WhatsApp Logo

ದಿನ ಒಂದೊಂದೇ ಈ ಎಲೆಯ ತಿನ್ನುತ್ತಾ ಬಂದ್ರೆ ದಮ್ಮು , ಅಸ್ತಮಾ , ಕಿಡ್ನಿಯಲ್ಲಿ ಕಲ್ಲು , ಹಾಗು ಹೊಟ್ಟೆ ಉಬ್ಬರ ಕೂಡ ಬರೋದೇ ಇಲ್ಲ…

By Sanjay Kumar

Updated on:

ಈ ಎಲೆಗಳ ಪ್ರಯೋಜನಗಳು ಮಾತ್ರ ಅತ್ಯದ್ಭುತ ಇದನ್ನು ನಾಯಿ ಪತ್ರೆ ನೀರು ಸೊಪ್ಪು ಅಂಥ ಎಲ್ಲ ನಾನಾ ಹೆಸರುಗಳಿಂದ ಜನರು ಕರೆಯುತ್ತಾರೆ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಹೆಸರುಗಳಿಂದ ಗುರುತಿಸುವ ಈ ಎಲೆಗಳನ್ನು ನಮ್ಮ ಲೋಕಲ್ ಭಾಷೆಯಲ್ಲಿ “ಕಾಡು ಬಸಳೆ” ಅಂತ ಕರೆಯುತ್ತಾರೆ.

ಹೌದು ಸಾಮಾನ್ಯವಾಗಿ ಬಸಳೆ ಸೊಪ್ಪನ್ನು ಕೇಳಿದ್ದೇವೆ ಹಾಗೂ ಬಸಳೆ ಸೊಪ್ಪಿನ ಅತ್ಯದ್ಭುತ ಪ್ರಯೋಜನಗಳನ್ನು ಕೂಡ ನಾವು ತಿಳಿದುಕೊಂಡಿದ್ದೇವೆ ಮತ್ತು ಅದರ ರುಚಿಯನ್ನು ಸಹ ಸವಿದಿದ್ದೇವೆ.ಅದರ ಆರೋಗ್ಯಕರ ಪ್ರಯೋಜನಗಳನ್ನು ಕೂಡ ಪಡೆದುಕೊಂಡಿದ್ದೇವೆ, ಮುಖ್ಯವಾಗಿ ಈ ಬಸಳೆಸೊಪ್ಪು ದೇಹದ ಉಷ್ಣಾಂಶವನ್ನು ನಿಯಂತ್ರಣಕ್ಕೆ ತರಲು ಸಹಕಾರಿಯಾಗಿರುತ್ತೆ ಆದ್ರೆ ಈ ಕಾಡು ಬಸಳೆ ಈ ಸೊಪ್ಪಿಗಿಂತ ವಿಭಿನ್ನ, ಇದು ಒಗರು ಮತ್ತು ಹುಳಿ ಮಿಶ್ರಿತ ರುಚಿಯನ್ನು ಕೊಡುತ್ತೆ.

ಇವತ್ತಿನ ಮಾಹಿತಿ ಅಲ್ಲಿ ಈ ಕಾಡು ಬಸಳೆಯ ಕುರಿತು ಮಾತನಾಡುತ್ತಿದ್ದೇವೆ, ಇದು ಎಲ್ಲ ಪ್ರಾಂತ್ಯದಲ್ಲಿಯೂ ಬೆಳೆಯುವ ಸೊಪ್ಪು ಆಗಿದೆ. ನಿಮ್ಮ ಮನೆಯಲ್ಲಿಯೂ ಕೂಡ ಬೇಕಾದರೆ ನೀವು ಬೆಳಸಿಕೊಳ್ಳಬಹುದು. ಇದರ ಅತ್ಯದ್ಭುತ ಪ್ರಯೋಜನಗಳನ್ನು ಯಾವಾಗ ಬೇಕಾದರೂ ಆವಾಗ ಪಡೆದುಕೊಳ್ಳಬಹುದು.ಈ ಮೊದಲೇ ಹೇಳಿದಂತೆ ಒಗರು ಮಿಶ್ರಿತ ಹುಳಿ ರುಚಿಯನ್ನು ಹೊಂದಿರುವ ಕಾಡು ಬಸಳೆ ಅತ್ಯದ್ಭುತ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ, ತನ್ನಲ್ಲಿ ಉತ್ತಮವಾದ ವಿಟಮಿನ್ ಖನಿಜಾಂಶಗಳನ್ನೂ ಹೊಂದಿದೆ ಈ ಸೊಪ್ಪು.

ಅಧಿಕವಾದ ವಿಟಮಿನ್ ಸಿ ಜೀವಸತ್ವವನ್ನು ಹೊಂದಿರುವ ಕಾಡು ಬಸಳೆ ಎಂತಹದ್ದೆ ಅನಾರೋಗ್ಯ ಸಮಸ್ಯೆಗೆ ಆಗಲಿ ಬಹಳ ಬೇಗ ಪರಿಹಾರ ಕೊಡುತ್ತೆ, ಮುಖ್ಯವಾಗಿ ಕಾರಣ ಇಲ್ಲದೆ ಕೆಲವೊಮ್ಮೆ ಹೊಟ್ಟೆ ನೋವು ಬರುತ್ತದೆ ಅದಕ್ಕೆ ಯಾವುದೆ ಪರಿಹಾರ ಮಾಡಿದರು ನಿವಾರಣೆಯಾಗುತ್ತಾ ಇರೋದಿಲ್ಲ.ಯಾಕೆಂದರೆ ದೇಹದ ಒಳಗೆ ಏನಾಗಿದೆ ಏನು ಬದಲಾವಣೆ ಆಗಿದೆ ಅಂತ ನಾವು ತಕ್ಷಣವೇ ತಿಳಿದುಕೊಳ್ಳುವುದು ಹೇಗೆ ಅಲ್ವಾ.

ಅದಕ್ಕಾಗಿ ಕೆಲವೊಂದು ಆಹಾರ ಪದಾರ್ಥಗಳು ನಮ್ಮ ಒಳಗಿನ ಆರೋಗ್ಯವನ್ನ ಬಹಳ ಬೇಗ ಸುಧಾರಿಸಿ ಬಿಡುತ್ತದೆ. ಅದಕ್ಕೆ ಈ ಕಾಡು ಬಸಳೆ ಸಹಕಾರಿ ನಿಮ್ಮ ಹೊಟ್ಟೆ ನೋವು ಸಮಸ್ಯೆ ಜೀರ್ಣಕ್ರಿಯೆ ಗೆ ಸಂಬಂಧಿಸಿದ ಸಮಸ್ಯೆ ಆಗಿರಲಿ ಜೊತೆಗೆ ಹೊಟ್ಟೆ ಉರಿ ಎದೆ ಉರಿ ಪೈಲ್ಸ್ ಇಂತಹ ತೊಂದರೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಕಾಡು ಬಸಳೆ ಅತ್ಯದ್ಭುತ ಔಷಧಿ ಗುಣ ಹೊಂದಿರುವ ಗಿಡಮೂಲಿಕೆ ಆಗಿದೆ.

ಇದನ್ನು ನೀವು ಕಷಾಯದ ರೂಪದಲ್ಲಿ ಸೇವಿಸಬಹುದು ಅಥವಾ ನೀವು ಬೇಕಾದರೆ ಈ ಸೊಪ್ಪನ್ನು ಪಲ್ಯ ಸಾರು ಮಾಡಿ ಕೂಡ ಸೇವಿಸಬಹುದು.ಹಾಗಾಗಿ ಕಾಡು ಬಸಳೆ ಅತ್ಯದ್ಭುತ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಇದನ್ನು ನೀವೂ ಕೂಡ ಮನೆ ಹಿತ್ತಲಲ್ಲಿ ಅಥವಾ ಮನೆಯ ಟೆರೇಸ್ ನಲ್ಲಿ ಬೆಳೆಸಿಕೊಂಡು ಈ ಎಲೆಗಳ ಪ್ರಯೋಜನವನ್ನ ಪಡೆದುಕೊಳ್ಳುತ್ತಾ ಬನ್ನಿ.

ನಿಮ್ಮ ಆರೋಗ್ಯವೂ ವೃದ್ಧಿಯಾಗುತ್ತದೆ ಹಾಗೂ ಖರ್ಚೇ ಇಲ್ಲದೆ ನಿಮ್ಮ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ತೊಂದರೆಗಳನ್ನು ಕೂಡ ಈ ಕಾಡು ಬಸಳೆ ಸೊಪ್ಪಿನ ಎಲೆಗಳು ದೂರಮಾಡುತ್ತದೆ.ಕಾಡು ಬಸಳೆಯನ್ನು ನಾಯಿ ಪತ್ರೆ ನೀರು ಸೊಪ್ಪು ಅಂತೆಲ್ಲಾ ಕರಿತಾರೆ ಹಾಗೆ ಈ ಕಾಡು ಬಸಳೆ ಸೊಪ್ಪು ರುಚಿಯಲ್ಲಿ ಸ್ವಲ್ಪ ಹುಳಿ ಆಗಿರುವುದರಿಂದ ಯಾವುದೇ ತೊಂದರೆಯಿಲ್ಲ. ಆದರೆ ಇದನ್ನು ತಿನ್ನಲು ಜನರು ಮುಖ ಮುರಿದರು ಇದರ ಆರೋಗ್ಯಕರ ಲಾಭಗಳ ದೃಷ್ಟಿಯಿಂದಾಗಿ ಇದನ್ನು ಸೇವನೆ ಮಾಡಬೇಕಿರುತ್ತದೆ. ಹಾಗಾಗಿ ಮುಖಪ ಮುರಿಯದೆ ಈ ಬಸಳೆ ಸೊಪ್ಪಿನ ಪ್ರಯೋಜನ ಪಡೆದುಕೊಂಡರೆ ಮುಂದೆ ಬರುವ ಸಾಕಷ್ಟು ಅನಾರೋಗ್ಯ ಸಮಸ್ಯೆಯನ್ನು ದೂರ ಮಾಡಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

 

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment