WhatsApp Logo

ನಮ್ಮ ಅಪ್ಪು ಪುನೀತ್ ಅವರಿಗೆ ಯಾವ ಊಟ ಮಾಡ್ತಿದ್ರು ಗೊತ್ತ … ಏನೆಂದ್ರೆ ಅವರಿಗೆ ತುಂಬಾ ಇಷ್ಟ ಗೊತ್ತ … ಇದು ಯಾರಿಗೂ ಗೊತ್ತಿಲ್ಲ…

By Sanjay Kumar

Updated on:

ಸ್ನೇಹಿತರೆ ನಮಸ್ತೆ ಇವತ್ತಿನ ದಿನಕ್ಕೂ ಕೂಡ ಅಪ್ಪು ನಮ್ಮ ಜೊತೆ ಇಲ್ಲ ಅನ್ನುವ ನೋವು ದೂರವಾಗಿಲ್ಲ ಅದೆಷ್ಟೋ ಅಭಿಮಾನಿಗಳು ಇನ್ನೂ ಕೂಡ ಊಟ ತಿಂಡಿ ನಿದ್ರೆ ಬಿಟ್ಟು ಅಪ್ಪು ಅವರ ನೆನಪಿನಲ್ಲಿ ಇನ್ನು ಅಪ್ಪು ಅವರ ಬಗ್ಗೆ ಮಾತನಾಡುತ್ತಾ ನಿಜಕ್ಕೂ ಆ ದೇವರು ಎಂಥ ಕೆಲಸ ಮಾಡಿಬಿಟ್ಟೆ ಅಂತ ಅನಿಸುತ್ತದೆ ಆ ದೇವರಿಗೆ ಅಷ್ಟೆಲ್ಲಾ ಹೂಗಳ ರಾಶಿ ಇದ್ದರೂ ಸಹ ಆ ಬೆಟ್ಟದ ಹೂವಿನ ಮೇಲೆ ಆಸೆ ಉಂಟಾಗಿ ಬಿಟ್ಟಿತೇನೋ ಆತ ಯಾರಿಗೂ ಸಹ ಸೂಚನೆ ಸಹ ನೀಡದೆ ನಮ್ಮ ಕರುನಾಡ ರಾಜಕುಮಾರನನ್ನು ಕರೆದುಕೊಂಡು ಬಿಟ್ಟ. ಹೌದು ಅಪ್ಪು ಅವರಿಗೆ ಯಾವ ಅನಾರೋಗ್ಯ ಸಮಸ್ಯೆಯೂ ಇರಲಿಲ್ಲ ಅವರು ಫಿಟ್&ಫೈನ್ ಆಗಿ ಇದ್ದರು ಆದರೂ ಸಹ ಅವರ್ಯಾಕೆ ನಮ್ಮಿಂದ ಎಷ್ಟು ಬೇಗ ದೂರವಾದರೂ ಯಾರಿಗೂ ಕೂಡ ಇವತ್ತಿಗೂ ಕಾರಣ ತಿಳಿಯುತ್ತಿಲ್ಲ.

ಹೌದು ವಿಜ್ಞಾನದಲ್ಲಿ ವೈದ್ಯರು ಏನನ್ನೇ ಹೇಳಿದರೂ ಸಹ ಅದನ್ನ ಅಭಿಮಾನಿಗಳು ನಂಬಲು ಸಾಧ್ಯವಾಗುತ್ತಿಲ್ಲ ಇನ್ನು ಅಪ್ಪು ಅವರ ಇಷ್ಟಾರ್ಥಗಳ ಬಗ್ಗೆ ಹೇಳುವುದಾದರೆ ಇವರಿಗೆ ಸದಾ ಸಮಾಜ ಸೇವೆ ಮಾಡುವುದೇ ಇಷ್ಟವಾದ ಕೆಲಸವಾಗಿರುತ್ತಿತ್ತು ಇನ್ನೂ ಅಪ್ಪು ಅವರಿಗೆ ನಾಟಿ ಕೋಳಿ ಸಾರು ಮುದ್ದೆ ಹಾಗೂ ಬಿರಿಯಾನಿ ಅಂದರೆ ಪಂಚಪ್ರಾಣವಂತೆ. ಇವರು ಬೆಂಗಳೂರಿನ ಅಣ್ಣಮ್ಮ ದೇವಾಲಯದ ಬಳಿ ಇರುವ ನವಯುಗ ಎಂಬ ಹೋಟೆಲ್ ನಲ್ಲಿ ನಾಟಿ ಕೋಳಿ ಸಾರು ಮುದ್ದೆ ಅನ್ನ ತಿನ್ನಲು ಬಹಳ ಇಷ್ಟ ಪಡುತ್ತಿದ್ದರಂತೆ.

ಪುನೀತ್ ಗೆ ನಾಟಿಕೋಳಿ ಸಾರು ಬಲುಪ್ರಿಯ….ಹೌದು ನಟ ಪುನೀತ್ ರಾಜ್ ಕುಮಾರ್ ಅವರು ಅದೆಷ್ಟು ವರ್ಕೌಟ್ ಮಾಡುತ್ತಿದ್ದರು ಅಷ್ಟೇ ಹೊಟ್ಟೆ ತುಂಬ ಊಟ ಮಾಡುತ್ತಿದ್ದರು ಇನ್ನು ಸದಾ ಎಲ್ಲರಿಗೂ ಹೇಳ್ತಾ ಇದ್ದದ್ದು ಏನು ಅಂದರೆ ಖುಷಿಯಿಂದ ಹೊಟ್ಟೆ ತುಂಬ ಊಟ ಮಾಡಿ ಅಂತ ಅದೇ ರೀತಿ ಪುನೀತ್ ಅವರು ಸಹ ಎಷ್ಟು ವರ್ಕೌಟ್ ಮಾಡಿದರೂ ಸಹ ಕೆಲವೊಂದು ಬಾರಿ ಊಟದಲ್ಲಿ ಡಯಟ್ ಮಾಡುತ್ತಿದ್ದರು ಇವರಿಗೆ ನಾಟಿ ಕೋಳಿ ಸಾರು ಮುದ್ದೆ ಹಾಗೂ ಬಿರಿಯಾನಿ ಅಂದರೆ ಬಹಳ ಖುಷಿ ಇರುತ್ತಿತ್ತಂತೆ.

ಇವರು ನವಯುಗ ಹೋಟೆಲ್ ಎಂದ ನಾಟಿ ಕೋಳಿ ಸಾರು ಮುದ್ದೆ ಮತ್ತು ಬಿರಿಯಾನಿ ಅನ್ನೋ ತರಿಸಿಕೊಳ್ಳುತ್ತಿದ್ದು ತಮ್ಮ ಜೊತೆ ಇದ್ದವರಿಗೂ ಸಹ ಹೊಟ್ಟೆ ತುಂಬ ಊಟ ಮಾಡಿಸುತ್ತಿದ್ದರು ಇನ್ನೂ ಅವರ ಮನೆಯಲ್ಲಿ ಬಹುತೇಕ ಎಲ್ಲರು ಸಹ ಈ ಹೋಟೆಲ್ ಊಟವನ್ನ ಇಷ್ಟಪಡುತ್ತಾ ಇದ್ದರು.ಅಪ್ಪುಗೆ ಸೈಕ್ಲಿಂಗ್ ಗೆ ಫೇವರಿಟ್ ಹಾಬಿ ಅಷ್ಟೆ ಅಲ್ಲ ಇಷ್ಟವಾದ ಎಕ್ಸಸೈಸ್ …..ಹೌದು ಅಪ್ಪು ಅವರು ತಮ್ಮ ಬಿಡುವಿನ ಸಮಯದಲ್ಲಿ ಮತ್ತು ಬೆಳಗಿನ ಸಮಯದಲ್ಲಿ ಸೈಕ್ಲಿಂಗ್ ಹೋಗುತ್ತಿದ್ದರು ಹಾಗೂ ಇವರು ಚಿಕ್ಕಬಳ್ಳಾಪುರ ಸಮೀಪದಲ್ಲಿರುವ ನಂದಿಬೆಟ್ಟಕ್ಕೆ ಹಾಗೂ ರಾಷ್ಟ್ರೀಯ ಉದ್ಯಾನವನ ಬನ್ನೇರುಘಟ್ಟಕ್ಕೆ ಆಗಾಗ ಸೈಕ್ಲಿಂಗ್ ಹೋಗುತ್ತಾ ಇದ್ದರು ಇದರಿಂದ ದೇಹಪೂರ್ತಿ ಬೆವರುತ್ತಿದ್ದ ಇವರು ಇದೂ ಕೂಡ ಬೆಸ್ಟ್ ಎಕ್ಸಸೈಸ್ ಎಂದು ಭಾವಿಸಿದ್ದರೋ ಇವರಿಗೆ ಸೈಕ್ಲಿಂಗ್ ಮಾಡುವುದು ಅಂದರೆ ಬಹಳ ಇಷ್ಟ ಇರುತ್ತಿತ್ತು ಎಂದು ಇವರ ಜೊತೆ ಸದಾ ಇರುತ್ತಿದ್ದ ಕೃಷ್ಣಮೂರ್ತಿ ಅವರು ಹೇಳಿಕೊಂಡಿದ್ದಾರೆ.

ಹೌದು ಇವತ್ತು ಕನ್ನಡ ಸಿನಿಮಾ ರಂಗಕ್ಕೆ ಮಾತ್ರ ನಷ್ಟ ಉಂಟಾಗಿಲ್ಲ ಪುನೀತ್ ಅವರ ಕುಟುಂಬದವರು ಮಾತ್ರ ನೋವಿನಲ್ಲಿ ಇರುವುದಿಲ್ಲ ಇಡೀ ಕರ್ನಾಟಕವೇ ಕರ್ನಾಟಕ ಜನತೆ ನೋವಿನಲ್ಲಿದ್ದಾರೆ ಅದೆಷ್ಟೋ ಮಂದಿ ಅಪ್ಪು ಇನ್ನಿಲ್ಲ ಎಂಬ ವಿಚಾರ ಕೇಳಿಯೇ ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದಾರೆ ಇನ್ನು ಹಲವು ಕಂದಮ್ಮಗಳು ಪುನೀತ್ ಅಂಕಲ್ ಬೇಕು ಪುನೀತ್ ಮಾಮಾ ಬೇಕು ಎಂದು ಹಟ ಹಿಡಿದಿವೆ. ಇವರೆಲ್ಲರ ಗೋಳನ್ನು ನೋಡಲಾರದೆ ಆ ದೇವರು ಮತ್ತೆ ನಮ್ಮ ಪುನೀತ್ ಸರ್ ಅವರನ್ನ ಕಳುಹಿಸಿ ಬಿಡಬಾರದು ಅನ್ನೋ ಆಸೆ ನಮ್ಮಲ್ಲಿ ಇನ್ನೂ ಕೂಡ ಇದೆ. ನಮ್ಮ ಕರುನಾಡ ರಾಜಕುಮಾರ ನಮ್ಮ ಪುನೀತ್ ರಾಜ್ ಕುಮಾರ್ ಅವರು ಸದಾ ನಮ್ಮ ಮನಸ್ಸಿನಲ್ಲಿ ಇರುತ್ತಾರೆ ಅಪ್ಪು ಅವರು ಅಮರರಾಗಿರುತ್ತಾರೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment