WhatsApp Logo

ಈ ತರದ ಕಲವೇ ಧಾರಣೆ ಮಾಡಿದ್ದೆ ಆದಲ್ಲಿ ನೀವು ಹೋದ ಕಡೆಯೆಲ್ಲ ನಿಮಗೆ ಅದೃಷ್ಟ ಒದಗಿ ಬರುತ್ತದೆ… ಅಷ್ಟಕ್ಕೂ ಇದು ಏನು ಎಲ್ಲಿ ಸಿಗುತ್ತೆ…

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಈ ಕಲಾವೆ ಗೆ ಸಂಪ್ರದಾಯವಿದೆ ಹೌದು ಕಲವೆ ಅಂದ್ರೆ ಏನು ಗೊತ್ತಾಗ್ತಾ ಇಲ್ವಾ, ಕೆಲವರು ಕೈನಲ್ಲಿ 3 ಬಣ್ಣದ ದಾರವನ್ನು ಕಟ್ಟಿಕೊಂಡಿರುತ್ತಾರೆ ಈ ದಾರವನ್ನು ಕಲಹವೇ ಅಂತಾರೆ ಇದು ನಮ್ಮ ಹಿಂದೂ ಸಂಪ್ರದಾಯದಲ್ಲಿ ವಿಶೇಷತೆ ಅನ್ನೋ ಹೊಂದಿದೆ ಇದರ ಕುರಿತು ನಾವು ಹೆಚ್ಚಿನ ಮಾಹಿತಿ ನೀಡ್ತೇವೆ ಇಂದಿನ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಹೌದು ಈ ದಾರವನ್ನು ಕಟ್ಟಿ ಕೊಳ್ಳು ವುದರಿಂದ ಆಗುವ ಲಾಭವೇನು ಎಂಬುದನ್ನು ಮೊದಲು ಹೇಳಿ ಕೊಡ್ತೇವೆ ಈ ಕಲಾವೆ ಅಂದರೆ 3 ಬಣ್ಣದ ದಾರವನ್ನು ಸುತ್ತಿ ಮಣಿಕಟ್ಟಿನ ಮೇಲೆ ಕಟ್ಟಿಕೊಳ್ಳುವುದು ಎಂದರ್ಥ.

ಇದನ್ನು ಕಟ್ಟಿಕೊಳ್ಳುವುದರಿಂದ ಆಗುವ ಲಾಭಗಳೇನು ಆಗುವ ಪ್ರಯೋಜನಗಳೇನು ಅಂತ ನೀವು ಅಂದುಕೊಳ್ಳಬಹುದು, ಹೌದು ಈ ದಾರವನ್ನು ಕೈಗೆ ಕಟ್ಟಿಕೊಳ್ಳುವುದರಿಂದ ಬಹಳ ವಿಶೇಷವಿದೆ ಹಾಗೂ ಇದನ್ನು ಕೆಲವೊಂದು ವಿಶೇಷ ದಿನಗಳಂದು ಕೂಡ ಕೆಲವರು ಕೈಗೆ ಕಟ್ಟಿಕೊಳ್ಳುತ್ತಾರೆ. ಅದರಲ್ಲಿಯೂ ಆರೋಗ್ಯ ಸಮಸ್ಯೆ ಇರುವವರು ಈ ರೀತಿ ಕೈಗೆ ದಾರವನ್ನು ಕಟ್ಟಿಕೊಳ್ಳುವುದರಿಂದ ಅಂದರೆ ಕಲಾವೆ ಕಟ್ಟಿಕೊಳ್ಳುವುದರಿಂದ ಬಹಳಷ್ಟು ಸಮಸ್ಯೆಗಳು ದೂರ ಆಗುತ್ತದೆ, ಅಷ್ಟೇ ಅಲ್ಲ ಕೆಟ್ಟ ಶಕ್ತಿಯ ಸುಳಿವೂ ನಮ್ಮ ಬಳಿ ಆಗುವುದಿಲ್ಲ ಎಂಬ ನಂಬಿಕೆಯಿದೆ ಆದ್ದರಿಂದ ಎಷ್ಟೋ ಜನರಿಗೆ ತಿಳಿದೇ ಇಲ್ಲ ಈ ಮಾಹಿತಿ ದೇವಸ್ಥಾನಗಳಲ್ಲಿ ಕೈಗೆ ದಾರ ಕಟ್ಟಿಸಿಕೊಂಡು ಬರುತ್ತೀರಾ ಇದರಿಂದ ಸ್ವಲ್ಪ ದಿನಗಳಲ್ಲಿಯೇ ನಿಮ್ಮ ಅನಾರೋಗ್ಯ ಸಮಸ್ಯೆ ಅಂದರೆ ಜ್ವರ ಇರಬಹುದು ತಲೆಸುತ್ತು ಹೊಟ್ಟೆ ನೋವು ಕಾಲು ಸೆಳೆತ ಇಂತಹ ಸಮಸ್ಯೆಗಳು ಬಹಳಷ್ಟು ಬೇಗ ದೂರವಾಗುತ್ತದೆ.

ಇದರ ಅರ್ಥವೇನು ಅಂದರೆ ಇದರಲ್ಲಿರುವಂತಹ ವಿಶೇಷ ಶಕ್ತಿ. ಇದನ್ನ ಕೈಗೆ ಕಟ್ಟಿಕೊಳ್ಳುವುದರಿಂದ ಅಂದರೆ ಮಣಿಕಟ್ಟಿನ ಮೇಲೆ ಕಟ್ಟಿಕೊಳ್ಳುವುದರಿಂದ ಹೃದಯಸಂಬಂಧಿ ಸಮಸ್ಯೆಗಳು ಬರುವುದಿಲ್ಲ ಹಾಗೆ ಸಕ್ಕರೆ ಕಾಯಿಲೆಯಂತಹ ಅನಾರೋಗ್ಯ ಸಮಸ್ಯೆ ಬ್ಲಡ್ ಪ್ರೆಶರ್ ನಂತಹ ಸಮಸ್ಯೆ ಬಾರದಿರಲು ಈ ದಾರವನ್ನು ಕೈಗೆ ಕಟ್ಟಿಕೊಳ್ಳುತ್ತ ಇದ್ದರು. ಹೌದು ಸ್ನೇಹಿತರ ಕೈಗೆ ಈ ದಾರವನ್ನು ಕಟ್ಟಿಕೊಳ್ಳುವುದರಿಂದ ಬಹಳಾನೇ ಪ್ರಯೋಜನವೆಂದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಅದರಲ್ಲಿಯೂ ದೇವಾಲಯಗಳಲ್ಲಿ ಇಂತಹ ದಾರಗಳನ್ನು ನೀವು ನೋಡಿರಬಹುದು ಇದರಿಂದ ನಮಗೆ ಬರುತ್ತಿರುವ ಕೆಟ್ಟ ಆಲೋಚನೆಗಳು ಹಾಗೆ ರಾತ್ರಿ ಸಮಯದಲ್ಲಿ ಬೀಳುವ ಕೆಟ್ಟ ಕನಸುಗಳು ಕೂಡ ಪರಿಹಾರ ಆಗುತ್ತದೆ ಇಂತಹ ದಾರವನ್ನು ಕೈಗೆ ಕಟ್ಟಿಕೊಳ್ಳುವುದರಿಂದ ಮಕ್ಕಳಿಗೂ ಕೂಡ ಈ 3ಬಣ್ಣದ ದಾರವನ್ನು ಸುತ್ತಿ ಕತ್ತಿಗೆ ಹಾಕಿಸುತ್ತಾರೆ.

ಹೌದು ಈ ರೀತಿ ಕತ್ತಿಗೆ 3 ದಾರದ ಸುತ್ತಿನ ತಾಯ್ತ ಅಥವಾ ಈ 3 ಬಣ್ಣದ ದಾರ ಸುತ್ತಿ ಕಟ್ಟಿಕೊಳ್ಳುವುದರಿಂದ ಅದು ಕೈಗೆ ಆಗಲಿ ಅಥವಾ ಕತ್ತಿಗೆ ಆಗಲಿ ಯಾವ ದುಷ್ಟ ಶಕ್ತಿ ಯಾವ ಜನರ ದೃಷ್ಟಿಯೂ ಕೂಡ ನಮ್ಮ ಬಳಿ ಬರುವುದಿಲ್ಲ ನಮ್ಮ ಮೇಲೆ ಪ್ರಭಾವ ಆಗುವುದಿಲ್ಲ ಎಂಬುದರ ಅರ್ಥ ಆಗಿರುತ್ತದೆ. ಆದ್ದರಿಂದಲೇ ಇದೊಂದು ಬಹಳ ಪುರಾತನ ಪದ್ದತಿಯಾಗಿದೆ ಮಕ್ಕಳಲ್ಲಿ ಕಂಡುಬರುವ ಕೆಲವೊಂದು ಸಮಸ್ಯೆಗಳು ಮಕ್ಕಳು ಹಠ ಮಾಡುವುದು ಮಕ್ಕಳು ಕೋಪ ಮಾಡಿಕೊಳ್ಳುವುದು ಹೇಳಿದ ಮಾತನ್ನು ಕೇಳದೆ ಇರುವುದು ಇದ್ದ ಎಲ್ಲಾ ಸಮಸ್ಯೆಗಳು ನರ ದೃಷ್ಟಿ ಪ್ರಭಾವದಿಂದ ಆಗುತ್ತಾ ಇರುತ್ತದೆ ಅಂತಹ ಸಮಯದಲ್ಲಿ ದೇವರ ಗುಡಿಯಿಂದ ಮಂತ್ರಿಸಿ ದಾರವನ್ನ ಕಟ್ಟುತ್ತಿದ್ದರು ಅಂದರೆ ಇದು ನಮ್ಮಲ್ಲಿರುವ ಕೆಟ್ಟಾಲೋಚನೆ ಸೆಳೆಯುವ ಶಕ್ತಿ ಇರುವುದರಿಂದ ಈ 3 ಬಣ್ಣದ ದಾರವನ್ನು ಕೈಗೆ ಕಟ್ಟಿಕೊಳ್ಳಬೇಕು.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಇನ್ನೂ ಹಲವಾರು ಪದ್ಧತಿಗಳಿವೆ ಅದರೆ ಅದನ್ನ ಪಾಲಿಸುವಾಗ ನಮಗೆ ಅದರ ಅರ್ಥ ಗೊತ್ತಿರುವುದಿಲ್ಲ ಅಷ್ಟೆ. ಆದರೆ ಕೆಲವೊಂದು ಪದ್ಧತಿಗಳ ಹಿಂದಿರುವ ಅರ್ಥ ಬಹಳ ಉತ್ತಮವಾಗಿರುತ್ತದೆ ಅದನ್ನ ನಾವು ತಿಳಿದುಕೊಳ್ಳಬೇಕು ಅಷ್ಟೆ. ನಮ್ಮ ಹಿಂದೂ ಸಂಪ್ರದಾಯದ ಹಲವು ಸಂಪ್ರದಾಯ ಪದ್ದತಿಗಳಿಗೆ ವೈಜ್ಞಾನಿಕ ಹಿನ್ನೆಲೆ ಕೂಡ ಇದೆ ಆದ್ದರಿಂದ ಕೆಲವೊಂದು ವಿಚಾರ ಕೆಲವೊಂದು ಪದ್ಧತಿಗಳ ಕುರಿತು ಮಾಹಿತಿ ತಿಳಿಯುವ ಪ್ರಯತ್ನ ಪಡಿ ಮಕ್ಕಳಿಗೂ ಕೂಡ ಕಳಿಸಿಕೊಡಿ ಇದು ಉತ್ತಮ ಅಭ್ಯಾಸವೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment