ಯಾವುದೇ ಮದುವೆಯಾಗಲಿ ಮದುವೆಯಾದ ನಂತರ ಅಂದರೆ ತಾಳಿ ಕಟ್ಟುವ ಸಂದರ್ಭದಲ್ಲಿ ಎಲ್ಲರೂ ಅಕ್ಷತೆಯನ್ನು ವಧು-ವರರ ಮೇಲೆ ಹಾಕುವುದನ್ನು ನಾವು ಸರ್ವೇ ಸಾಮಾನ್ಯವಾಗಿ ನೋಡಿರುತ್ತೇವೆ.ನೀವು ಯಾವಾಗಾದರೂ ಮದುವೆಯಲ್ಲಿ ವಧು ವರರ ಮೇಲೆ ಯಾಕೆ ಅಕ್ಕಿ ಕಾಳನ್ನು ಹಾಕುತ್ತಾರೆ ಏನು ಇದರ ಬಗ್ಗೆ ಆಲೋಚನೆ ಮಾಡಿದ್ದಿರಾ ಅಥವಾ ಎಲ್ಲರೂ ಅಕ್ಷತೆ ಕಾಳನ್ನು ಒಂದು ವಾರದ ಮೇಲೆ ಹಾಕಬಹುದು ಎಂಬುದರ ಬಗ್ಗೆ ನೀವು ಯಾವಾಗಾದರೂ ಆಲೋಚನೆಯನ್ನು ಮಾಡಿದ್ದೀರಾ.ಇವತ್ತು ನಾವು ನಿಮಗೆ ಅಕ್ಷತೆ ಕಾಳನ್ನು ಎಲ್ಲರೂ ಹಾಕಬಹುದು ಹಾಗೆ ಅಕ್ಷತೆ ಅಂದರೆ ಏನು ಎನ್ನುವುದರ ಸಂಪೂರ್ಣವಾದ ವಿಚಾರವನ್ನು ನಾನು ಈ ಲೇಖನದ ಮುಖಾಂತರ ನಿಮಗೆ ಹೇಳಲು ನೋಡಿದ್ದೇನೆ.
ನಿಮಗೆ ಗೊತ್ತಿಲ್ಲದ ಒಂದು ವಿಚಾರ ಏನಪ್ಪಾ ಅಂದರೆ ಕ್ಷಯ ಎಂದರೆ ನಾಶ ಎಂದು ಅರ್ಥ ಅಕ್ಷಯ ಎಂದರೆ ಜ್ಞಾನವನ್ನು ತುಂಬಿಕೊಂಡಿರುವುದು ಎಂದು ಅರ್ಥ. ಅಕ್ಷಯ ಅನ್ನುವುದನ್ನು ಪರಮಾತ್ಮನು ಕೂಡ ಹೋಲಿಸಬಹುದು. ಪರಮಾತ್ಮ ಗೆ ಇರುವಂತಹ ಅಗಾಧ ಜ್ಞಾನವನ್ನು ಅಕ್ಷಯ ಅನ್ನುವ ಪದಕ್ಕೆ ಹೋಲಿಸುತ್ತಾರೆ.ಅದಕ್ಕಾಗಿಯೇ ಅಕ್ಕಿ ಕಾಳನ್ನು ಅಕ್ಷತೆ ಎಂದು ಕರೆಯುತ್ತಾರೆ. ಅಕ್ಷತೆ ಎಂದರೆ ಅಗಾಧ ಜ್ಞಾನವನ್ನು ಹೊಂದಿರುವಂತಹ ನಾಶವೇ ಇಲ್ಲದಿರುವುದು ಎದ್ದು ಅರ್ಥ.ಅಕ್ಷತೆ ಕಾಳನ್ನು ಸರ್ವೇ ಸಾಮಾನ್ಯವಾಗಿ ಎಲ್ಲ ಮದುವೆಯಲ್ಲಿ ಎಲ್ಲರ ಕೈಗೆ ಕೊಟ್ಟು ತಾಳಿ ಕಟ್ಟುವ ಸಂದರ್ಭದಲ್ಲಿ ಹಾಕಿಸಿಕೊಳ್ಳುತ್ತಾರೆ
ಆದರೆ ಇದು ತಪ್ಪು ಅಂತ ಹೇಳುತ್ತದೆ ವೇದ. ಏಕೆಂದರೆ ಎಲ್ಲರ ಕೈಗೆ ಕೊಟ್ಟು ಅಕ್ಷರಗಳನ್ನು ಹಾಕಿಕೊಳ್ಳುವುದರಿಂದ ನಿಮಗೆ ಯಾವುದೇ ತರಹದ ಅನುಭವ ಆಗುವುದು. ಹಿಂದಿನ ಕಾಲದಲ್ಲಿ ಅಕ್ಷತೆ ಕಾಳನ್ನು ಅತಿಯಾದ ಜ್ಞಾನವನ್ನು ಹೊಂದಿರುವಂತಹ ಋಷಿಮುನಿಗಳಿಗೆ ಮದುವೆ ಮನೆಗೆ ಆಹ್ವಾನಿಸಿ ಅವರ ಕೈಯಿಂದ ಅಕ್ಷತೆ ಕಾಳುಗಳನ್ನು ವಧುವರರಿಗೆ ಹಾಕಿಸಿಕೊಳ್ಳುತ್ತಿದ್ದರು. ಆದರೆ ಇವಾಗ ಎಲ್ಲರೂ ಕೂಡ ಅಕ್ಷತೆ ಕಾಳನ್ನು ಹಾಕಿಕೊಳ್ಳುತ್ತಿದ್ದಾರೆ.ಅಕ್ಷತೆ ಕಾಳನ್ನು ಹಾಕುವ ಅವರಿಗೆ ಅಗಾಧ ಜ್ಞಾನವಿರಬೇಕು ಹಾಗೂ ಅವರು ಪರಮಾತ್ಮನಿಗೆ ಅತಿ ಹೆಚ್ಚಾಗಿ ಮಾಡುವಂತಹ ವ್ಯಕ್ತಿಗಳಾಗಿದ್ದಾರೆ
ಅವರಿಂದ ನಿಮಗೆ ಒಳ್ಳೆಯ ಆಶೀರ್ವಾದ ಹಾಗೂ ನಿಮಗೆ ಒಳ್ಳೆಯ ಜ್ಞಾನದ ಕಡೆಗೆ ನಡೆದುಕೊಂಡು ಹೋಗಲು ಮದುವೆಯಾದ ನಂತರ ತುಂಬಾ ಹೆಲ್ಪ್ ಆಗುತ್ತದೆ. ಈ ಲೇಖನ ಮುಖಾಂತರ ಹೇಳುವುದು ಒಂದೇ ನೀವು ಎಲ್ಲರ ಹತ್ತಿರ ಅಕ್ಷತೆ ಕಾಳನ್ನು ಹಾಕಿಕೊಂಡರೆ ಒಳ್ಳೆಯದು ಆದರೆ ಕೆಲವೊಬ್ಬರ ಹಿರಿಯ ವ್ಯಕ್ತಿಗಳು ಅಥವಾ ದೇವ ಸಂಭೂತ ರಿಂದ ಅಕ್ಷತೆ ಕಾಳನ್ನು ಹಾಕಿಸಿಕೊಂಡರೆ ತುಂಬಾ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ.ನಿಮಗೇನಾದರೂ ಈ ಲೇಖನವು ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಮರೆಯಬೇಡಿ. ಯಾಕಂದರೆ ಈ ತರದ ಮಾಹಿತಿಗಳು ತುಂಬಾ ಸಿಗುವುದು ಕಡಿಮೆ ಅದರಲ್ಲೂ ಈ ಲೇಖನವನ್ನು ಅರ್ಥಮಾಡಿಕೊಂಡರೆ ಬೇರೆ ಅರ್ಥ ಮಾಡಿಸಲು ತುಂಬಾ ಬಳಕೆಯಾಗುತ್ತದೆ.