WhatsApp Logo

ಕನ್ನಡದಲ್ಲಿ ಮೂಡಿಬರುತ್ತಿರೋ ಡಾನ್ಸಿಂಗ್ ಚಾಂಪಿಯನ್ ಷೋ ನಲ್ಲಿ ಜೂನಿಯರ್ ಚಿರು ಬಗ್ಗೆ ಅಶ್ವಿನಿ ಹೇಳಿದ್ದೇನು ನೋಡಿ…

By Sanjay Kumar

Updated on:

ಹೌದು ಅಪ್ಪು ಅವರನ್ನು ಕಳೆದುಕೊಂಡು ಇಡೀ ಕರ್ನಾಟಕವೇ ಸ್ತಬ್ಧವಾಗಿತ್ತು ಇದು ದೊಡ್ಮನೆಗೆ ಸೀಮಿತವಾದದ್ದು ಮಾತ್ರವಲ್ಲ ಹೌದು ಸ್ನೇಹಿತರ ಅಪ್ಪು ಅವರು ಇಲ್ಲ ಅನ್ನುವ ನೋವು ದೊಡ್ಮನೆಗೆ ಮಾತ್ರ ಸೀಮಿತವಾಗಿರಲಿಲ್ಲ ಅವರೊಬ್ಬರು ದೊಡ್ಡ ನಟ ಆಗಿದ್ದರೂ ಕೂಡ ಸರಳತೆಗೆ ಹೆಸರಾಗಿದ್ದರು ಸಂತಸಕ್ಕೆ ಮತ್ತೊಂದು ಅರ್ಥವೇ ಅಪ್ಪು ಅವರಾಗಿದ್ದರು. ಹೀಗಿರುವಾಗ ಅಪ್ಪು ಅವರನ್ನು ಕಳೆದುಕೊಂಡು ಎಲ್ಲರೂ ಕೂಡ ಕಣ್ಣೀರಿಟ್ಟಿದ್ದರು ಈಗ ಅವರು ನಮ್ಮ ಜೊತೆ ಇಲ್ಲ. ಹೌದು ಅಪ್ಪು ಅವರು ನೆನಪು ಮಾತ್ರ ಸದಾ ಅವರು ಮಾಡಿದ ಒಳ್ಳೆಯ ಕೆಲಸಗಳಿಂದ ಆದರ್ಶ ವ್ಯಕ್ತಿತ್ವದಿಂದ ಈ ಸಮಾಜದಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ.

ಅಪ್ಪು ಅವರ ಬಗ್ಗೆ ಹೇಳುವುದೇನಿದೆ ಅಲ್ವಾ ಅವರು ಇಲ್ಲ ಅನ್ನುವ ಸಮಯದಲ್ಲಿ ಅವರು ಮಾಡಿದ ಅದೆಷ್ಟೋ ಕೆಲಸಗಳು ಬೆಳಕಿಗೆ ಬಂದಿತ್ತು ಆಗ ಜನರು ಅಪ್ಪು ನಮಗೆ ಹಾಗೆ ಮಾಡಿದ್ರು ಇಷ್ಟು ಸಹಾಯ ಮಾಡಿದ್ರು ಅಂತ ಮೀಡಿಯಾ ಮುಂದೆ ಬಂದು ಧೈರ್ಯವಾಗಿ ಹೇಳಿಕೊಂಡಿದ್ದರು. ಇದನ್ನು ಯಾರೂ ಹೇಳಿಸಿದ್ದಲ್ಲ ಅಪ್ಪು ಅವರು ಮಾಡಿದ ಸಹಾಯವೇನು ಅವರು ಎಲ್ಲಿಯೇ ಹೋಗುವಾಗಲೂ ತಮ್ಮ ಜೊತೆಗೆ ತಮ್ಮ ಚೆಕ್ ಬುಕ್ ಹಿಡಿದು ಹೋಗುತ್ತಿದ್ದರಂತೆ ಸಹಾಯ ಮಾಡೋದಕ್ಕೆ ಸದಾ ತಯಾರಿದ್ದ ಅಪ್ಪು ಸಹಾಯ ಮಾಡೋದಕ್ಕೆ ಕಾರಣಗಳನ್ನು ಹುಡುಕುತ್ತಿದ್ದರು ಹೌದು ಸದ್ಯ ಅಪ್ಪು ಅವರು ಇಲ್ಲದ ಸಮಯದಲ್ಲಿ ಅಪ್ಪು ಅವರು ಮಾಡುತ್ತಿದ್ದ ಕೆಲಸಗಳನ್ನು ದೊಡ್ಮನೆ ಕಿರಿ ಸೊಸೆಯಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ನೆರವೇರಿಸುತ್ತಿದ್ದು ಪಿಆರ್ ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ಬಹಳಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ ಅವರಿಗೆಲ್ಲಾ ಸಂಬಳ ವ್ಯವಸ್ಥೆಯನ್ನು ಸರಿಯಾದ ಸಮಯಕ್ಕೆ ಮಾಡುತ್ತಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಬೇಸರವಿಲ್ಲದೆ ತಮ್ಮ ಪತಿಯ ಕೆಲಸಗಳನ್ನ ಮಾಡುತ್ತಿದ್ದಾರೆ ಇದು ನಿಜಕ್ಕೂ ಸಂತಸದ ವಿಚಾರವಾಗಿದೆ.

ಯಾಕೆಂದರೆ ತಮ್ಮ ಪತಿ ಇಲ್ಲದ ಸಮಯದಲ್ಲಿ ತಾವ್ಯಾಕೆ ಎಲ್ಲಾ ಕೆಲಸಗಳನ್ನು ಮುಂದುವರಿಸಬೇಕೆಂದು ಅಶ್ವಿನಿ ಅವರ ಸುಮ್ಮನಾಗಿದ್ದರೆ ಬಹಳಷ್ಟು ಮಂದಿ ಬೀದಿಗೆ ಬರಬೇಕಾಗಿರುತ್ತಿತ್ತು. ಆದರೆ ಅಂತಹ ಯೋಚನೆ ಮಾಡದೆ ಅಶ್ವಿನಿಯವರು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇದೇ ವೇಳೆ ಅಪ್ಪು ಅವರ ರೂಪದ ಟ್ರೋಫಿಯನ್ನು ಖ್ಯಾತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ನವರು ವಿಜೇತರಿಗೆ ಟ್ರೋಫಿ ಯನ್ನು ಕೊಡಲಿದ್ದಾರೆ, ಹಾಗೆ ಈಗಾಗಲೆ ಡ್ಯಾನ್ಸಿಂಗ್ ಫೈನಲ್ಸ್ ಗೆ ಬಂದಿದ್ದು 5 ಜನ ಸ್ಪರ್ಧಿಗಳಲ್ಲಿ ಆ ಟ್ರೋಫಿ ಅನ್ನೂ ಯಾರು ಗೆಲ್ಲಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.

ಹೌದು ವಿಜೇತರು ಯಾರಾಗಲಿದ್ದಾರೆ ಪುನೀತ್ ಅವರ ಟ್ರೋಫಿಯನ್ನು ಯಾರು ತಮ್ಮ ಮನೆಗೆ ತೆಗೆದುಕೊಂಡು ಹೋಗಲಿದ್ದಾರೆ ಎಂಬುದನ್ನು ನೀವು ಕೂಡ ತಿಳಿಯಬೇಕೆಂದರೆ, ಫೈನಲ್ಸ್ ವೀಕ್ಷ ಣೆ ಮಾಡಬೇಕು. ಇದೇ ವೇಳೆ ಫೈನಲ್ಸ್ಗೆ ಅತಿಥಿಗಳಾಗಿ ನಟ ಧ್ರುವ ಸರ್ಜಾ ಮತ್ತು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಆಗಮಿಸಿದ್ದು. ಉತ್ತಮ ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಧ್ರುವ ಸರ್ಜಾ ಅವರು ಎಂಟ್ರಿ ಕೊಟ್ಟರೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ವೇದಿಕೆ ಮೇಲೆ ನಿಂತು ಮಾತನಾಡಿ ಪುನೀತ್ ಅವರ ಬಗ್ಗೆಯೂ ನೆನಪಿಸಿಕೊಳ್ಳುತ್ತಾ ಸ್ಪರ್ಧಿಗಳಿಗೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ. ಇದೇ ವೇಳೆ ಮೇಘನಾ ರಾಜ್ ಅವರು ಕೂಡ ಫೈನಲ್ ಕಾರ್ಯಕ್ರಮಕ್ಕೆ ರಾಯನ್ ಅನ್ನು ಸಹ ಕರೆದುಕೊಂಡು ಬಂದಿದ್ದು, ಅಶ್ವಿನಿ ಪುನೀತ್ ರಾಜಕುಮಾರ್ ರಾಯನ್ ಅನ್ನು ಎತ್ತಿಕೊಂಡು ಮುದ್ದಾಡಿ ಕಂಡ ಥೇಟ್ ಚಿರು ಅವರ ತರಹಾನೇ ಇದೆ ಎಂದು ಮೇಘನಾ ಅವರಿಗೆ ಹೇಳಿದ್ದಾರೆ. ಚಿರು ಮತ್ತು ಅಪ್ಪು ಈಗ ನಮ್ಮ ಜೊತೆ ಇರದೆ ಇರಬಹುದು, ಆದರೆ ಅವರು ಸದಾ ಒಳ್ಳೆಯತನದಿಂದ ಒಳ್ಳೆಯ ಕೆಲಸಗಳಿಂದ ನಮ್ಮ ಜೊತೆಯೇ ಇರುತ್ತಾರೆ ಎಂದು ಅಶ್ವಿನಿ ಮೇಘನರಾಜ್ ಅವರಿಗೆ ಹೇಳಿರುವ ಈ ವಿಡಿಯೋ ವೈರಲ್ ಆಗ್ತಿದೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment