ಟು ಆಗ್ತಾ ಹೋಗುತ್ತೆ ಸಾವಿರದ ಒಂಬೈನೂರ ನಲವತ್ತರ ವಿಜಯಪುರ ತಿಕೋಟಾ ತಾಲೂಕಿನ ಬಿಜ್ಜರಗಿಯಲ್ಲಿ ಜನಿಸುತ್ತಾರೆ ಆರಂಭದ ಹೆಸರು ಸಿದ್ದಗುಂಡ ಅಂತ ಹೇಳಿ ಒಂದು ಬಡ ಕೃಷಿಕ ಕುಟುಂಬದಲ್ಲಿ ಅವರು ಜನಿಸಿದಂತವರು ಆರಂಭದಿಂದಲೇ ಅಂದರೆ ಬಾಲ್ಯದಿಂದಲೇ ಆಧ್ಯಾತ್ಮದ ಸೆಳೆತ ವಿಪರೀತವಾಗಿ ಇವರಿಗೆ ಇತ್ತಂತೆ ತುಂಬಾ ಸೌಮ್ಯ ಸ್ವಭಾವವನ್ನ ಬೆಳೆಸಿಕೊಳ್ಳುತ್ತಾ,

ಬಂದಂತವರು ಆ ಸಂದರ್ಭದಲ್ಲಿ ಅವರಿಗೆ ಈ ವಿಜಯಪುರದ ಜ್ಞಾನ ಯೋಗಾಶ್ರಮದ ಮಲ್ಲಿಕಾರ್ಜುನ ಗುರುಗಳ ಸಾಂಗತ್ಯ ಸಿಗುತ್ತೆ ಹೀಗಾಗಿ ಅವರ ಜೊತೆಗೆ ಓಡಾಡುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ ಈ ಕಾರಣಕ್ಕಾಗಿ ಅವರಿಗೆ ಆದ್ಯಾತ್ಮದ ಸೆಳೆತ ಇನ್ನಷ್ಟು ಜಾಸ್ತಿ ಆಗ್ತಾ ಹೋಗುತ್ತೆ ಮಾಲಿಕಾರ್ಜುನ್ ಗುರುಗಳ ಜೊತೆಗೆ ಇದ್ಕೊಂಡೆ ಮತ್ತೊಂದು ಕಡೆಯಿಂದ ತಮ್ಮ ಎಜುಕೇಶನ್ ಅನ್ನು ಕೂಡ ಮುಂದುವರೆಸುತ್ತಾರೆ ಅಂತಿಮವಾಗಿ ತತ್ವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಪಡೀತಾರೆ .

ಅಂತಿಮವಾಗಿ ಜ್ಞಾನ ಯೋಗಾಶ್ರಮದ ಮಲ್ಲಿಕಾರ್ಜುನ ಗುರುಗಳು ಇವರನ್ನ ಶಿಷ್ಯನಾಗಿ ಸ್ವೀಕರಿಸ್ತಾರೆ ಅದಾದ ನಂತರ ಅದೇ ಜ್ಞಾನ ಯೋಗಾಶ್ರಮದ ಅಧ್ಯಕ್ಷರಾಗಿ ಸಿದ್ದೇಶ್ವರ ಸ್ವಾಮೀಜಿಗಳು ಅಧಿಕಾರವನ್ನ ವಹಿಸಿಕೊಳ್ತಾರೆ ಅದಾದ ನಂತರ ಸಿದ್ದೇಶ್ವರ ಸ್ವಾಮೀಜಿಗಳು ಇನ್ನಷ್ಟು ಪ್ರಖ್ಯಾತಿಯನ್ನ ಪಡೆಯೋದಕ್ಕೆ ಶುರು ಮಾಡ್ತಾರೆ ಪ್ರಮುಖವಾಗಿ ಮಾಡ್ತಾ ಇದ್ದರು ಅಂದ್ರೆ ಈ ಕರ್ನಾಟಕ ಜೊತೆಗೆ ಮಹಾರಾಷ್ಟ್ರದ ಒಂದೊತ್ತು ಒಂದಷ್ಟು ಭಾಗಗಳಿಗೆ ಅಂದ್ರೆ ಹಳ್ಳಿ ಹಳ್ಳಿಗಳಿಗೆ ತೆರಳಿ ಅಲ್ಲೆಲ್ಲ ಕಡೆಗಳಲ್ಲೂ ಕೂಡ ಪ್ರವಚನ ಮಾಡುವಂತ ಕೆಲಸವನ್ನ ಮಾಡ್ತಾ ಇದ್ರೂ ಇವರಿಗೆ ಆಧ್ಯಾತ್ಮದ ಬಗ್ಗೆ ಆಳವಾದಂತ ಅಧ್ಯಯನ ಇತ್ತು ಮಹಾತ್ಮಾ ಗಾಂಧೀಜಿ ನೆಲ್ಸನ್ ಮಂಡೇಲಾ ಬುದ್ಧ ಬಸವಣ್ಣ ವಿವೇಕಾನಂದ ಇವರೆಲ್ಲರ ಬಗ್ಗೆ ವಿಪರೀತವಾಗಿ ಓದ್ಕೊಂಡಿದ್ರು.

ಅದಕ್ಕೆ ಸಂಬಂಧಪಟ್ಟಂತ ಒಂದಷ್ಟು ಪುಸ್ತಕಗಳನ್ನು ಕೂಡ ಬರೆದಿದ್ದರು ಹೀಗಾಗಿ ಇವರೆಲ್ಲರೂ ಏನು ಹೇಳಿದ್ದಾರೆ ಅನ್ನೋದನ್ನ ತುಂಬಾ ಸರಳ ಭಾಷೆಯಲ್ಲಿ ಜನರಿಗೆ ತಲುಪಿಸುವಂತ ಕೆಲಸವನ್ನ ಮಾಡ್ತಾಯಿದ್ರು ಪ್ರಮುಖವಾದ ಬದುಕುವುದು ಹೇಗೆ ಅಂತ ಸಿಂಪಲ್ ಆಗಿ ಜನರಿಗೆ ಅರ್ಥ ಮಾಡಿಸುವುದಕ್ಕೆ ಹೋಗುತಿದ್ದರು ಈ ಕಾರಣಕ್ಕಾಗಿ ಅವರ ಪ್ರಖ್ಯಾತಿ ದಿನೆ ದಿನೆ ಜಾಸ್ತಿ ಆಗುವುದಕ್ಕೆ ಶುರುವಾಗುತ್ತೆ ಸಿದ್ದೇಶ್ವರ ಶ್ರೀಗಳ ಪ್ರವಚನ ಇದೆ ಅಂತ ಆದರೆ ಅಲ್ಲಿ ಲಕ್ಷ ಲಕ್ಷ ಜನ ಸೇರುತ್ತಾ ಇದ್ದರು .

ಬುತ್ತಿ ಎಲ್ಲ ಕಟ್ಟಿಕೊಂಡು ಬರೋರಂತೆ ರಾತ್ರಿ ಪೂರ್ತಿ ಅವರ ಪ್ರವಚನವನ್ನು ಕೇಳಬೇಕು ಅಂತ ಹೇಳಿ ಯಾವುದೇ ದೇವಸ್ಥಾನಗಳಿಗೆ ಹೋಗಲಿ ಇವರ ಪ್ರವಚನ ಯಾವುದೇ ಅಂಗಡಿಗೆ ಹೋಗಲಿ ಇವರ ಪ್ರವಚನ ಕ್ಯಾಸೆಟ್ ಗಳೆಲ್ಲವೂ ಕೂಡ ಈ ಬಿಸಿ ಬಿಸಿ ದೋಸೆ ರೀತಿಯಲ್ಲಿ ಸೇಲ್ ಆಗುತಿತ್ತು ಅಷ್ಟರಮಟ್ಟಿಗೆ ಸಿದ್ದೇಶ್ವರ ಶ್ರೀಗಳ ಪ್ರವಚನ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯೋದಕ್ಕೆ ಶುರು ಮಾಡುತ್ತೆ ಯಾವತ್ತೂ ಕೂಡ ಭಕ್ತರನ್ನ ಯಾಮಾರಿಸುವಂತ ಕೆಲಸವೋ ಅಥವಾ ಧಾರ್ಮಿಕತೆಯ ಹೆಸರಲ್ಲಿ ಅವರ ದಿಕ್ಕು ತಪ್ಪಿಸುವಂತ ಕೆಲಸವೋ ಅಥವಾ ಅವರಲ್ಲಿ ಮೌಢ್ಯವನ್ನ ತುಂಬುವಂತ ಕೆಲಸವೋ ಅದು ಯಾವುದನ್ನೂ ಕೂಡ ಸಿದ್ದೇಶ್ವರ ಸ್ವಾಮೀಜಿಗಳು ಮಾಡಲಿಲ್ಲ .

ಭಕ್ತರ ಕಣ್ಣು ತೆರೆಸುವಂತ ಕೆಲಸವನ್ನ ಮಾಡಿದರು ತಮ್ಮಲ್ಲಿರುವಂತ ಜ್ಞಾನವನ್ನ ಭಕ್ತರಿಗೆ ವರ್ಗಾಯಿಸುವಂತ ಕೆಲಸವನ್ನ ಮಾಡಿದ್ರು ಭಕ್ತರ ಬದುಕನ್ನ ಬದಲಿಸುವಂತ ಕೆಲಸವನ್ನ ಮಾಡಿದರು ಎಷ್ಟೋ ಹಳ್ಳಿಗಳಲ್ಲಿ ಮದ್ಯಪಾನಕ್ಕೆ ದಾಸರಾದಂತವರು ಅಥವಾ ಕಳ್ಳತನ ನಡೀತಿದ್ದಂತ ಒಂದಷ್ಟು ಪ್ರದೇಶ ಗಲಾಟೆ ನಡೀತಿದಂತದ್ದು ಹಳ್ಳಿಗಳು ಅವೆಲ್ಲವೂ ಕೂಡ ಸಿದ್ದೇಶ್ವರ ಸ್ವಾಮೀಜಿಗಳಿಂದ ಕಂಪ್ಲೀಟ ಆಗಿ ಬದಲಾಗಿ ಹೋಯಿತು ಇದು ಸುಖಾಸುಮ್ಮನೆ ಅವರನ್ನ ಹೊಗಳ್ತಾ ಇಲ್ಲ ಭಕ್ತರು ಹೇಳ್ತಾ ಇರುವಂತ ಮಾತಿದು ಇವತ್ತು ಈ ಎಲ್ಲ ವಿಚಾರಗಳನ್ನ ನೆನಪು ಮಾಡಿಕೊಂಡು ಅವರ ಭಕ್ತರು ಕಣ್ಣೀರು ಹಾಕ್ತಾ ಇದ್ದಾರೆ.

ಇದೆಲ್ಲವು ಕೂಡ ಒಂದು ಕಡೆಯಿಂದ ಆದರೆ ಅವರ ಬದುಕು ಸದಾ ಕಾಲ ಮಾದರಿ ಯಾವತ್ತೂ ಕೂಡ ಕಾವಿಯನ್ನ ಧರಿಸಿದಂತವರು ಅಲ್ಲ ಸದಾ ಕಾಲ ಬಿಳಿ ಬಣ್ಣದ ಒಂದು ಅಸ್ತ್ರವನ್ನ ಹಾಕ್ತಾ ಇದ್ದರು ಅದಕ್ಕೆ ಜೇಬು ಕೂಡ ಇರಲಿಲ್ಲ ನಾನು ಯಾವತ್ತೂ ಕೂಡ ಜೇಬನ್ನ ತುಂಬಿಸಿಕೊಳ್ಳೋದಿಲ್ಲ ಅನ್ನುವಂತ ಮನಸ್ಥಿತಿ ಒಂದು ರೀತಿಯಲ್ಲಿ ವೈರಾಗ್ಯ ಮೂರ್ತಿ ತಪ್ಪಾಗಲಿಕ್ಕಿಲ್ಲ ಜನರಿಗೆ ಏನು ಹೇಳ್ತಾಯಿದ್ರೋ ಅದೇ ರೀತಿಯಲ್ಲಿ ಸಿದ್ದೇಶ್ವರ ಸ್ವಾಮೀಜಿಗಳು ಬದುಕಿ ತೋರಿಸ್ತಾಯಿದ್ದರೂ ಅವರ simplicity ಗೆ ಇನ್ನೊಂದಷ್ಟು ವಿಚಾರವನ್ನ ಹೇಳ್ತ ಹೋಗ್ತೀನಿ ,

ಕೇಳಿ ಎಷ್ಟರ ಮಟ್ಟಿಗೆ ಅಂತ ಹೇಳಿ ಎಲ್ಲೂ ಕೂಡ ಜನ ಕೊಡುವಂತ ಹಣ್ಣು ಹಂಪಲು ಅಂತದ್ದನ್ನ ಸ್ವೀಕರಿಸುತ್ತಿರಲಿಲ್ಲ ಅಪ್ಪಿತಪ್ಪಿ ಜನ ಏನಾದ್ರು ದುಡ್ಡು ಗಿಡ್ಡು ಕೊಡೋಕೆ ಬಂದ್ರೆ ಅದು ಯಾವುದನ್ನು ಕೂಡ ಮುಟ್ಟುತ್ತಾ ಇರಲಿಲ್ಲ ಮಠಕ್ಕೆ ಆಸ್ತಿ ಪಾಸ್ತಿಯನ್ನ ಮಾಡೋದಕ್ಕೆ ಹೋದಂತವರು ಅಲ್ಲ ಅಥವಾ ಈ ಹಣದ ವ್ಯಾಮೋಹ ಆಸ್ತಿ ವ್ಯಾಮೋಹ ಯಾವುದನ್ನೂ ಕೂಡ ಹೊಂದಿದಂತ ಸ್ವಾಮೀಜಿ ಅಂತೂ ಅಲ್ವ ಅಲ್ಲ ರಾಜಕೀಯ ನಾಯಕರನ್ನ ತಮ್ಮ್ ಬಳಿಯೂ ಕೂಡ ಸೇರಿಸ್ತಾ ಇರ್ಲಿಲ್ಲ ಯಾವುದೇ ಪಕ್ಷದವರು ಬಂದ್ರು ಕೂಡ ಈ ಸಾಮಾನ್ಯ ಜನ ಯಾವ್ ರೀತಿಯಾಗಿ ಬಂದು ಆಶೀರ್ವಾದವನ್ನ ಪಡಿತಾ ಇದ್ರೂ .

ಅದೇ ರೀತಿಯಾಗಿ ಆಶೀರ್ವಾದವನ್ನ ಮಾಡಿ ಕಳಿಸ್ತಾಯಿದ್ರು ಹೊರತಾಗಿ ಯಾರ ಸಾಂಗತ್ಯವನ್ನು ಕೂಡ ಬಯಸದಂತವರಲ್ಲ ಯಾರಿಗೂ bucket ಹಿಡಿಯೋದಕ್ಕೆ ಹೋದಂತವರಲ್ಲ ಒಂದಷ್ಟು ರಾಜಕೀಯ ನಾಯಕರು ಇವರ ಪ್ರಭಾವಿತಲ್ಲ ಅದನ್ನ ಬಳಸಿಕೊಳ್ಳುವ ಪ್ರಯತ್ನ ಪಟ್ಟರು ಆದರೆ ಅದೆಲ್ಲದರಿಂದಲೂ ಕೂಡ ದೂರ ಉಳಿದಂತವರು ಈ ಕಾರಣಕ್ಕಾಗಿ ಸಿದ್ದೇಶ್ವರ ಸ್ವಾಮೀಜಿ ಅಂದಾಗ ಇಲ್ಲಿಯವರೆಗೂ ಕೂಡ ಒಂದು ಸಣ್ಣ ಕಪ್ಪು ಚುಕ್ಕಿಯು ಕೂಡ ಇಲ್ಲ ಅಷ್ಟರಮಟ್ಟಿಗೆ ಅವರೆಲ್ಲರಿಂದಲೂ ಕೂಡ ಸರಿದಂತವರು ಎಲ್ಲ ವ್ಯಾಮೋಹಗಳಿಂದ ದೂರ ಇದ್ದಂತವರು .

ಈ ಸಿದ್ದೇಶ್ವರ ಸ್ವಾಮೀಜಿಗಳು ಅಷ್ಟು ಮಾತ್ರ ಅಲ್ಲ ದೇಶದ ಅತ್ಯುನ್ನತ ನಾಗರೀಕ ಗೌರವ ಆಗಿರುವಂತ ಪದ್ಮಶ್ರೀ ಪ್ರಶಸ್ತಿ ಬರುತ್ತೆ ಆದರೆ ಆ ಪದ್ಮಶ್ರೀಯನ್ನ ನಯವಾಗಿ ತಿರಸ್ಕರಿಸುತ್ತಾರೆ ಹಾಗಂದ ಮಾತ್ರಕ್ಕೆ ಅಹಂಕಾರದಿಂದಲೋ ಇನ್ನೊಂದು ಯಾವುದೋ ಕಾರಣಕ್ಕಾಗಿ ಅವರು ಆ ಪ್ರಶಸ್ತಿಯನ್ನ ಸ್ವೀಕರಿಸಿದ್ದಲ್ಲ ಅವರು ಸರಳವಾಗಿ ಹೇಳ್ತಾರೆ ನಾನೋಬ್ಬ ಸಾಮಾನ್ಯವಾದಂತ ಮನುಷ್ಯ ನನಗಿಂತ ಸಾಧನೆಯನ್ನ ಮಾಡಿದಂತವರು ಬೇಕಾದಷ್ಟು ಜನ ಇದ್ದಾರೆ ನಾನು ಯಾವುದೇ ಸಾಧನೆಯನ್ನು ಕೂಡ ಮಾಡಿಲ್ಲ ನನ್ನಂತವನಿಗೆ ಈ ಪ್ರಶಸ್ತಿ ಯಾವ ಕಾರಣಕ್ಕಾಗಿ ಅಂತ ಹೇಳಿ ಪತ್ರವನ್ನ ಬರೆದು ಅತ್ಯುನ್ನತ ನಾಗರೀಕ ಗೌರವವನ್ನ ತಿರಸ್ಕರಿಸ್ತಾರೆ .

ಅಂದ್ರೆ ಲೆಕ್ಕ ಹಾಕಿ ಅದೆಷ್ಟು ದೊಡ್ಡತನ ಇತ್ತು ಅದೆಷ್ಟು ಹಿರಿಮೆ ಈ ಮನುಷ್ಯನಿಗೆ ಇತ್ತು ಅಂತ ಹೇಳಿ ಸಾಕಷ್ಟು VV ಗಳು ಗೌರವ ಡಾಕ್ಟರೇಟ್ ಅನ್ನ ಕೊಡೋದಕ್ಕೆ ಮುಂದೆ ಬರ್ತಾರೆ ಆದರೆ ಯಾವುದೇ ಗೌರವ ಡಾಕ್ಟರೇಟ್ ಕೂಡ ಇವರು ಎಂದಿಗು ಕೂಡ ಸ್ವೀಕಾರವನ್ನ ಮಾಡಿದಂತವರಲ್ಲ ಅಷ್ಟು ಮಾತ್ರ ಅಲ್ಲ ಒಮ್ಮೆ ಭಕ್ತರೊಬ್ಬರು ಇವರ ಪ್ರವಚನ ನೋಡಿ ಖುಷಿಯಾಗಿ ಒಂದು ಕೋಟಿಗೂ ಹೆಚ್ಚು ಬೆಲೆ ಬಾಳುವಂತ ಕಾರು ಒಂದನ್ನ ತಂದು ಕೊಡ್ತಾರಂತೆ ಆದರೆ ಆ ಕಾರನ್ನು ಕೂಡ ನಯವಾಗಿ ತಿರಸ್ಕರಿಸುತ್ತ ನನಗೆ ಕಾರ್ ಬೇಡ ಏನು ಕೂಡ ಬೇಡ,

ಇದ್ಯಾವುದನ್ನೂ ಕೂಡ ಬಯಸುವಂತ ವ್ಯಕ್ತಿತ್ವ ಅಥವಾ ಮನುಷ್ಯ ನಾನಂತೂ ಅಲ್ವೇ ಅಲ್ಲ ನಾಲ್ಕು ಜನಕ್ಕೆ ದಾನ ಮಾಡಿ ನಾಲ್ಕು ಜನಕ್ಕೆ ನೀವು ಒಂದಷ್ಟು ಸಹಾಯವನ್ನ ಮಾಡಿ ಆಗ ನನಗೆ ಆತ್ಮ ತೃಪ್ತಿ ಆಗುತ್ತೆ ಎನ್ನುವಂತ ಮಾತನ್ನ ಇವರು ಹೇಳ್ತಾಯಿದ್ದರೂ ಇನ್ನೊಂದು ವಿಚಾರ ಅಂದ್ರೆ ಸರ್ಕಾರದಿಂದ ಒಂದೇ ಒಂದು ರೂಪಾಯಿಯನ್ನು ಕೂಡ ಸ್ವೀಕರಿಸುತ್ತಿರಲಿಲ್ಲ .

ಒಮ್ಮೆ BJP ಸರ್ಕಾರ ಇದ್ದ ಸಂದರ್ಭದಲ್ಲಿ ಇಪ್ಪತೈದು ಲಕ್ಷ ರೂಪಾಯಿ ಮಠಕ್ಕೆ ಅಂತ ಅನುದಾನ ಅಂತ ಕೊಟ್ಟು ಕಳುಹಿಸಿದರಂತೆ ಅದನ್ನ ಹಾಗೆ ವಾಪಾಸ್ ಕಳಿಸಿಕೊಡ್ತಾರೆ ಸಿದ್ದೇಶ್ವರ ಶ್ರೀಗಳು ಬೇಡ ನನಗೆ ಇಂತ ಅನುದಾನ ಇಂತಹ ಹಣ ಹಣ ಯಾವುದನ್ನೂ ಕೂಡ ನಿರೀಕ್ಷೆ ಮಾಡುವಂತವನು ನಾನಲ್ಲ ಭಕ್ತರು ಕೊಡುವಂತ ದವಸ ದಾನ್ಯಗಳಿಂದಲೇ ಈ ಮಠ ನಡೆಯುತ್ತೆ ಎನ್ನುವಂತ ಮಾತನ್ನ ಹೇಳ್ತಾಯಿದ್ದರಂತೆ ಅಷ್ಟು ಮಾತ್ರ ಅಲ್ಲ ಭಕ್ತರು ಯಾರು ಜೋಳವನ್ನ ಕೊಟ್ಟು ಕಳಿಸಿದರೆ ಅಥವಾ ಗೋಧಿಯನ್ನ ಕೊಟ್ಟು ಕಳಿಸಿದರೆ ಅಕ್ಕಿಯನ್ನ ಕೊಟ್ಟು ಕಳಿಸಿದರೆ ಅದೆಲ್ಲವನ್ನು ಕೂಡ ಕಂಪ್ಲೀಟ್ ಲೆಕ್ಕ ಇಡ್ತಿದ್ರಂತೆ,

ಒಂದು ಮೂಟೆ ಅಕ್ಕಿ ಬಂತು ಎರಡು ಮೂಟೆ ಜೋಳ ಬಂತು ಅಂತ ಹೇಳಿ ಅದೆಲ್ಲವನ್ನು ಕೂಡ ಭಕ್ತರ ಮುಂದೆ ಇಡ್ತಾಯಿದ್ದರೂ ಯಾವುದೇ ಲೆಕ್ಕಾಚಾರವನ್ನು ಕೂಡ ಕದ್ದು ಮುಚ್ಚಿ ಮಾಡೋದಾಗಲಿ ಅಥವಾ ಕದ್ದು ಮುಚ್ಚಿ ವ್ಯವಹಾರ ಮಾಡೋದಾಗಲಿ ಅದ್ಯಾವುದಕ್ಕೂ ಕೂಡ ಅವಕಾಶ ಮಾಡಿಕೊಡುತ್ತಿರಲಿಲ್ಲ ಮಠದಲ್ಲಿ ಸಣ್ಣ ಅಂದ್ರೆ ಬೇರೆ ರೀತಿಯಾದಂತ ಒಂದಷ್ಟು ವ್ಯವಹಾರಗಳು ನಡೆಯುವುದಕ್ಕೂ ಕೂಡ ಸಿದ್ದೇಶ್ವರ ಸ್ವಾಮೀಜಿಗಳು ಅವಕಾಶವನ್ನು ಮಾಡಿಕೊಡುತ್ತಿರಲಿಲ್ಲ ತಾನು ಹೇಗೆ ಜನರಿಗೆ ಪ್ರವಚನವನ್ನು ಮಾಡುತ್ತಿದ್ದರು.

ಬದುಕುವುದು ಹೇಗೆ ಅಂತ ಜನರಿಗೆ ಹೇಳುತಿದ್ದರು ಅದೇ ರೀತಿಯಾಗಿ ಕೊನೆಯವರೆಗೂ ಕೂಡ ಬದುಕಿ ತೋರಿಸಿದಂತವರು ಈ ವ್ಯಕ್ತಿ ಬಂಧುಗಳೇ ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಗಳು ಅಂದರೆ ಹೇಗಾಗಿ ಬಿಟ್ಟಿದ್ದಾರೆ ಅಂದರೆ ಓ ಇಂತವರು ಲಿಂಗಾಯತ ಸ್ವಾಮೀಜಿ ಇಂತವರು ಒಕ್ಕಲಿಗ ಸ್ವಾಮೀಜಿ ಇಂತವರು ಇನ್ನೊಂದು ಯಾವುದೋ ಸಮುದಾಯದ ಸ್ವಾಮೀಜಿ ಇಂತವರು ಈ ಜಾತಿಯ ಸ್ವಾಮೀಜಿ ಇಲ್ಲಿಯವರೆಗೆ ಬಂದು ಬಿಟ್ಟ ಆದರೆ ಸಿದ್ದೇಶ್ವರ ಸ್ವಾಮೀಜಿ ಯಾವ ಜಾತಿ, ಯಾವ ಧರ್ಮ ಅಥವಾ ಇನ್ನೊಂದು ಯಾವುದೋ, ಇನ್ನೊಂದು ಯಾವುದೋ ವರ್ಗಕ್ಕೆ, ಅದು ಯಾವುದಕ್ಕೂ ಕೂಡ ಸೇರಿದಂತವರಲ್ಲ ಜಾತಿ, ಧರ್ಮ, ಬೇಧ, ಭಾವ ಇದೆಲ್ಲವನ್ನು ಕೂಡ ಮೀರಿದವರು.

ಅವರ ಪ್ರವಚನ ಅಂದರೆ ಎಲ್ಲ ಜಾತಿಯವರು, ಎಲ್ಲ ಸಮುದಾಯದವರು ಅವರು ಎಲ್ಲರು ಕೂಡ ಬಂದು ಕಿವಿ ಹಾಕುತ್ತಿದ್ದರು. ಇವತ್ತು ಮುಸಲ್ಮಾನ ಸಮುದಾಯದವರು ಕೂಡ ಸ್ವಾಮೀಜಿ, ವಿಧಿವಶರಾಗುತ್ತಿದ್ದ ಹಾಗೆ ಕಣ್ಣೀರು ಹಾಕುತ್ತ ಇದ್ದಾರೆ. ಅವರನ್ನ ನೆನೆಸಿಕೊಂಡು, ಅವರು ದುಃಖವನ್ನು ತಡೆಯುವುದಕ್ಕೆ ಆಗುತ್ತಿಲ್ಲ ಅವರಿಗೆ ಯಾವತ್ತೂ ಕೂಡ ನಾವು ಇನ್ನೊಂದು ಯಾವುದೋ ಸಮುದಾಯದವರು ಇನ್ನೊಂದು ಯಾವುದೋ ಜಾತಿಯವರು ಅಂತ ನೋಡುವಂತವರಲ್ಲ,

ನಮ್ಮನ್ನ ಬಹಳ ಹತ್ತಿರಕ್ಕೆ ಪ್ರೀತಿಯಿಂದ ಸೇರಿಸುತ್ತಿದ್ದರು ನಾವು ಕಳೆದುಕೊಂಡ ದುಃಖಿತರಾಗಿದ್ದೇವೆ ಅಂತ ಹೇಳಿ ಅವರೆಲ್ಲರೂ ಕೂಡ ಕಣ್ಣೀರು ಇಡುತ್ತಿದ್ದಾರೆ ನಾನು ಆರಂಭದಲ್ಲೇ ಹೇಳಿದೆ ಯಾವ ಕಾರಣಕ್ಕಾಗಿ ಇಷ್ಟೆಲ್ಲ ಸಾಧನೆಯನ್ನು ಮಾಡಿದ್ದರು ಕೂಡ ನಾನು ಹೇಳಿದ್ದು ಕೆಲವೇ ಕೆಲವು ವಿಚಾರಗಳು ಮಾತ್ರ ನಾನು ಹೇಳುತ್ತಾ ಹೋದರೆ ಪದಗಳು ಸಾಲುವುದಿಲ್ಲ ಬರೆಯುವುದಕ್ಕೆ ಶುರು ಮಾಡಿದರೆ ಪುಸ್ತಕಗಳು ಸಾಲುವುದಿಲ್ಲ ಮತ್ತೆ ಮತ್ತೆ ಹೇಳುತ್ತೇನೆ ಇದು ಯಾವುದು ಕೂಡ ಹೊಗಳಿಕೆಯ ಮಾತಲ್ಲ ಇದೆಲ್ಲವೂ ಕೂಡ ಅಸಲಿ ವಿಚಾರವೇ ಈ ಕಾರಣಕ್ಕಾಗಿ ಅವರ ಬಗ್ಗೆ ಎಷ್ಟು ಹೇಳಿದ್ರು ಕೂಡ ಸಾಲೋದೆ ಇಲ್ಲ ಹೇಳ್ತ ಹೋದಷ್ಟು ಇನ್ನಷ್ಟು ಹೇಳ್ತ ಹೋಗ್ಬೇಕಾಗುತ್ತೆ.

ಅಷ್ಟರಮಟ್ಟಿಗೆ ವಿಚಾರಧಾರೆಗಳಿದ್ದಾವೆ ಅಷ್ಟರಮಟ್ಟಿಗೆ ಅವರ ಬಗ್ಗೆ ನಾವು ಹೇಳೋದಿಕ್ಕೆ ಸಂಗತಿಗಳಲ್ಲೂ ಕೂಡ ಇದ್ದವೇ ಇವತ್ತು ಭಕ್ತರು ಎಲ್ಲ ವಿಚಾರಗಳನ್ನ ಹೇಳಿಕೊಂಡು ಕಣ್ಣೀರು ಇಡ್ತಾಯಿದ್ದರೆ ಆ ರೀತಿಯಾಗಿ ಬದುಕಿದಂತ ಮನುಷ್ಯ ಅಂದ್ರೆ ಸಿದ್ದೇಶ್ವರ ಸ್ವಾಮೀಜಿ ನಾನು ಆಗಲೇ ಹೇಳೋದಕ್ಕೆ ಹೊರಟೆ ಯಾವ ಕಾರಣಕ್ಕಾಗಿ ಇಷ್ಟೆಲ್ಲ ವಿಚಾರಗಳು ಜನರಿಗೆ ಗೊತ್ತಾಗಲಿಲ್ಲ ಅಂದ್ರೆ ಯಾವತ್ತೂ ಕೂಡ ಮಾಧ್ಯಮಗಳ ಮುಂದೆ ಬಂದಂತವರಲ್ಲ ಅಥವಾ ತನಗೆ ತಾನು ಪ್ರಚಾರವನ್ನ ಬಯಸಿದಂತವರ ಯಾರಾದರೂ ಇವರ ಬಗ್ಗೆ ಎಲ್ಲಾದರೂ ಹೇಳುತ್ತಾ ಇದ್ದರು ಅಂದರೆ ಅದನ್ನು ತಡೆಯುತ್ತಿದ್ದರಂತೆ .

ಅದರಬಗ್ಗೆ ಹೇಳಬೇಡಿ ನಾನು ಇದು ಯಾವುದನ್ನು ಕೂಡ ಬಯಸುವಂತವನು ಅಲ್ಲವೇ ಅಲ್ಲ ಅಂತ ಹೇಳಿ ಪೇಪರನಲ್ಲಿ ಒಂದು ಸಣ್ಣ ಆರ್ಟಿಕಲ್ ಬರೆಯುವುದಕ್ಕೆ ಬಿಟ್ಟಿಲ್ಲ ಅಥವಾ ಅವರ ಬಗ್ಗೆ ಪುಸ್ತಕವನ್ನು ಬರೆಯುವುದಕ್ಕೆ ಕೊನೆಯವರೆಗೂ ಕೂಡ ಯಾರಿಗೂ ಅವಕಾಶವನ್ನು ಮಾಡಿಕೊಟ್ಟಂತವರಲ್ಲ ಸಿದ್ದೇಶ್ವರ ಸ್ವಾಮೀಜಿಗಳು ಇತ್ತೀಚಿಗೆ ಹೆಚ್ಚು ಸುದ್ದಿ ಆಗಿದ್ದು ಯಾವಾಗಪ್ಪ ಅಂದರೆ ಸುತ್ತೂರು ಮಠಕ್ಕೆ ನರೇಂದ್ರ ಮೋದಿಯವರು ಬಂದಂತಹ ಸಂದರ್ಭದಲ್ಲಿ ಸಿದ್ದೇಶ್ವರ ಸ್ವಾಮೀಜಿಗೆ ಕೈ ಮುಗಿದು ಹೋಗಿ ಬಿಟ್ಟಿದ್ದರು .

ಅವರು ತಲೆ ಬಾಗಿ ಕೈ ಮುಗಿಯುವಂತಹ ಕೆಲಸವನ್ನು ಮಾಡುತ್ತಾರೆ ಸಿದ್ದೇಶ್ವರ ಸ್ವಾಮೀಜಿಗಳ ಆ ಮಾತನ್ನು ನೋಡಿ ಅವರು ಇರುವಂತ ಶೈಲಿಯನ್ನ ನೋಡಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಅರೆ ಕ್ಷಣ ದಂಗಾಗಿ ಹೋಗ್ತಾರೆ ಈ ರೀತಿಯು ಕೂಡ ಬದುಕೋದಕ್ಕೆ ಸಾಧ್ಯವಾ ಅಂತ ಹೇಳಿ ಅಷ್ಟರಮಟ್ಟಿಗೆ ಒಂದು ರೀತಿಯಲ್ಲಿ ಮಾದರಿಯುತವಾಗಿ ಬದುಕಿದಂತವರು ಅಂದರೆ ಸಿದ್ದೇಶ್ವರ ಸ್ವಾಮೀಜಿ ಐದಾರು ಭಾಷೆಗಳನ್ನ ತುಂಬಾ ನಿರರ್ಗಳವಾಗಿ ಮಾತನಾಡುತ್ತಿದ್ದರು .

ಸಾಕಷ್ಟು ಪುಸ್ತಕಗಳನ್ನ ಕೂಡ ಬರೆದಿದ್ದರೆ ಎಲ್ಲ ಭಾಷೆಗಳಲ್ಲೂ ಕೂಡ ನಿರ್ಗಳವಾಗಿ ಪ್ರವಚನವನ್ನು ಕೂಡ ಮಾಡುತ್ತಿದ್ದರು ಪ್ರತಿಯೊಬ್ಬರಿಗೂ ಕೂಡ ಸಿದ್ದೇಶ್ವರ ಸ್ವಾಮೀಜಿ ಮಾದರಿ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಬಂಧುಗಳೇ ನಿಮಗೆ ಏನು ಅನ್ಸುತ್ತೆ ಸಿದ್ದೇಶ್ವರ ಸ್ವಾಮೀಜಿಗಳ ಬಗ್ಗೆ ಅದನ್ನ ಕಾಮೆಂಟ್ ಮಾಡಿ ತಿಳಿಸಿ ನಿಮ್ಮ ಅಭಿಪ್ರಾಯ ಬಹಳ ಮುಖ್ಯ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.