WhatsApp Logo

ತಾವು ಬದುಕೋದಕ್ಕೆ ಮಾಡಿಕೊಂಡ ಎಲ್ಲ ಆಸ್ತಿ ಮಾರಿ ಬಡವರಿಗೆ ಸಹಾಯ ಮಾಡಿದ ತಾಯಿ-ಮಗ, ಇವಾಗ ಏನು ಮಾಡುತ್ತಿದ್ದಾರೆ ಗೊತ್ತ …

By Sanjay Kumar

Updated on:

ಸೆಲೆಬ್ರಿಟಿಗಳೆಲ್ಲ ದೊಡ್ಡ ದೊಡ್ಡ ಕೆಲಸ ಮಾಡಿ ಪಬ್ಲಿಸಿಟಿ ತೆಗೆದುಕೊಂಡರೆ ಈ ಅಮ್ಮ ಮಗ ಮಾತ್ರ ದೊಡ್ಡ ಕಲಾವಿದರು ಗಳಾದರೂ ತಾವು ಮಾಡಿದ ಕೆಲಸವನ್ನು ತಾವು ಮಾಡಿದ ಸಹಾಯವನ್ನು ಏಲ್ಲಿಯೂ ಸಹ ಹೇಳಿಕೊಳ್ಳುವುದಿಲ್ಲ, ಯಾರದ್ದು ಗೊತ್ತಾ ಇಲ್ಲಿದೆ ನೋಡಿ ಇವರ ಕುರಿತು ಹೆಚ್ಚಿನ ಮಾಹಿತಿ…

ಹೌದು ಈ ಸೆಲೆಬ್ರೆಟಿಗಳು ಅಂದರೆ ಸಾಮಾನ್ಯವಾಗಿ ಬೇರೆಯವರಿಗೆ ಸಹಾಯ ಮಾಡುವ ಮೂಲಕ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡಿ ತಾವು ಪಬ್ಲಿಸಿಟಿ ತೆಗೆದುಕೊಳ್ತಾರೆ. ಇನ್ನೂ ಕೆಲವರು ತಾವು ಮಾಡಿದ ಕೆಲಸ ಯಾರಿಗೂ ತಿಳಿಯಬಾರದು ಅಂತ ಅದನ್ನು ಹಾಗೇ ಸೀಕ್ರೆಟ್ ಮೇಂಟೇನ್ ಮಾಡಿರುತ್ತಾರೆ. ಹೌದಲ್ವಾ ಕೆಲವರ ಗುಣವೇ ಹಾಗಿರುತ್ತೆ ಬಲಗೈ ಮಾಡಿದ್ದು ಎಡಗೈಗೆ ತಿಳಿಯಬಾರದು ಅನ್ನುವ ಗಾದೆಯ ಮಾತಿನಂತೆ ತಾವು ಮಾಡಿದ ಕೆಲಸ ಸಹಾಯ ಧರ್ಮ ಅವೆಲ್ಲವೂ ನಮ್ಮ ಮನಶ್ಶಾಂತಿಗಾಗಿ ಎಂದು ತಿಳಿದು ಕೆಲವರು ತಾವು ಮಾಡಿದ ಕೆಲಸವನ್ನು ಸಹಾಯವನ್ನ ಆಚೆ ಹೇಳಿಕೊಳ್ಳೋದೇ ಇಲ್ಲ.

ಅಂತಹದ್ದೇ ಒಬ್ಬ ಸೆಲೆಬ್ರಿಟಿಗಳು ಇವರು ಸ್ಯಾಂಡಲ್ ವುಡ್ ನ ಖ್ಯಾತ ಕಲಾವಿದರುಗಳು ಮಾಡಿದ್ದು ಕೆಲವೇ ಸಿನಿಮಾಗಳಾದರೂ ಹೆಚ್ಚು ಖ್ಯಾತಿ ಪಡೆದುಕೊಂಡ ಈ ನಟ ಮತ್ಯಾರು ಅಲ್ಲ ವಿನೋದ್ ರಾಜ್ ಹೌದು ಇವರು ನಮ್ಮ ಕನ್ನಡದವರು, ಡ್ಯಾನ್ಸ್ ನಲ್ಲಿ ಅತ್ಯುತ್ತಮರು ಹಾಗೆ ಇವರ ತಾಯಿಯನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುವ ವಿನೋದ್ ರಾಜ್ ತಮ್ಮ ತಾಯಿಗಾಗಿ ಸಿನೆಮಾ ರಂಗದಿಂದ ದೂರ ಉಳಿದರು ಹಾಗೂ ಕಿರುತೆರೆಯಲ್ಲಿ ತೀರ್ಪುಗಾರರಾಗಿ ಬಂದ ಎಲ್ಲಾ ಆಹ್ವಾನಗಳ ರಿಜೆಕ್ಟ್ ಮಾಡಿರುವ ನಟ ವಿನೋದ್ ರಾಜ್ ತಮ್ಮ ತಾಯಿಯ ಜೊತೆ ತಾಯಿಯನ್ನು ಮಗುವಂತೆ ನೋಡಿಕೊಂಡು ತಾಯಿಯನ್ನು ನೋಡಿಕೊಂಡು ತಮ್ಮ ಕಾಲ ಕಳೆಯುತ್ತಿದ್ದಾರೆ ಮತ್ತು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು ತಮ್ಮ ಆಸ್ತಿಯನ್ನೆಲ್ಲಾ ಏನು ಮಾಡಿದ್ದಾರೆ ಗೊತ್ತಾ.

ಹೌದು ಇಂದಿನ ಸ್ವಾರ್ಥ ಸಮಾಜದಲ್ಲಿ ಇಂತಹ ವ್ಯಕ್ತಿಗಳು ಇರ್ತಾರಾ ಅನಿಸುತ್ತೆ ಎಷ್ಟು ದೊಡ್ಡ ಶ್ರೀಮಂತನಾಗಿದ್ದರೇನು ಅವರ ಬಳಿ ಹಣ ಇದ್ದರೇನು ಒಬ್ಬರಿಗೆ ಸಹಾಯಕ್ಕೆ ಬಾರದೆ ಇದ್ದಾಗ ಆದರೆ ಇವರುಗಳು ಆ ರೀತಿ ಅಲ್ಲ ತಮ್ಮ ಆಸ್ತಿಯನ್ನೆಲ್ಲ ಮಾರಿ ಲಾಕ್ ಡೌನ್ ಸಮಯದಲ್ಲಿ, ಹಣ ಇಲ್ಲದೆ ಯಾರು ಕಷ್ಟಪಡುತ್ತಾ ಇದ್ದರೂ ಅಂಥವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ ತಮ್ಮ ಕೈಯಿಂದ ಏನೆಲ್ಲ ಸಹಾಯ ಮಾಡಬಹುದು ಅಷ್ಟು ಸಹಾಯವನ್ನ ಮಾಡಿರುವ ಇವರುಗಳು ಈಗ ಸದ್ಯ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ.

ನಟಿ ಲೀಲಾವತಿ ಅಮ್ಮನವರು ಕನ್ನಡ ಸಿನಿಮಾರಂಗದಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಜನರಿಗೆ ಒಳ್ಳೆಯ ಮನರಂಜನೆ ನೀಡಿದ್ದಾರೆ ಇವರು ನಗಿಸುವುದಕ್ಕೂ ಸೈ ಸೈ ಹಾಗೇ ಮಗ ಕೂಡ ಕೆಲವೊಂದು ಸಿನಿಮಾಗಳಲ್ಲಿ ನಟರಾಗಿ ಅಭಿನಯಿಸಿದ್ದಾರೆ ಹಾಗೂ ಇವರ ಡಾನ್ಸ್ ಗೆ ಫಿದಾ ಆಗದವರೇ ಇಲ್ಲ ನೋಡಿ. ಚಂದನವನದ ಈ ಅಮ್ಮ ಮಗನ ಈ ಬಾಂಧವ್ಯ ಇಂದು ಸಮಾಜದಲ್ಲಿ ಎಲ್ಲರಿಗೂ ಸ್ಫೂರ್ತಿಯಾಗಿದೆ ಲಾಪ್ಟರ್ ವೇಳೆ ಹೆಚ್ಚಿನ ಜನರಿಗೆ ಸಹಾಯ ಮಾಡಲು ಮುಂದೆ ಬಂದ ಈ ಅಮ್ಮ ಮಗ ತಮ್ಮ ಆಸ್ತಿಯನ್ನೇ ಮಾರಿ ಜನರಿಗೆ ಸಹಾಯ ಮಾಡಿದ್ದಾರೆ .

ಆದರೆ ಆ ವಿಚಾರ ಮಾತ್ರ ಎಲ್ಲಿಯೂ ಹೊರಬಂದಿಲ್ಲ ಮೀಡಿಯಾಗಳಲ್ಲಂತೂ ಸುದ್ದಿಯೇ ಆಗಲಿಲ್ಲ. ಆದರೆ ಮಾಡಿದ ಒಳ್ಳೆಯ ಕೆಲಸ ಕೆಲವರಿಗೆ ತಿಳಿದರೆ ಅವರು ಕೂಡ ಸ್ಫೂರ್ತಿಯಿಂದ ಬೇರೆಯವರಿಗೆ ಸಹಾಯ ಮಾಡಬಹುದು ಅಲ್ವಾ ಹೌದು ಮನುಷ್ಯನೆಂದ ಮೇಲೆ ಈ ಜನ್ಮ ಸಿಕ್ಕಿದೆ ಎಂದ ಮೇಲೆ ಕೆಲವರಿಗೆ ಸಹಾಯ ಮಾಡಿ ಆಗ ಹುಟ್ಟಿದ್ದಕ್ಕೂ ಸಾರ್ಥಕ ಅನಿಸಬಹುದು ಅಲ್ವಾ, ಎಲ್ಲರ ಧರ್ಮ ಇದೇ ಆಗಿದೆ ಧನ್ಯವಾದ…

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment