WhatsApp Logo

ಶೇಟುಗಳು ಯಾವಾಗಲು ಶ್ರೀಮಂತರಾಗಿರಲು ಕಾರಣ ಅವರ ಮನೆಯಲ್ಲಿ ಇರುವಂತಹ ಈ ಒಂದು ವಸ್ತುವಂತೆ… ಅಷ್ಟಕ್ಕೂ ಆ ವಸ್ತು ಯಾವುದು… ನೀವು ಕೂಡ ಆ ಶಕ್ತಿಯುತವಾದ ವಸ್ತುವನ್ನ ಇಟ್ಟುಕೊಂಡು ಶ್ರೀಮಂತರಾಗಿ…

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೆ ವ್ಯಾಪಾರ ವಹಿವಾಟು ಮಾಡಬೇಕು ಅನ್ನುವುದು ಹಲವರ ಕನಸಾಗಿರುತ್ತದೆ ಹೌದು ತಾವು ಮಾಡುವ ಬಿಸಿನೆಸ್ ಆಗಲಿ ತಾವು ಮಾಡುವ ಉದ್ಯಮ ಆಗಿರಲಿ ಅದರಲ್ಲಿ ಹೆಚ್ಚು ಲಾಭ ಪಡೆಯಬೇಕು ಅದಷ್ಟು ಬೇಗ ನಾವು ಶ್ರೀಮಂತರಾಗಬೇಕು ನಾವು ಅಂದುಕೊಂಡಂತೆ ವ್ಯವಹಾರ ನಡೆಯಬೇಕು ಅನ್ನುವುದು ಎಲ್ಲರ ಆಶಯವಾಗಿರುತ್ತದೆ. ಆದರೆ ಯಾವಾಗ ಕೆಲವೊಂದು ಅಡೆತಡೆಗಳು ಎದುರಾಗುತ್ತವೆ ವ್ಯಾಪಾರದ ಮೇಲೆ ಅಥವಾ ನಾವು ಮಾಡುವ ಉದ್ಯಮದ ಮೇಲೆ ನಾವು ತೋರುತ್ತಿರುವ ಆಸಕ್ತಿಯ ಸಂಪೂರ್ಣವಾಗಿ ಕಳೆದುಕೊಂಡು ಬಿಡುತ್ತೇವೆ. ಆದರೆ ಯಾವತ್ತೂ ಈ ತಪ್ಪನ್ನು ಮಾಡದಿರಿ ಒಮ್ಮೆ ನಷ್ಟ ಅನುಭವಿಸಿದರೆ ಏನೂ ತೊಂದರೆಯಿಲ್ಲ ಆದರೆ ಆಸಕ್ತಿಯನ್ನು ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಧೈರ್ಯವಾಗಿ ಮುನ್ನುಗ್ಗಿ ಎಲ್ಲವೂ ಒಳ್ಳೆಯದೇ ಆಗುತ್ತದೆ.

ಹೌದು ಇಂದಿನ ಲೇಖನದಲ್ಲಿ ನಾವು ಹೇಳಲು ಹೊರಟಿರುವುದು ನಿಮ್ಮ ಉದ್ಯಮದಲ್ಲಿ ಉಂಟಾಗುತ್ತಿರುವ ನಷ್ಟವನ್ನು ಹೇಗೆ ಪರಿಹಾರ ಮಾಡಿಕೊಳ್ಳಬಹುದು ಎಂಬುದರ ಕುರಿತು ಮಾಹಿತಿ ನೀಡುತ್ತಿದ್ದೇವೆ ಹೌದು ಈ ಪರಿಹಾರ ನಿಮಗೆ ಸ್ವಲ್ಪ ದುಬಾರಿ ಎನಿಸಬಹುದು ಆದರೆ ಈ ಪರಿಹಾರವನ್ನು ಯಾರು ಪಾಲಿಸುವುದು ಗೊತ್ತಾ ವ್ಯಾಪಾರ ವಹಿವಾಟುವಿನಲ್ಲಿ ಸ್ವಲ್ಪ ಮುಂದೆಯೇ ಇರುವ ಮಾರ್ವಾಡಿಗಳು ಹೌದು ಮಾರ್ವಾಡಿಗಳು ಮಾಡುವ ವ್ಯಾಪಾರ ವನ್ನು ನೋಡಿರ್ತೀರಾ ಅಲ್ವಾ ಅವರು ಗಣಿತದಲ್ಲಿ ಎಷ್ಟು ಮುಂದಿರುತ್ತಾರೆ ಹಾಗೆ ಯಾವುದೇ ಕಾರಣಕ್ಕೂ ತಮ್ಮ ಕಸ್ಟಮರ್ಸ್ ಗಳನ್ನು ಬಿಟ್ಟುಕೊಡುವುದಿಲ್ಲ ಜೊತೆಗೆ ಲಾಭವನ್ನು ಕೂಡ ಮಾಡ್ತಾರೆ ಹಾಗೆ ನಷ್ಟ ಆಗುವ ಹಾಗೆ ಯಾವತ್ತಿಗೂ ವ್ಯಾಪಾರವನ್ನ ಮಾಡುವುದಿಲ್ಲ.

ಹೌದು ಮಾರ್ವಾಡಿಗಳ ಅಂಗಡಿಗೆ ಹೋದಾಗ ನಮಗೆ ಅಲ್ಲಿ ಆಗುವ ಅನುಭವವೇ ಬೇರೆ. ಮಾರ್ವಾಡಿಗಳು ಎಷ್ಟು ಚುರುಕಾಗಿರುತ್ತಾರೋ ಅಂದರೆ ಹೆಚ್ಚು ಬಾರ್ಗೇನ್ ಮಾಡಲು ಬಿಡುವುದಿಲ್ಲ ಹಾಗೆ ಹೆಚ್ಚು ಕ್ಲೋಸ್ ಆಗುವುದಕ್ಕೂ ಕೂಡ ಅವರು ಬಿಡೋದಿಲ್ಲ ಲಾಭ ಆದಾಗಲೇ ಮಾತ್ರ ಅವರು ವಸ್ತುವಿನ ನೀಡುವುದು ನೋಡಿ. ಮಾರ್ವಾಡಿಗಳು ತಮ್ಮ ಮಕ್ಕಳನ್ನು ದೊಡ್ಡ ದೊಡ್ಡ ಕೆಲಸಕ್ಕೆ ಕಳುಹಿಸಬೇಕು ಅಂತೆಲ್ಲಾ ಯೋಚನೆ ಮಾಡುವುದಿಲ್ಲ ಅವರ ಮಕ್ಕಳು ಓದದೆ ಇದ್ದರೂ ಪರವಾಗಿಲ್ಲ ಗಣಿತದಲ್ಲಿ ಹೊಂದಿರಬೇಕು ಅಂತಾನೆ ಆಲೋಚನೆ ಮಾಡುವವರು. ಹೌದು ಗಣಿತವೊಂದು ಅವರಿಗೆ ಚೆನ್ನಾಗಿದ್ದರೆ ಸಾಕು ಅವರು ಆಸಕ್ತಿ ತೋರುವ ವ್ಯಾಪಾರದಲ್ಲಿ ಬಂಡವಾಳವನ್ನು ಹೂಡಿ ಹೇಗೆ ವ್ಯಾಪಾರ ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತಾರೆ ಹಾಗೆ ವ್ಯಾಪಾರ ಮಾಡುವಾಗ ಯಾರ ಮೇಲೆಯೂ ಕರುಣೆ ತೋರಬಾರದು ಅಂತ ಕೂಡ ಮಾರ್ವಾಡಿಗಳು ತಮ್ಮ ಮಕ್ಕಳಿಗೆ ತಿಳಿಸಿ ಕೊಟ್ಟಿರುತ್ತಾರೆ ಅಷ್ಟೇ ಅಲ್ಲ ಈ ರೀತಿ ಕೆಲವೊಂದು ವ್ಯವಹಾರದ ಟೆಕ್ನಿಕ್ ಗಳನ್ನು ತಿಳಿಸಿಕೊಡುವುದರ ಜೊತೆಗೆ ಕೆಲವೊಂದು ಪರಿಹಾರಗಳನ್ನು ಕೂಡ ಮಾಡಿಕೊಂಡಿರುತ್ತಾರೆ ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆದು ಕೊಂಡಿರುತ್ತಾರೆ.

ಹೌದು ಅದರಲ್ಲಿ ಮಾರ್ವಾಡಿಗಳು ಮೊದಲನೆಯದಾಗಿ ಮಾಡುವುದೇನು ಗೊತ್ತಾ ಮಾರ್ವಾಡಿಗಳು ತಮ್ಮ ವ್ಯಾಪಾರದ ಜಾಗದಲ್ಲೇ ಅದರಲ್ಲಿಯೂ ಕ್ಯಾಶ್ ಟೇಬಲ್ ನಲ್ಲಿ ಮಹಾಲಕ್ಷ್ಮಿಯ ಪಾದುಕೆಯನ್ನು ಬೆಳ್ಳಿಯಲ್ಲಿ ಮಾಡಿಸಿ ಇಟ್ಟಿರುತ್ತಾರೆ ಇನ್ನೂ ಕೆಲವರು ಬಂಗಾರದ ಹೊದಿಕೆಯನ್ನು ಕೂಡ ಮಾಡಿಸಿಬಿಟ್ಟಿರುತ್ತಾರೆ ಹಾಗೂ ತಾವು ಪೂಜೆ ಮಾಡುವ ದೇವರ ಕೋಣೆ ಅಂದರೆ ತಮ್ಮ ಮನೆಯ ದೇವರ ಕೋಣೆಯಲ್ಲಿ 21 ಗುಲಗಂಜಿಯನ್ನು ಕೆಂಪು ಬಟ್ಟೆ ಹಾಕಿ ಕಟ್ಟಿ ಅದನ್ನು ದೇವರ ಕೋಣೆಯಲ್ಲಿ ಯಾರೂ ನೋಡದ ಸ್ಥಳದಲ್ಲಿ ಇರಿಸಿರುತ್ತಾರೆ ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮೀದೇವಿ ಅಂಥವರ ಮನೆಯಲ್ಲಿ ಸಂತಸವಾಗಿ ನೆಲೆಸುತ್ತಾಳೆ ನೋಡಿ.

ಹೌದು ಅವರು ಈ ಪರಿಹಾರ ಗಳನ್ನು ಮಾಡಿಕೊಳ್ಳುವುದರಿಂದಲೇ ಆದಷ್ಟು ಬೇಗ ಲಕ್ಷ್ಮಿದೇವಿ ಅನುಗ್ರಹವನ್ನು ಪಡೆದು ಕೊಂಡು ಬಿಡುತ್ತಾರೆ ಅಷ್ಟೇ ಅಲ್ಲ ತಾಯಿಯ ಅನುಗ್ರಹ ಒಂದನ್ನೇ ಅವರು ಕಾಯುವುದಿಲ್ಲ ಕಷ್ಟಪಟ್ಟು ಶ್ರಮ ಪಟ್ಟು ವ್ಯಾಪಾರ ವಹಿವಾಟನ್ನು ಕೂಡ ಮಾಡ್ತಾರೆ. ಹೌದು ಆದ್ದರಿಂದಲೇ ಶೀಟುಗಳು ಅಷ್ಟು ಬೇಗ ವ್ಯಾಪಾರದಲ್ಲಿ ಲಾಭ ಮಾಡುವುದು ಮತ್ತು ವ್ಯಾಪಾರದಲ್ಲಿ ಮುಂದುವರೆಯುವುದು ಅವರು ಬೇರ್ಯಾವ ಕೆಲಸವನ್ನು ಮಾಡಬೇಕು ಅಂತ ಯೋಚಿಸುವುದಿಲ್ಲ ವ್ಯಾಪಾರ ವಹಿವಾಟುವಿನಲ್ಲಿ ಹೆಚ್ಚು ಲಾಭ ಮಾಡ್ತಾರೆ ಅಷ್ಟೇ ಬೇಗ ಶ್ರೀಮಂತನಾಗಿಬಿಡುತ್ತಾನೆ ಲಕ್ಷ್ಮೀಪುತ್ರರಾಗಿ ಇರ್ತಾರೆ ಧನ್ಯವಾದ…

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment