ಅವತ್ತು ದರ್ಶನ್ ಮದುವೆಗೆ ಬಂದಿದ್ದ ಡಾಕ್ಟರ್ ರಾಜಕುಮಾರ್ ಕೊಟ್ಟಿದ್ದ ಗಿಫ್ಟ್ ಏನು ಗೊತ್ತಾ…ಅಸಲಿ ಸತ್ಯ ನೋಡಿ

153

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮದುವೆಗೆ ಅಂದು ರಾಜಣ್ಣ ಅವರು ಕೊಟ್ಟಿದ್ದ ಗಿಫ್ಟ್ ಏನು ಗೊತ್ತಾ… ಅದನ್ನು ಇನ್ನೂ ಉಳಿಸಿಕೊಂಡಿರುವ ಡಿ ಬಾಸ್ ಅಂತಹ ವಿಶೇಷ ಉಡುಗೊರೆ ಏನು ಗೊತ್ತಾ ತಿಳಿಯಲು ಈ ಪುಟವನ್ನು ಸಂಪೂರ್ಣವಾಗಿ ಓದಿ..ಹೌದು ನಟ ದರ್ಶನ್ ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ.

ಹೌದು ಅಂದು ಲೈಟ್ ಮ್ಯಾನ್ ಆಗಿ ಕೆಲಸ ಮಾಡುವ ಮೂಲಕ, ಕೇವಲ 120 ರೂಪಾಯಿಗಳ ಸಂಭಾವನೆ ಪಡೆದುಕೊಳ್ಳುತ್ತಿದ್ದ ದರ್ಶನ್ ಇಂದು ಕೋಟಿಗಟ್ಟಲೆ ಸಂಭಾವನೆ ಪಡೆದುಕೊಳ್ಳುವಷ್ಟು ಯಶಸ್ವಿ ನಾಯಕ ನಟರಾಗಿದ್ದಾರೆ ದರ್ಶನ್ ಹೌದು ಡಿ ಬಾಸ್ ಅಂದ್ರೆ ಇಡೀ ಕರುನಾಡೇ ತಿರುಗಿ ನೋಡುತ್ತ ಅವರ ಸಿನೆಮಾ ಬರ್ತಾ ಇದೆ ಎಂದರೆ ಬಹಳಷ್ಟು ಮಂದಿ ಸಿನಿಮಾ ನೋಡಲು ಕುತೂಹಲದಿಂದ ಕಾಯುತ್ತಿರುತ್ತಾರೆ.

ಅದು ಮೆಜೆಸ್ಟಿಕ್ ನಿಂದ ಇಂದು ಯಜಮಾನ ಸಿನಿಮಾದ ವರೆಗೂ ನಟ ದರ್ಶನ್ ಕಲಾದೇವಿಯ ಸೇವೆ ಮಾಡುತ್ತಾ ಬಂದಿತ್ತು ಇವರ ನಟನೆ ಮೆಚ್ಚಿಕೊಂಡ ಅಭಿಮಾನಿಗಳು ಇವರನ್ನು ಒಬ್ಬೊಬ್ಬರು ಒಂದೊಂದು ಹೆಸರಲ್ಲಿ ಪ್ರೀತಿಯಿಂದ ಕರೆಯುತ್ತಾರೆ. ಇವರಿಗೆ ಮತ್ತೊಂದು ಮುಖವಿದೆ, ಹೌದು ತೆರೆಮುಂದೆ ಬಹಳ ರಫ್&ಟಫ್ ಆಗಿ ಕಾಣುವ ದಚ್ಚು ನಿಜೀವನದಲ್ಲಿ ಕರ್ಣ ಎಂದು ಕರೆಸಿಕೊಂಡಿದ್ದಾರೆ .

ಸಹ ಎಂದು ಬಂದವರಿಗೆ ತಮ್ಮ ಕೈಲಾದ ತಮ್ಮ ಕೈಮೀರಿ ಸಹಾಯ ಮಾಡುವ ದರ್ಶನ್ ಬಹಳಷ್ಟು ಮಂದಿಗೆ ಈಗಾಗಲೇ ಸಹಾಯ ಮಾಡುವ ಮೂಲಕ ಜೀವನ ರೂಪಿಸಿಕೊಟ್ಟಿದ್ದಾರೆ ಹಾಗೆ ಸ್ವಲ್ಪ ದಿನಗಳ ಹಿಂದಷ್ಟೇ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ನಟ ದರ್ಶನ್ ಮತ್ತು ವಿಜಯಲಕ್ಷ್ಮೀ ದಂಪತಿಗಳು ಅಂದು ಈ ಜೋಡಿ ಚೆನ್ನಾಗಿರಲಿ ಎಂದು ಅಭಿಮಾನಿಗಳು ಶುಭಾಶಯಗಳನ್ನ ಹಾರೈಸಿದ್ದರು.

ನಟ ದರ್ಶನ್ ವಿಜಯಲಕ್ಷ್ಮಿ ಅವರನ್ನು ಪ್ರೀತಿಸಿ ಮದುವೆಯಾದರು ಮೇ 19 2003 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಇವರ ಮದುವೆಗೆ ನಟ ರಾಜಕುಮಾರ್ ದಂಪತಿಗಳು ಕೂಡ ಆಗಮಿಸಿದ್ದರು ಅಂದು ದರ್ಶನ್ ಅವರಿಗೆ ರಾಜಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರು ನೀಡಿದ್ದ ವಿಶೇಷ ಉಡುಗೊರೆ ಏನು ಗೊತ್ತಾ ಹೌದು ಬಂಗಾರದ ವಾಚ್ ಅನ್ನು ನವ ಜೋಡಿಗೆ ಉಡುಗೊರೆಯಾಗಿ ನೀಡಿ ಶುಭ ಹಾರೈಸಿದರಂತೆ ಇನ್ನೂ ಕೂಡ ಆ ಉಡುಗೊರೆಯನ್ನು ದರ್ಶನ್ ಅವರು ಜೋಪಾನವಾಗಿ ಇಟ್ಟುಕೊಂಡಿರುವುದಾಗಿ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು.

ಸ್ವಲ್ಪ ವರ್ಷಗಳ ಹಿಂದೆ ನಟ ದರ್ಶನ್ ಮತ್ತು ವಿಜಯಲಕ್ಷ್ಮೀ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದ್ದು ಅಂದು ಅವರ ದಾಂಪತ್ಯ ಜೀವನ ಕುರಿತು ಬಹಳಷ್ಟು ಮಂದಿ ಒಂದೊಂದು ರೀತಿಯಲ್ಲಿ ಮಾತನಾಡಿದ್ದರು ಇವರು ಮದುವೆಯಾದ ಪ್ರಾರಂಭದ ದಿನಗಳಲ್ಲಿ ಅವರ ದಾಂಪತ್ಯ ಜೀವನ ಅಷ್ಟು ಸುಲಭವಾಗಿರಲಿಲ್ಲ ಆದರೆ ಬಳಿಕ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಈಗ ಸುಖವಾಗಿ ಸಂಸಾರ ನಡೆಸುತ್ತಿರುವ ದಂಪತಿಗಳಿಗೆ ವಿನೇಶ್ ಎಂಬ ಮಗನಿದ್ದಾನೆ.

ಈಗಾಗಲೇ ಐರಾವತ ಮತ್ತು ಯಜಮಾನ ಸಿನೆಮಾಗಳಲ್ಲಿ ವಿನೇಶ್ ಕಾಣಿಸಿಕೊಂಡಿದ್ದು ಇವರೂ ಕೂಡ ಅಪ್ಪನಂತೆ, ಹೌದು ದರ್ಶನ್ ಅವರ ಮಗ ಸಹ ಅಪ್ಪನಂತೆ ಸಹ ಎಂದು ಬಂದವರಿಗೆ ಅವರ ಮನ ನೋಯಿಸದೆ ಅವರಿಗೆ ಬೇಕಾದ ಸಹಾಯವನ್ನು ಮಾಡಿದ್ದಾರೆ ಅಷ್ಟೇ ಅಲ್ಲ ಮನೆಗೆ ಬಂದ ಅಭಿಮಾನಿಗಳನ್ನು ಉತ್ತಮ ಮನೆಯ ಅತಿಥಿಗಳಂತೆ ಸತ್ಕರಿಸಿ ಅವರನ್ನು ಚೆನ್ನಾಗಿ ನೋಡಿ ಕಳುಹಿಸುವ ಉದಾರ ಮನೋಭಾವನೆ ವಿನೇಶ್ ಗೆ ಸಹ ಇದೆ.ನಟ ದರ್ಶನ್ ಮತ್ತು ವಿಜಯಲಕ್ಷ್ಮೀ ದಂಪತಿಗಳು ನೆಮ್ಮದಿಯಿಂದ ದಾಂಪತ್ಯ ಜೀವನ ನಡೆಸುತ್ತಿದ್ದು, ಇವರುಗಳಿಗೆ ಮುಂದಿನ ದಿವಸಗಳಲ್ಲಿ ಒಳ್ಳೆಯದಾಗಲಿ ಎಂದು ನಾವು ಕೂಡ ಆಶಿಸೋಣ ಧನ್ಯವಾದ.

WhatsApp Channel Join Now
Telegram Channel Join Now